ಕೇರಳದತ್ತ ವಾಲಿದೆ ಲಕ್ಷದ್ವೀಪದ ವಾಣಿಜ್ಯ ಉದ್ಯಮ!


Team Udayavani, Oct 30, 2017, 3:28 PM IST

30-Mng-11.jpg

ಮಹಾನಗರ: ಕೆಲವು ವರ್ಷಗಳ ಹಿಂದೆ ಲಕ್ಷದ್ವೀಪದ ಜನತೆ ಮಂಗಳೂರೇ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇದು ಮಂಗಳೂರಿನ ಅಭಿವೃದ್ಧಿಗೂ ಪೂರಕವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾವುದೋ ಕಾರಣಕ್ಕೆ ಲಕ್ಷದ್ವೀಪದತ್ತ ವಾಲಿದ್ದಾರೆ. ಮಂಗಳೂರಿನ ಜತೆ ತಮ್ಮ ವ್ಯವಹಾರವನ್ನು ಕಡಿಮೆಗೊಳಿಸಿದ್ದಾರೆ.

ಈ ನಿಟ್ಟಿನಲ್ಲಿ ಹಿಂದಿನಂತೆಯೇ ನಗರದ ಹಳೆ ಬಂದರಿನ ಮೂಲಕ ತಮ್ಮ ವ್ಯವಹಾರಗಳನ್ನು ಪುನರ್‌ ಸ್ಥಾಪಿಸುವ
ನಿಟ್ಟಿನಲ್ಲಿ ಶಾಸಕ ಜೆ.ಆರ್‌.ಲೋಬೋ ಅವರ ನಿಯೋಗ ಅ. 30ರಂದು ಲಕ್ಷದ್ವೀಪಕ್ಕೆ ತೆರಳಿ ಮಾತುಕತೆ ನಡೆಸಲಿದೆ. ಮಂಗಳೂರಿನ ಜತೆಗಿನ ಸಂಪರ್ಕವನ್ನು ಹಿಂದಿನ ಸ್ಥಿತಿಗೆ ತರಲು ಏನು ಮಾಡಬಹುದು ಎಂಬ ಕುರಿತು ನಿಯೋಗ ಅಲ್ಲಿನ ಪ್ರಮುಖರೊಂದಿಗೆ ಚರ್ಚಿಸಲಿದೆ.

25 ವರ್ಷಗಳಿಂದ ಕಡಿತ 
ಒಂದು ಕಾಲದಲ್ಲಿ ಲಕ್ಷದ್ವೀಪಕ್ಕೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಮಂಗಳೂರು ಹಳೆ ಬಂದರು ನಿಧಾನಗತಿಯಲ್ಲಿ ತನ್ನ ಹಿಂದಿನ ಸಂಪರ್ಕ ಕೊಂಡಿಯನ್ನು ಕಳಚಿಕೊಂಡಿತು. ಸುಮಾರು 25 ವರ್ಷಗಳಿಂದ ವ್ಯವಹಾರ
ಸಂಪೂರ್ಣ ನಿಂತು ಹೋದ ಸ್ಥಿತಿಯಿದೆ. 

ಹಿಂದೆ ಅಲ್ಲಿನ ಜನತೆ ಪ್ರತಿಯೊಂದಕ್ಕೂ ಮಂಗಳೂರಿನ್ನೇ ಆಶ್ರಯಿಸಿದ್ದರು. ಇದು ನಗರದ ಆರ್ಥಿಕತೆಗೂ ದೊಡ್ಡ ಕೊಡುಗೆ ನೀಡಿತ್ತು. ಪ್ರಸ್ತುತ ಅದು ಕೇರಳದ ಪಾಲಾಗಿರುವುದರಿಂದ ಇಲ್ಲಿನ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಅದು ಪುನರ್‌ ಸ್ಥಾಪನೆಗೊಂಡರೆ ಇಲ್ಲಿನ ವ್ಯಾಪಾರ ಉದ್ಯಮಕ್ಕೆ ದೊಡ್ಡ ಕೊಡುಗೆಯಾದೀತು. 

