ಪ್ರೊಕಬಡ್ಡಿಯ ಮ್ಯಾಸ್ಕಾಟ್‌ ಮ್ಯಾನ್‌


Team Udayavani, Oct 28, 2017, 3:55 AM IST

1-b.jpg

ಪ್ರೊಕಬಡ್ಡಿ ಎಂದರೆ ಬರಿ ಆಟವಲ್ಲ. ಧುನಿಯಾಕಾ ಧಡ್ಕನ್‌. ಮನೋರಂಜನೆಯ ಸವಿ. ಕಬಡ್ಡಿಗೆ ಒಂದು ನೆಲೆ, ವಿಶ್ವದಲ್ಲೇ ಹೆಗ್ಗುರುತು ಸಿಗಬೇಕು ಎನ್ನುವ ಆಶಯದೊಂದಿಗೆ ಪ್ರೊಕಬಡ್ಡಿ ಹುಟ್ಟು ಹಾಕಲಾಯಿತು. 

ಕಬಡ್ಡಿಯ ನ್ನು ಕೇವಲ ಆಟವಾಗಿ ನೋಡದೆ ಅಭಿಮಾನಿಗಳ ರಂಜನೆಗಾಗಿ ಬಗೆಬಗೆಯ ಮನೋರಂಜನಾ ಕಾರ್ಯಕ್ರಮಗಳನ್ನೂ ಶುರು ಮಾಡಲಾಯಿತು. ಅಂತಹುದರಲ್ಲಿ ಮುಖ್ಯವಾಗಿದ್ದು ಮ್ಯಾಸ್ಕಾಟ್‌ ಕೂಡ ಒಂದು. ಪ್ರತಿ ತಂಡಗಳಿಗೂ ಅದರದ್ದೇ ಆದ ಇತಿಹಾಸ ಇರುತ್ತದೆ. ಈ ಹಿನ್ನಲೆಯಲ್ಲಿ ಮ್ಯಾಸ್ಕಾಟ್‌ (ಗೊಂಬೆ)ಗಳನ್ನು ತಯಾರು ಮಾಡಲಾಯಿತು. ಪ್ರತಿ ಫ್ರಾಂಚೈಸಿಗಳು ಪೊ›ಕಬಡ್ಡಿಯಲ್ಲಿ ಮ್ಯಾ ಸ್ಕಾಟ್‌ ಅನ್ನು ಬಳಸಿಕೊಂಡರು. ಇದು ಬಾರಿ ಜನಪ್ರಿಯವಾಯಿತು. ಇಂತಹ ಪೂರ್ಣಕಾಲಿಕ ಮ್ಯಾಸ್ಕಾಟ್‌ ಅನ್ನು ದೇಶದಲ್ಲಿ ಮೊದಲ ಸಲ ಕ್ರೀಡಾಕೂಟವೊಂದರಲ್ಲಿ ಧರಿಸಿದ್ದು ಎಂದರೆ ವಿವೇಕ್‌ ಗಾಯಕ್ವಾಡ್‌. ಅವರು ಎಂಟು ಕೆ.ಜಿಗೂ ಹೆಚ್ಚು ತೂಕವಿರುವ ಮ್ಯಾಸ್ಕಾಟ್‌ ವೇಷ ಹಾಕುತ್ತಾರೆ. ಡ್ಯಾನ್ಸ್‌ ಮಾಡಿ ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ರಂಜಿಸುತ್ತಾರೆ. ಎಷ್ಟೋ ಮಕ್ಕಳಿಗೆ ಕೂಟದ ವೇಳೆ ಇವರನ್ನು ನೋಡುವುದೆಂದರೆ ದೊಡ್ಡ ಖುಷಿ. 

