ಪಟಾಕಿ ಸದ್ದಿಲ್ಲ: ಆಕಾಶ ದೀಪಕ್ಕೆ ಬರವಿಲ್ಲ


Team Udayavani, Oct 20, 2017, 10:53 AM IST

gul-3.jpg

ವಾಡಿ: ಎಂದಿನಂತೆ ಗುರುವಾರ ಪಟ್ಟಣದ ಮಾರುಕಟ್ಟೆ ಜನರಿಂದ ತುಂಬಿ ಗಿಜಿಗುಡುತ್ತಿತ್ತು. ಎಲ್ಲೆಡೆ ಪಟಾಕಿಗಳ ಅಂಗಡಿಗಳ ಬೀಡು. ನೇತಾಡುವ ಸಾಲು ಸಾಲು ಆಕಾಶ ದೀಪಗಳ ರಾಶಿ. ಹೂ ಹಣ್ಣು ಮಾರುವವರ ಚೀರಾಟ ಒಂದೆಡೆಯಾದರೆ, ದೀಪಗಳ ಪಣತಿ, ಬಾಳೆದಿಂಡು, ತೆಂಗಿನಕಾಯಿ ಎಲೆಗಳ ಖರೀದಿಗೆ ನಿಂತ ನೂರಾರು ಜನರು ಇನ್ನೊಂದೆಡೆ. ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದವರ ಪೈಕಿ ನಾರಿಯರದ್ದೇ ಸಂಖ್ಯೆಯೇ ಹೆಚ್ಚಿದ್ದರಿಂದ ಮಾರುಕಟ್ಟೆ ರಂಗುರಂಗಾಗಿ ಕಂಗೊಳಿಸುತ್ತಿತ್ತು.

ಬೆಲೆ ಏರಿಕೆಯ ಮಧ್ಯೆಯೂ ಬೆಳಕಿನ ಹಬ್ಬ ದೀಪಾವಳಿಯ ಖರೀದಿ ಜೋರಾಗಿತ್ತು. ಸಂಕಟದ ಮಧ್ಯೆಯೂ ಜನರ ಸಂಭ್ರಮ ಎದ್ದು ಕಾಣಿಸಿತು. ದೀಪಾವಳಿ ಹಬ್ಬ ಎಂದರೆ ಸಾಮಾನ್ಯವಾಗಿ ಎಲ್ಲೆಡೆ ಪಟಾಕಿಗಳ ಸದ್ದೇ ಕೇಳಿಬರುತ್ತದೆ. ವಿಪರ್ಯಾಸವೆಂದರೆ ಈ ಬಾರಿ ಪಟಾಕಿಗಳ ಸದ್ದಡಗಿ, ಸಾಲು ದೀಪಗಳ ಬೆಳಕು ಮೇಳೈಸಿದ್ದು ಸ್ಪಷ್ಟವಾಗಿ ಕಾಣಿಸಿತು. ಆಕಾಶ ದೀಪಗಳ ಖರೀದಿಗೂ ಜನರು ಮೊದಲ ಆದ್ಯತೆ ನೀಡಿದ್ದು, ಬೆಳಕಿನ ಹಬ್ಬದಲ್ಲಿ ಸಿಡಿಮದ್ದುಗಳ ಪಟಾಕಿ ಸಿಡಿಯದೇ ತಣ್ಣಗಾಗಿತ್ತು.

ಸಿಮೆಂಟ್‌ ನಗರಿ ವಾಡಿ ಪಟ್ಟಣದಲ್ಲಿ ಪಟಾಕಿ ಖರೀದಿಗೆ ಬರ ಎದ್ದು ಕಾಣಿಸಿತು. ಮಣ್ಣಿನಿಂದ ತಯಾರಿಸಲಾಗಿದ್ದ ದೀಪಗಳ ಪಣತಿಗಳಿಗೆ ಬೇಡಿಕೆ ಹೆಚ್ಚಿತ್ತು ಎನ್ನಬಹುದು. ಅಪಾಯಕಾರಿ ಪಟಾಕಿಗಳ ಖರೀದಿ ಕಳೆಗುಂದಿದ್ದರಿಂದ ಪಟಾಕಿ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತೆ ಆಯಿತು.  ಕಾಸಿಲ್ಲದೆ ನಲುಗಿದ ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ ದೀಪಾವಳಿಯ ಬೆಳಕಿಗೆ ಕೊರತೆಯುಂಟಾಗಲಿಲ್ಲ. ದೇವರನ್ನು ಪೂಜಿಸಿ, ಬಂಧುಗಳಿಗೆ ಸಿಹಿ ಹಂಚಿ, ಮನೆಯ ಬಾಗಿಲುಗಳಿಗೆ ದೀಪಗಳಿಂದ ಶೃಂಗರಿಸಿ ಸರಳವಾಗಿ ದೀಪಾವಳಿ ಆಚರಿಸಿದ್ದು ಬಹಿರಂಗ ಸತ್ಯದಂತಿತ್ತು. ಅಪಾಯ ತಂದಿಡುವ ಕಿವಿಗಡಚಿಕ್ಕುವ ಪಟಾಕಿಗಳ ತಂಟೆಗೆ ಹೋಗದೆ ಸುರ್‌ಸುರ್‌ ಬತ್ತಿಯ ಬೆಳಕು ಮಕ್ಕಳ ಸಂಭ್ರಮ ಹೆಚ್ಚಿಸಿತ್ತು. 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.