ಪಟಾಕಿ ಕಿಡಿಗೆ ಕಣ್ಣಿಗಾವರಿಸಿತು ಕತ್ತಲು


Team Udayavani, Oct 20, 2017, 12:03 PM IST

pataki-kidi.jpg

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಜನರು ಎಷ್ಟು ಎಚ್ಚರಿಕೆ ವಹಿಸಿದರೂ ಅನಾಹುತಗಳು ಮಾತ್ರ ಕಡಿಮೆ ಆಗುತ್ತಿಲ್ಲ, ಈ ವರ್ಷವೂ ಸಹ ಹಲವರ ಬದುಕಿನಲ್ಲಿ ಕತ್ತಲು ಆವರಿಸಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸಿದವರಷ್ಟೇ ಅಲ್ಲದೇ, ಯಾರೋ ಸಿಡಿಸಿದ ಪಟಾಕಿ ತಗುಲಿ ಅನೇಕರು ಗಾಯಗೊಂಡ ಉದಾಹರಣೆಗೂ ಹೆಚ್ಚಾಗಿವೆ.

ಪಟಾಕಿ ಸಿಡಿತ ಸಂದರ್ಭದಲ್ಲಿ ಉಂಟಾದ ಅನಾಹುತಕ್ಕೆ ನಗರದ ವಿವಿಧ ಭಾಗಗಳಲ್ಲಿ ಸುಮಾರು 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪ್ರಾಪ್ತ ಮಕ್ಕಳು, ವಯಸ್ಕರು ಕೂಡ ಇದರಲ್ಲಿ ಸೇರಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಮಿಂಟೋ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳು ಹಾಗೂ 25 ವರ್ಷದ ಯುವಕ ಚಿಕಿತ್ಸೆಗೆ ದಾಖಲಾಗಿದ್ದರು. ಈ ಪೈಕಿ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದುಕೊಂಡು ಗುರುವಾರ ಮನೆಗೆ ತೆರಳಿದ್ದು, ಶಿವಾಜಿನಗರದ ಪ್ರದೀಪ್‌ಕುಮಾರ್‌ (14) ಕಣ್ಣಿಗೆ ಗಂಭೀರ ಪೆಟ್ಟಾಗಿದೆ. 

ಆಡುಗೋಡಿಯ ಶಾರೂಕ್‌ (25), ತಮಿಳುನಾಡಿನ ಮಿಥುನ್‌ (7) ಎಂಬುವವರ ಕಣ್ಣುಗಳಿಗೆ ಗಂಭೀರ ಪೆಟ್ಟಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರಿ ಸಿದ್ದಾರೆ. ಜೊತೆಗೆ ಪಟಾಕಿ ಸಿಡಿತದಿಂದ ತೊಡೆಯ ಭಾಗ ಶೇ. 40 ರಷ್ಟು ಸುಟ್ಟಿರುವ ಆಂಧ್ರಪ್ರದೇಶದ ಬಾಲು (7 ) ಎಂಬ ಬಾಲಕನ ಸ್ಥಿತಿಯೂ ಗಂಭೀರವಾಗಿದೆ.

ಉಳಿದಂತೆ ಪಟಾಕಿ ಸಿಡಿತದಿಂದ ಸಣ್ಣಪುಟ್ಟದಾಗಿ ಗಾಯಗೊಂಡಿದ್ದ ಹಲವು ಮಂದಿ ನಗರದ ನಾರಾಯಣ ನೇತ್ರಾಲಯದ ವಿವಿಧ ಶಾಖೆಗಳ ಆಸ್ಪತ್ರೆಗಳಲ್ಲಿ 11 ಮಂದಿ, ಜಯನಗರದ ನೇತ್ರಧಾಮ 2, ವಿಜಯ ನೇತ್ರಾಲಯದಲ್ಲಿ 2, ಶಂಕರ ಕಣ್ಣಿನ ಆಸ್ಪತ್ರೆ ಒಬ್ಬರು ಚಿಕಿತ್ಸೆ ಪಡೆದುಕೊಂಡು ಡಿಸಾcರ್ಜ್‌ ಆಗಿದ್ದಾರೆ.

ಮಗು ಜೇಬಲ್ಲಿಟ್ಟುಕೊಂಡಿದ್ದ ಪಟಾಕಿ ಸಿಡಯಿತು: “ಮಿಂಟೋ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮುಳಬಾಗಿಲು ಸಮೀಪದ ರಾಮಸಮುದ್ರದ ಬಾಲು (7) ಇವನದ್ದು ಮತ್ತೂಂದು ದಾರುಣ ಕತೆ. ಕೂಲಿಕೆಲಸ ಮಾಡುವ ದಂಪತಿಯ ಮಗನಾದ ಬಾಲು ಬುಧವಾರ ಸಂಜೆ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ತಂದಿದ್ದ. ಈ ವಿಚಾರ ಪೋಷಕರಿಗೂ ತಿಳಿಸಿರಲಿಲ್ಲ.

ಸಂಜೆ 5 ಗಂಟೆ ಸುಮಾರಿಗೆ ನೆರೆಮನೆಯ ಹುಡುಗರ ಜೊತೆ ಪಟಾಕಿ ಸಿಡಿಸುವಲ್ಲಿ ಮುಳುಗಿದ್ದ ಬಾಲು, ನಿಕ್ಕರ್‌ ಜೇಬಿನಲ್ಲಿ ಕೆಲವು ಪಟಾಕಿಗಳನ್ನು ಇಟ್ಟುಕೊಂಡಿದ್ದ. ಒಂದನ್ನು ಹೊಡೆಯಲು ಹೋಗಿ ಅದು ಸಿಡಿದಿಲ್ಲದ ಕಾರಣ, ಪಟಾಕಿ ಸರಿಯಾಗಿ ಹತ್ತಿಲ್ಲ ಎಂದುಕೊಂಡು ತನ್ನ ನಿಕ್ಕರ್‌ ಜೇಬಿಗೆ ಹಾಕಿಕೊಂಡಿದ್ದಾನೆ.