ಯಾರಿವರು ವಿವೇಕ್‌?
ವಿವೇಕ್‌ ಗಾಯಕ್ವಾಡ್‌ ಮೂಲತಃ ಮುಂಬೈ ನವರು. ಅವರಿಗೆ ಶಿಕ್ಷಣದಲ್ಲಿ ಇದ್ದ ಆಸಕ್ತಿ ಅಷ್ಟ ಕ್ಕಷ್ಟೇ. ಮುಂದೆ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ಬಾಲ್ಯದಲ್ಲೇ ಅವರಿಗೆ ಡ್ಯಾನ್ಸ್‌ ಬಗ್ಗೆ ಅಪಾರ ಆಸಕ್ತಿ ಇತ್ತು. ಹೀಗಾಗಿ ಡ್ಯಾನ್ಸ್‌ ಬಗ್ಗೆಯೆ ಹೆಚ್ಚಿನ ಗಮನವಹಿಸಿದರು. ಮುಂದೆ ಅವರಿಗೆ ಅಮೆರಿಕದಲ್ಲಿ ವಿಶ್ವ ಮಟ್ಟದ ಡ್ಯಾನ್ಸ್‌ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಆದರೆ ಅಷ್ಟು ದೂರ ಹೋಗಲು ಇವರ ಬಳಿ ಹಣ ಇರಲಿಲ್ಲ. ಸ್ನೇಹಿತರು. ತನ್ನವರು ಯಾರೂ ಅವರ ಕೈಹಿಡಿಯಲಿಲ್ಲ, ಬಳಿಕ ಅವರು ಸಾಲ ಮಾಡಿ ಅಮೆರಿಕಕ್ಕೆ ತೆರಳಿದರು. ಅದರಲ್ಲಿ ಭಾಗವಹಿಸಿ ಬಂದ ಬಳಿಕ ಅವರಿಗೆ ಅವಕಾಶ ಬರಲು ಶುರುವಾಯಿತು. ಅದರಲ್ಲೂ ಮುಖ್ಯವಾಗಿ ಸಿಕ್ಕಿದ್ದು ಪೊ›ಕಬಡ್ಡಿಯಲ್ಲಿ ಮ್ಯಾ ಸ್ಕಾ ಟ್‌ ಆಗಿ ರಂಜಿಸುವ ಸುವರ್ಣಾವಕಾಶ. ಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ಅವರು ಇಂದು ಪೊ›ಕಬಡ್ಡಿ ಕುಟುಂಬದ ಒಂದು ಭಾಗವೇ ಆಗಿದ್ದಾರೆ. ಜನರನ್ನು ರಂಜಿಸುವುದು, ಆಡುವ ತಂಡವನ್ನು ಮ್ಯಾ ಸ್ಕಾ ಟ್‌ನೊಂದಿಗೆ ಪೋ›ತ್ಸಾಹಿಸುವುದು ಅವರ ಮುಖ್ಯ ಕೆಲಸವಾಗಿದೆ.  

ವಿವೇಕ್‌ರದ್ದು ತೂಕದ ಡ್ಯಾನ್ಸ್‌
ಒಂದು ದಿನ ಎರಡು ಪಂದ್ಯ. ಉಸಿರು ಬಿಗಿ ಹಿಡಿಸುವ ವಾತಾವರಣ. ಮ್ಯಾ ಸ್ಕಾ ಟ್‌ ಧರಿಸುವುದರಿಂದದೇಹಕ್ಕೆ ಸರಿಯಾಗಿ ಗಾಳಿಯೂ ಸಿಗುವುದಿಲ್ಲ. ಬೆವರು ಕಿತ್ತು ಬರುವಂತಹ ವಾತಾವರಣ. ಇದರ ನಡುವೆ 8 ಕೆ.ಜಿಗೂ ಹೆಚ್ಚು ತೂಕವಿರುವ ಮ್ಯಾ ಸ್ಕಾ ಟ್‌ ಧರಿಸಿ ಡ್ಯಾನ್ಸ್‌ ಮಾಡಬೇಕು. ಅಭಿಮಾನಿಗಳನ್ನುರಂಜಿಸಬೇಕು. ಇಷ್ಟೆಲ್ಲ ಸವಾಲುಗಳ ನಡುವೆವಿವೇಕ್‌ ಮಿಂಚುತ್ತಾರೆ ಎನ್ನುವುದು ವಿಶೇಷ.

ವಿವಿಧ ತಂಡಗಳಿಗೆ ಮ್ಯಾಸ್ಕಾಟ್‌
ಬೆಂಗಳೂರು ಬುಲ್ಸ್‌, ಬೆಂಗಾಲ್‌ ವಾರಿಯರ್, ದಬಾಂಗ್‌ ದಿಲ್ಲಿ,  ಗುಜರಾತ್‌ ಫಾರ್ಚೂನ್‌ಜೈಂಟ್ಸ್‌, ಹರ್ಯಾಣ ಸ್ಟೀಲರ್, ತೆಲುಗು ಟೈಟಾನ್ಸ್‌ ಹಾಗೂ ಯುಪಿ ಯೋಧಾ ತಂಡಗಳಿಗೆ ಮ್ಯಾ ಸ್ಕಾ ಟ್‌ ಆಗಿ ಕೆಲಸ ಮಾಡಿದ್ದಾರೆ. 

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.