ಗುಂಡಿಗೊಂದು ಲಕ್ಷ ತೆರಬೇಕಂತೆ!


Team Udayavani, Nov 3, 2017, 12:47 PM IST

bbmp2.jpg

ಬೆಂಗಳೂರು: ನಗರದಲ್ಲಿ ಒಎಫ್ಸಿ (ಆಪ್ಟಿಕಲ್‌ ಫೈಬರ್‌ ಕೇಬಲ್‌) ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಅನುಮತಿ ಇಲ್ಲದೆ ವಿವಿಧ ಉದ್ದೇಶಗಳಿಗೆ ರಸ್ತೆ ಅಗೆಯುವ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಭಾರೀ ಮೊತ್ತದ ದಂಡ ವಿಧಿಸಲು ನಿರ್ಧರಿಸಿದೆ.

ಅನುಮತಿ ಇಲ್ಲದೆ ರಸ್ತೆ ಕತ್ತರಿಸಿರುವ ಸಂಸ್ಥೆಗಳಿಗೆ 25 ಲಕ್ಷ ರೂ. ಹಾಗೂ ಸಾರ್ವಜನಿಕರಿಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು. ಜತೆಗೆ ರಸ್ತೆ ಪುನರ್‌ ನಿರ್ಮಾಣ ಮಾಡಿಸುವುದಾಗಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌ ಆದೇಶ ಹೊರಡಿಸಿದ್ದಾರೆ.

ಅಷ್ಟೇ ಅಲ್ಲ, ರಸ್ತೆಗಳಲ್ಲಿ ಡಾಂಬರೀಕರಣದ ಪೂರ್ವದಲ್ಲೇ ರಸ್ತೆ ಕತ್ತರಿಸುವ ಅನುಮತಿ ಪಡೆದಿರುವ ಕಡೆಗಳಲ್ಲಿ ರಸ್ತೆ ಕತ್ತರಿಸಲಿರುವ ಮೊದಲೇ ಡಾಂಬರೀಕರಣ ಕೈಗೊಂಡರೆ, ಗುತ್ತಿಗೆ ಪಡೆದಿರುವ ಅನುಮತಿಯೇ ಅಸಿಂಧುಗೊಳ್ಳಲಿದೆ. ಅದೇ ರೀತಿ, ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಗಳನ್ನು ಕತ್ತರಿಸಿದರೆ, ರಸ್ತೆ ಕತ್ತರಿಸಿರುವ ಸಂಸ್ಥೆಗಳಿಗೆ 25 ಲಕ್ಷ ರೂ. ದಂಡ ವಿಧಿಸಲಾಗುವುದು. 

ಗುಂಡಿಗೊಂದು ಲಕ್ಷ!: ಓಎಫ್ಸಿ ಅನುಮತಿ ಪತ್ರಗಳಲ್ಲಿ ನಿಗದಿಪಡಿಸಿರುವ ಸಂಖ್ಯೆಯ ಎಚ್‌ಡಿಡಿ ಅಳವಡಿಕೆ ಗುಂಡಿಗಳಿಗಿಂತ ಹೆಚ್ಚು ಗುಂಡಿಗಳನ್ನು ತೋಡಿದ್ದಲ್ಲಿ, ಆ ರಸ್ತೆ ಭಾಗದ ಪುನರ್‌ನಿರ್ಮಾಣ ಆಯಾ ಸಂಸ್ಥೆಗಳಿಂದಲೇ ಮಾಡಿಸಲಾಗುವುದು. ಜತೆಗೆ ಪ್ರತಿ ಹೆಚ್ಚುವರಿ ಗುಂಡಿಗೆ ಒಂದು ಲಕ್ಷ ದಂಡ ವಿಧಿಸಲಾಗುವುದು ಎಂದೂ ಆದೇಶದಲ್ಲಿ ಎಚ್ಚರಿಸಲಾಗಿದೆ. 

ಅದೇ ರೀತಿ, ನಿಗದಿಯಾದ ಉದ್ದಕ್ಕಿಂತ ಹೆಚ್ಚು ಓಎಫ್ಸಿ ಅಳವಡಿಕೆಯಾದಲ್ಲಿ ಹೆಚ್ಚುವರಿ ಉದ್ದಕ್ಕೆ ಅಥವಾ ಹೆಚ್ಚುವರಿ ಕೇಬಲ್‌ ಮತ್ತು ಡಕ್ಟ್ ಅಳವಡಿಸಿದಲ್ಲಿ ಪ್ರತಿ ಮೀಟರ್‌ಗೆ ನಿಗದಿತ ಶುಲ್ಕದ ಮೂರುಪಟ್ಟು ದಂಡ ವಸೂಲು ಮಾಡಲಾಗುವುದು. ಓಎಫ್ಸಿ ಅಳವಡಿಕೆ ಪೂರ್ಣಗೊಂಡ 96 ಗಂಟೆಗಳಲ್ಲಿ ಎಚ್‌ಡಿಡಿ ಅಳವಡಿಕೆ ಗುಂಡಿಗಳ ರಸ್ತೆ ಪುನಶ್ಚೇತನ ಪೂರ್ಣಗೊಳ್ಳುವ ಪಕ್ಷದಲ್ಲಿ ಪ್ರತಿ ಗುಂಡಿಗೆ ನಿತ್ಯ 10 ಸಾವಿರ ದಂಡ ವಿಧಿಸಲಾಗುವುದು. 

ಓಎಫ್ಸಿ ಅಳವಡಿಕೆ ಅನುಮತಿ ಪಡೆದ ಸಂದರ್ಭಗಳಲ್ಲಿ ಆಯಾ ವಲಯ ವ್ಯಾಪ್ತಿಯ ಎಂಜಿನಿಯರ್‌ಗಳಿಗೆ ಲಿಖೀತಪೂರ್ವ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಪೂರ್ವಮಾಹಿತಿ ನೀಡದ ಸಂಸ್ಥೆಗಳಿಗೆ ಸದರಿ ಅನುಮತಿ ಪಾವತಿಸಿರುವ ಮೇಲ್ವಿಚಾರಣಾ ಶುಲ್ಕದ ಶೇ. 25ರಷ್ಟು ದಂಡ ವಿಧಿಸಲಾಗುವುದು.

ಮೂರು ಬಾರಿಗಿಂತ ಹೆಚ್ಚು ಸಲ ನಿಯಮ ಉಲ್ಲಂ ಸಿ, ದಂಡ ವಿಧಿಸಲಾಗಿರುವ ಸಂಸ್ಥೆಯ ಜತೆಗಿನ ಒಡಂಬಡಿಕೆಯನ್ನು ಬಿಬಿಎಂಪಿ ರದ್ದುಗೊಳಿಸಿ, ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದೂ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.