ಆದರೆ, ಅದೇ ಪಟಾಕಿ ಕೆಲವೇ ಕ್ಷಣಗಳಲ್ಲಿ ಸ್ಫೋಟಿಸಿದ ಪರಿಣಾಮ ಬಾಲುವಿನ ತೊಡೆ, ತೊಡೆ ಭಾಗವೆಲ್ಲಾ ಸುಟ್ಟು ಹೋಗಿದೆ ಎಂದು ಹೇಳುವಾಗ ಅವರ ಚಿಕ್ಕಪ್ಪ ಮುನಿರೆಡ್ಡಿ ಗದ್ಗಿದಿತರಾದರು. ನಮ್ಮ ಅಣ್ಣನಿಗೆ ಒಬ್ಬನೇ ಮಗ, ತಿಂಡಿ ತಿನಿಸು ಕೊಟ್ಟಿದ್ದ ಕಾಸಿನಲ್ಲಿಯೇ ಪಟಾಕಿ ತೆಗೆದುಕೊಂಡು ಬಿಟ್ಟಿದ್ದಾನೆ. ವೈದ್ಯರು ಏನು ಹೇಳುತ್ತಿಲ್ಲ ಚಿಕಿತ್ಸೆ ನೀಡುತ್ತಿದ್ದೇವೆ ಎನ್ನುತ್ತಾರೆ ಎಂದು ಕಣ್ಣೀರು ಹಾಕಿದರು.

ಕಣ್ಣಿಗೆ ಚುಚ್ಚಿದ ರಾಕೆಟ್‌!: ಅಪರಿಚಿತರು ಹಬ್ಬದ ಸಂಭ್ರಮದಲ್ಲಿ ಹಚ್ಚಿದ್ದ ರಾಕೆಟ್‌ ಕಣ್ಣಿಗೆ ಚುಚ್ಚಿ ಆಡುಗೋಡಿಯ ಶಾರೂಕ್‌ ಎಂಬ ಯುವಕ ಕಣ್ಣು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಆಡುಗೋಡಿಯ ಎಲ್‌. ಆರ್‌.ನಗರದ ನಿವಾಸಿ ಶಾರೂಕ್‌ ಬುಧವಾರ ಸಂಜೆ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕಿದ್ದಂತೆ ಮೇಲಿನಿಂದ ಬಂದ ರಾಕೆಟ್‌ ಪಟಾಕಿ ಕಣ್ಣಿಗೆ ಚುಚ್ಚಿಕೊಂಡಿದೆ.

ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೇಟಿಂಗ್‌ ಕೆಲಸ ಮಾಡುವ ಶಾರೂಕ್‌ಗೆ ಇಬ್ಬರು ಮಕ್ಕಳಿದ್ದು, ಮನೆಗೆ ಆಧಾರ ಸ್ಥಂಭವಾಗಿದ್ದ. ಇದೀಗ ಯಾರೋ ಸಂಭ್ರಮಕ್ಕೆ ಹಚ್ಚಿದ ಪಟಾಕಿ ನಮ್ಮ ಮನೆಯಲ್ಲಿ ಕತ್ತಲು ತರಿಸಿದೆ. ಮಗನಿಗೆ ದೃಷ್ಟಿ ಬರುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ತಾಯಿ ಅಳಲು ತೋಡಿಕೊಂಡರು.

ಅದೇ ರೀತಿ ಗೆಳೆಯರ ಜೊತೆ ಮಾತನಾಡುತ್ತಿದ್ದ ವೇಳೆ ಪಟಾಕಿ ಕಿಡಿ ತಾಕಿ ಶಿವಾಜಿನಗರದ ಬಾಲಕ ಪ್ರದೀಪ್‌ ಕುಮಾರ್‌ (14) ಎಡಗಣ್ಣು ದೃಷ್ಟಿ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಈಗಾಗಲೇ ತಪಾಸಣೆ ನಡೆಸಿರುವ ವೈದ್ಯರು ನಾಳೆ ದೃಷ್ಟಿ ಬರುವ ಬಗ್ಗೆ  ಸದ್ಯ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಹೂ ಕುಂಡ ಬಗ್ಗಿ ನೋಡಲು ಹೋಗಿ ಮುಖ ಸುಟ್ಟಿತು: ಬೆಂಕಿ ಹಚ್ಚಿದ ಹೂ ಕುಂಡ ಪಟಾಕಿ ಹತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಹೋದ ತಮಿಳುನಾಡು ಮೂಲದ ಮಿಥುನ್‌ ಎಂಬ ಬಾಲಕ ಮುಖ ಸುಟ್ಟು ಗಂಭೀರ ಗಾಯಗೊಂಡಿದ್ದಾನೆ. ವೆಲ್ಲೂರು ಜಿಲ್ಲೆಯ ಮಿಥುನ್‌ ಪರಿಸ್ಥಿತಿಯೂ  ಗಂಭೀರವಾಗಿದ್ದು ಮಿಂಟೋ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ.

ಟಾಪ್ ನ್ಯೂಸ್

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

jameer

Waqf Boardನಿಂದ ಪ್ರತಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜು: ಸಚಿವ ಜಮೀರ್‌

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.