ಪಶುಭಾಗ್ಯ ಯೋಜನೆ: ಸಹಾಯಧನ
Team Udayavani, Oct 29, 2017, 5:08 PM IST
ಬಂಟ್ವಾಳ: ಪಶು ಸಂಗೋಪನ ಇಲಾಖೆಯಿಂದ ನೀಡಲಾಗುವ ಪಶುಭಾಗ್ಯ ಸಹಾಯಧನದ ಚೆಕ್ 24 ಲಕ್ಷ ರೂ.ನ್ನು ಅ. 28ರಂದು ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ 92 ಮಂದಿ ಫಲಾನುಭವಿಗಳಿಗೆ ವಿತರಿಸಿದರು.
ರಾಜ್ಯ ಸರಕಾರವು ರೈತಾಪಿ ವರ್ಗದ ಹಿತಚಿಂತನೆಯಿಂದ ಜಾನುವಾರು, ಕೋಳಿ, ಆಡು ಸಹಿತ ಇತರ ಉದ್ದೇಶದ ಸಾಕುಪ್ರಾಣಿಗಳ ನಿರ್ವಹಣೆಗಾಗಿ ನೀಡುವ ಇಂತಹ ಸಹಾಯಧನವು ರೈತರಿಗೆ ಇನ್ನಷ್ಟು ಪ್ರೇರಣೆಗಾಗಿ, ಸಾಕು ಪ್ರಾಣಿಗಳನ್ನು ಸಾಕಲು ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುತ್ತಿದೆ ಎಂದರು.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಯೋಜನೆಯನ್ನು ಸರಿಯಾಗಿ ಅನುಷ್ಠಾನಿಸಿ, ಮುಂದಿನ ವರ್ಷಕ್ಕೆ ಇನ್ನಷ್ಟು ಹೆಚ್ಚಿನ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು. ಜನರಿಗೆ ಜಾನುವಾರು, ಕೋಳಿ, ಆಡು ಸಾಕಲು ಇನ್ನಷ್ಟು ಪ್ರೇರಣೆ ಆಗಬೇಕು. ಜನರು ಇದರಿಂದ ನಷ್ಟವನ್ನು ಹೊಂದಬಾರದು ಎಂದು ಸಹಾಯಧನ ವಿತರಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯ ಹೈದರ್ ಕೈರಂಗಳ, ಮಾಜಿ ಸದಸ್ಯ ಎಫ್ರೇಂ ಸಿಕ್ವೇರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಪಶು ಸಂಗೋಪನ ಇಲಾಖೆಯ ಶ್ರೀಮಂದರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಪಶುಸಂಗೋಪನ ಇಲಾಖೆಯ ಉಪ ನಿರ್ದೇಶಕ ಡಾ| ಹೆನ್ರಿ ಲಸ್ರಾದೋ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಡಾ| ಪ್ರಸನ್ನ ಕುಮಾರ್ ಟಿ.ಜಿ. ವಂದಿಸಿದರು. ಪಶುವೈದ್ಯಾಧಿಕಾರಿ ಡಾ| ರವಿ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ
Mangaluru: ಸೈಟ್ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್ ವಿರುದ್ಧ ಮಹಿಳೆ ದೂರು
Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ
ನನ್ನ ಜತೆ ಬರದಿದ್ದರೆ 24 ತುಂಡು ಮಾಡುವೆ:ಬೆದರಿಕೆ ಪ್ರಕರಣ-ಆತಂಕದಿಂದ ಯುವತಿ ಆತ್ಮಹತ್ಯೆ ಯತ್ನ
Paduperar: ಈ ಬಾರಿ ರಾಮ ಮಂದಿರ ಗೂಡುದೀಪ!
MUST WATCH
ಹೊಸ ಸೇರ್ಪಡೆ
Inflation; ಬಡವರ ಕನಸುಗಳನ್ನು ಕಸಿದುಕೊಳ್ಳಲಾಗಿದೆ: ವಿಡಿಯೋ ಹಂಚಿಕೊಂಡ ರಾಹುಲ್
Defamation case; ಸಂಜಯ್ ರಾವತ್ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು, ಶಿಕ್ಷೆ ಅಮಾನತು
Maharashtra Election; 5 ಸೀಟು ಕೊಡಿ, ಇಲ್ಲದಿದ್ದರೆ 25 ರಲ್ಲಿ ಹೋರಾಟ ಎಂದ ಎಸ್ ಪಿ
Germany visas; ಭಾರತೀಯ ಉದ್ಯೋಗಿಗಳಿಗೆ 20,000 ದಿಂದ 90,000ಕ್ಕೆ ಏರಿಕೆ: ಪ್ರಧಾನಿ ಮೋದಿ
Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.