ಮಳೆಯಿಂದಾಗಿ ಬೆಲೆ ಕುಸಿದರೂ ಬಿಕರಿಯಾಗದ ಹೂವು-ಹಣ್ಣು
Team Udayavani, Oct 16, 2017, 12:16 PM IST
ಬೆಂಗಳೂರು: ಪ್ರತಿ ಹಬ್ಬದಲ್ಲೂ ಹೂವಿನ ದರ ಗಗನಕ್ಕೇರುವುದು ಸಾಮಾನ್ಯ. ಆದರೆ ದೀಪಾವಳಿ ಹಬ್ಬವಿದ್ದರೂ ಮಳೆಯ ಹಿನ್ನೆಲೆಯಲ್ಲಿ ಹೂವು-ಹಣ್ಣಿನ ವಹಿವಾಟು ಪಾತಾಳಕ್ಕಿಳಿದಿದ್ದು, ವ್ಯಾಪಾರ ಶೇ.60ರಿಂದ 65ರಷ್ಟು ಕುಸಿದಿದೆ. ಅಷ್ಟೇ ಅಲ್ಲ ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಹಣ್ಣು-ಹೂವಿನ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ. ಬೆಲೆ ಕಡಿಮೆಯಿದ್ದರೂ ಖರೀದಿಗೆ ಜನ ಆಸಕ್ತಿ ತೋರುತ್ತಿಲ್ಲ.
ದೀಪಾವಳಿ ಹಬ್ಬಕ್ಕೆ ಇನ್ನೇನು ಮೂರ್ನಾಲ್ಕು ದಿನಗಳು ಬಾಕಿ ಉಳಿದಿದ್ದು, ಕೆ.ಆರ್.ಮಾರುಕಟ್ಟೆ ಹೂವಿನ ಮಂಡಿಗಳ ಸಗಟು ಮಾರಾಟದಲ್ಲಿ ಪ್ರಸ್ತುತ ಕೆ.ಜಿ. ಮಲ್ಲಿಗೆ ಮೊಗ್ಗಿಗೆ 230ರಿಂದ 240 ರೂ.ಇದೆ. ಕಾಕಡ ಹೂವಿಗೆ 150 ರೂ. ಇದ್ದು, ಸುಗಂಧರಾಜ ಕೆಜಿ ಹೂವಿಗೆ 40ರಿಂದ 50 ರೂ. ಇದೆ. ಚೆಂಡು ಹೂವಿನ ದರ ಕೇವಲ 40 ರೂ., ಬಟನ್ ರೋಸ್ ಕೆ.ಜಿಗೆ 40ರಿಂದ 50 ರೂ. ಹಾಗೂ ಉತ್ತಮ ಗುಣಮಟ್ಟದ ಸೇವಂತಿಗೆ ಹೂವಿನ ಬೆಲೆ ಕೆ.ಜಿಗೆ 80ರಿಂದ 100 ರೂ. ಇದೆ.
ಗುಣಮಟ್ಟವಿಲ್ಲದ ಸೇವಂತಿಗೆ ಹೂಗಳನ್ನು ಕೆ.ಜಿಗೆ 20ರಿಂದ 30 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಹೂವಿನ ವ್ಯಾಪಾರಿ ದಿವಾಕರ್ ತಿಳಿಸಿದ್ದಾರೆ. ಚಿಲ್ಲರೆ ಮಾರಾಟದಲ್ಲಿ ಹೂವಿನ ದರ ಇದಕ್ಕೆ ದುಪ್ಪಟ್ಟು ಇದ್ದು, ಒಂದು ಮಾರು ಸೇವಂತಿಗೆ ಹೂವಿಗೆ 10 ರೂ. ಇದೆ. ಗುಣಮಟ್ಟದ ಸೇವಂತಿಗೆ ಮಾರಿಗೆ 30 ರೂ. ಇದ್ದು, ಮಾರುದ್ದ ಮಲ್ಲಿಗೆ ಹೂವನ್ನು 30ರಿಂದ 40 ರೂ.ಗೆ ಮಾರಾಟ ಮಾಡಲಾಗುತ್ತಿದೆ.
“ದೀಪಾವಳಿಯಲ್ಲಿ ಪಟಾಕಿಗೆ ಇರುವ ಬೇಡಿಕೆ ಹೂವಿಗೆ ಇರದು. ಹಬ್ಬಕ್ಕೆ ಎರಡೇ ದಿನ ಬಾಕಿಯಿದ್ದರೂ ಹೂವನ್ನು ಕೇಳುವವರೇ ಇಲ್ಲ. ಜತೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಗುಣಮಟ್ಟದ ಹೂವು ಸರಬರಾಜಾಗುತ್ತಿಲ್ಲ. ಹೀಗಾಗಿ ಮುಂಗಡವಾಗಿ ಹೂವು ಖರೀದಿಸುವವರೇ ಇಲ್ಲದಂತಾಗಿದೆ. ಹಬ್ಬದ ದಿನ ಸ್ವಲ್ಪ ಮಟ್ಟಿಗೆ ವ್ಯಾಪಾರ ಆಗುವ ನಿರೀಕ್ಷೆ ಇದೆ,’ ಎನ್ನುತ್ತಾರೆ ಹೂವಿನ ವ್ಯಾಪಾರಿ ಶಿವಕುಮಾರ್ ಕಂಕಿ.