ನಿಯೋಗದಲ್ಲಿ ಯಾರ್ಯಾರು.?
ಅ.30ರಂದು ಲಕ್ಷದ್ವೀಪಕ್ಕೆ ತೆರಳುವ ಶಾಸಕ ಜೆ.ಆರ್‌.ಲೋಬೋ ನೇತೃತ್ವದ ನಿಯೋಗದಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಳು, ಬಂದರು ಮಂಡಳಿ ನಿರ್ದೇಶಕರು, ಬೆಂಗಳೂರು ಪಿಡಬ್ಲ್ಯುಡಿ ಅಧಿಕಾರಿಗಳು ಇರುತ್ತಾರೆ. ಇವರು ಅಲ್ಲಿನ ಆಡಳಿತಾಧಿಕಾರಿ ಸಹಿತ ಇತರ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ. ಲಕ್ಷದ್ವೀಪದ ಸಂಸದರ ಜತೆಗೂ ಶಾಸಕ ಲೋಬೋ ಅವರು ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಪುನರ್‌ ಸ್ಥಾಪನೆಗೆ ಪ್ರಯತ್ನ
ಮಂಗಳೂರಿನೊಂದಿಗೆ ಲಕ್ಷದ್ವೀಪದ ವ್ಯವಹಾರವನ್ನು ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕದ ನಿಯೋಗ ಅಲ್ಲಿನ ಪ್ರಮುಖರೊಂದಿಗೆ ಚರ್ಚೆ ನಡೆಸಲಿದೆ. ಇದು ನಗರದ ವ್ಯಾಪಾರದ ವೃದ್ಧಿಗೂ ಅನುಕೂಲವನ್ನು ಸೃಷ್ಟಿಸುವ
ಹಿನ್ನೆಲೆಯಲ್ಲಿ ಅದಕ್ಕೆ ಪ್ರಯತ್ನಿಸಲಾಗುವುದು. ಅವರು ವ್ಯವಹಾರವನ್ನು ಕಡಿತಗೊಳಿಸಲು ಕಾರಣಗಳೇನು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ. 
ಜೆ.ಆರ್‌.ಲೋಬೋ,
  ಶಾಸಕರು, ಮಂಗಳೂರು ನಗರ ದಕ್ಷಿಣ

ಜೆಟ್ಟಿ ನಿರ್ಮಾಣಕ್ಕೆ ನಿರಾಸಕ್ತಿ.?
ಕೆಲವು ವರ್ಷಗಳ ಹಿಂದೆ ಸುಮಾರು 70 ಕೋ.ರೂ.ವೆಚ್ಚದಲ್ಲಿ ನಗರದ ಹಳೆಬಂದರಿನಲ್ಲಿ ಲಕ್ಷದ್ವೀಪದ ಜೆಟ್ಟಿಯೊಂದು ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಲಕ್ಷದ್ವೀಪದ ಸರಕುಗಳಿಗೆ ಗೋದಾಮು ಸಹಿತ ಇತರ ಅನುಕೂಲಗಳಿಗೆ ಜೆಟ್ಟಿ ನಿರ್ಮಾಣಕ್ಕೆ ಅಲ್ಲಿನ ಆಡಳಿತ ಮುಂದಾಗಿತ್ತು. ಇದಕ್ಕೆ ಇಲ್ಲಿನ ಆಡಳಿತ ವರ್ಗ ಒಪ್ಪಿಗೆ ಸೂಚಿಸುವ ಜತೆಗೆ ಸ್ಥಳವನ್ನೂ ನೀಡುವ ಭರವಸೆ ನೀಡಲಾಗಿತ್ತು. ಆದರೆ ಪ್ರಸ್ತುತ ಜೆಟ್ಟಿ ನಿರ್ಮಾಣಕ್ಕೂ ಲಕ್ಷದ್ವೀಪದ ಆಡಳಿತ ನಿರಾಸಕ್ತಿ ತೋರಿದೆ. 

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

siddanna-2

B.Y.Vijayendra; ಏನು ಪುರೋಹಿತನಾ? ಜ್ಯೋತಿಷಿನಾ?…: ಸಿದ್ದರಾಮಯ್ಯ ಕಿಡಿ

rape

Agra; 3 ದಿನ ಒತ್ತೆಯಾಳಾಗಿಟ್ಟು ಡ್ಯಾನ್ಸರ್ ಮೇಲೆ ಅತ್ಯಾ*ಚಾರಗೈದ ಇವೆಂಟ್ ಮ್ಯಾನೇಜರ್

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

26

Mangaluru: ಬಾಂಗ್ಲಾ ಪ್ರಜೆ; ಒಂದು ವಾರ ಕಸ್ಟಡಿಗೆ

Arrested: ಜುಗಾರಿ ಆಟ ಆಡುತ್ತಿದ್ದ 6 ಮಂದಿ ಸೆರೆ

Arrested: ಜುಗಾರಿ ಆಟ ಆಡುತ್ತಿದ್ದ 6 ಮಂದಿ ಸೆರೆ

11

Mangaluru: ಕಾರು ಢಿಕ್ಕಿ; ಸ್ಕೂಟರ್‌ ಸವಾರ ಸಾವು

10

Mangaluru: ನಿವೃತ್ತ ಕರ್ನಲ್‌ ರತ್ನಕುಮಾರ್‌ ಅಡಪ ನಿಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Kageri

Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದು ಕಾಂಗ್ರೆಸ್‌ ಸರಕಾರದಿಂದ ಅಪರಾಧ: ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.