ಹಣ್ಣು ಮಾರಾಟಕ್ಕೂ ಮಳೆ ಮಾರಕ: ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮಳೆಯಿಂದಾಗಿ ಹಣ್ಣಿನ ವ್ಯಾಪಾರವೂ ಕುಸಿದಿದೆ. ಹೊಸೂರು ಹಣ್ಣಿನ ಮಾರುಕಟ್ಟೆಯಿಂದ ತಮಿಳುನಾಡಿನ ಸೇಲಂ, ಕೊಯಮತ್ತೂರು, ಮಧುರೈ, ತಿರುಪ್ಪೂರು, ಆಂಧ್ರಪ್ರದೇಶ, ಕೇರಳ (ಬಂದ್ ಹಿನ್ನೆಲೆ) ಸೇರಿದಂತೆ ರಾಜ್ಯದ ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಇತ್ಯಾದಿ ಕಡೆಗಳಿಗೆ ಸರಬರಾಜಾಗುತ್ತಿದ್ದ ಹಣ್ಣಿನ ಪ್ರಮಾಣದಲ್ಲಿ ಶೇ.60ರಿಂದ 70ರಷ್ಟು ಇಳಿಕೆಯಾಗಿದೆ.
ಹೊಸೂರು ಹಣ್ಣಿನ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮೂಸಂಬಿ ದರ ಪ್ರತಿ ಕೆ.ಜಿಗೆ 30ರಿಂದ 35 ರೂ. ಇದೆ. ಗಾತ್ರಕ್ಕೆ ಅನುಗುಣವಾಗಿ 10ರಿಂದ 35 ರೂ.ವರೆಗೂ ನಾಲ್ಕು ದರ್ಜೆಯ ಮೂಸಂಬಿಗಳು ಲಭ್ಯವಿವೆ. 25 ಕೆ.ಜಿ ಸೇಬು ಬಾಕ್ಸ್ಗೆ 1700 ರೂ. ಇದ್ದ ಬೆಲೆ ಈಗ 1100 ರೂ.ಗೆ ಇಳಿದಿದೆ. “ಪಪ್ಪಾಯ ಕೆ.ಜಿಗೆ 10ರಿಂದ 11 ರೂ. ಇದ್ದು, ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿಗೆ 25ರಿಂದ 33 ರೂ. ನಂತೆ ಮಾರಾಟ ಮಾಡಲಾಗುತ್ತಿದೆ.
ಕಲ್ಲಂಗಡಿ ಕೆ.ಜಿಗೆ 10ರಿಂದ 13 ರೂ. ಇದ್ದು, ಅನಾನಸ್ ಕೆ.ಜಿಗೆ 20 ರೂ., ದಾಳಿಂಬೆ ಗಾತ್ರಕ್ಕೆ ಅನುಸಾರವಾಗಿ 25ರಿಂದ 65 ರೂ. ವರೆಗೂ ಇದೆ. ಅತ್ಯುತ್ತಮ ಗುಣಮಟ್ಟದ ದಾಳಿಂಬೆಯನ್ನು ಕೆ.ಜಿಗೆ 70ರಿಂದ 80 ರೂ.ಗೆ ಮಾರಲಾಗುತ್ತಿದೆ,’ ಎಂದು ಬೆಂಗಳೂರು ಫ್ರೂಟ್ ಕಮಿಷನ್ಸ್ ಏಜೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿದ್ದಾರೆಡ್ಡಿ ಮಾಹಿತಿ ನೀಡಿದ್ದಾರೆ.
ಬಾಳೆ ಮಂಡಿಯಲ್ಲಿ ತಮಿಳುನಾಡು ಏಲಕ್ಕಿ ಬಾಳೆ ಪ್ರತಿ ಕೆ.ಜಿಗೆ 40ರಿಂದ 45 ರೂ. ಇದ್ದು, ಸ್ಥಳೀಯ ಏಲಕ್ಕಿ ಬಾಳೆಗೆ 50ರಿಂದ 55 ರೂ. ಬೆಲೆ ಇದೆ. ಪಚ್ಚಬಾಳೆ ಕೆಜಿಗೆ 18ರಿಂಧ 20 ರೂ.ಗೆ ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಏಲಕ್ಕಿ ಬಾಳೆಗೆ 60ರಿಂದ 65 ರೂ.ಇದೆ.
ಹಾಪ್ಕಾಮ್ಸ್ ದರ(ಕೆಜಿಯಂತೆ)
-ಏಲಕ್ಕಿ ಬಾಳೆ 77 ರೂ.
-ಪಚ್ಚಬಾಳೆ 26 ರೂ.
-ನೇಂದ್ರ ಬಾಳೆ 65 ರೂ.
-ಚಂದ್ರ ಬಾಳೆ 80 ರೂ.
-ಸಪೋಟಾ 38 ರೂ.
-ಮೂಸಂಬಿ 60ರೂ.
-ಕಿತ್ತಳೆ ಹಣ್ಣು 72 ರೂ.
-ಪಪ್ಪಾಯ(ನಾಟಿ) 24 ರೂ.
-ಪಪ್ಪಾಯ ರೆಡ್ ಇಂಡಿಯನ್ 32 ರೂ.
-ಅನಾನಸ್ 46 ರೂ.
-ದಾಳಿಂಬೆ 116 ರೂ.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flipkart Big Billion Day ಸೆ. 27 ರಿಂದ ಆರಂಭ
Bengaluru: ನಮ್ಮ ಕ್ಲಿನಿಕ್ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Bengaluru: ಉದ್ಯಮಿಗೆ ಹನಿಟ್ರ್ಯಾಪ್ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್
AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ
Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.