ಬೆಟ್ಟದ ಬುಡದಲ್ಲೊಂದು ದಿನ!
Team Udayavani, Nov 4, 2017, 3:13 PM IST
ಸ್ವಾತಿ ಮಳೆ ತಡವಾಗಿ ಶುರುವಾಗಿದೆ… ನೀವು ತಡ ಮಾಡ್ಬೇಡಿ… ಬೇಗ ಸೇರಿಕೊಳ್ಳಿ! ಬೆಂಗಳೂರಿನ ಬ್ಯುಸಿ ಲೈಫಿನ ಮಧ್ಯೆ ನಿಂತು ಹೀಗೊಂದು ಕರೆಕೊಡುತ್ತಿರೋದು “ಮಣ್ಮಯಿ’ ಎಂಬ ಸಂಸ್ಥೆ. ಅವರು ಕರೆದರು ಅಂತ ನೀವೇನಾದ್ರೂ ಹೋದ್ರೆ, ನಿಮ್ಮ ಕಣ್ಣೆದುರು ಒಂದು ಮಾಯಾಲೋಕವನ್ನು ನೋಡಿಬರಬಹುದು.
ಅಲ್ಲೊಂದು ಸೊಗಸಾದ ಲಾಂಗ್ ಡ್ರೈವ್, ಸ್ವಾತಿ ಮಳೆಯ ಕೆಸರಿನಲ್ಲಾಟ, ರಾತ್ರಿಯ ಚುಮುಚುಮು ಚಳಿಯಲ್ಲಿ ಬೆಳದಿಂಗಳ ಹಬ್ಬದೂಟ, ಒಂದು ಟೆಂಟ್ ಸಿನಿಮಾ, ಸಿರಿಧಾನ್ಯಗಳ ತೋಟದಲ್ಲಿ ಕಾಲ್ನಡಿಗೆ, ಬಗೆಬಗೆಯ ಪಕ್ಷಿಗಳ ಕಲರವ, ರೈತರೊಟ್ಟಿಗೆ ಮಾತುಕತೆ- ಹರಟೆ, ಆ ಹಳ್ಳಿಯ ದೇಸೀ ಬೀಜ ಬ್ಯಾಂಕ್ನಲ್ಲಿ ನಿಮ್ಮದೂ ಒಂದು ಖಾತೆ ತೆರೆಯುವ ಯೋಗ, ದೇಸಿ ಹಸುಗಳೊಂದಿಗೆ ಒಂದೊಂದು ಸೆಲ್ಫಿ…
ಆ ಹಸಿರಿನ ಸ್ವರ್ಗದಲ್ಲಿ ಸಂಭ್ರಮಿಸಲು ಇನ್ನೂ ಸಾಕಷ್ಟು ಸಂಗತಿಗಳು ಜತೆಗೂಡುತ್ತವೆ. ಈ ವಿಸ್ಮಯಗಳೆಲ್ಲ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿರುವ “ಅಮೃತಭೂಮಿ’ಯಲ್ಲಿ ಘಟಿಸಲಿವೆ. ಅಲ್ಲಿನ 80 ಎಕರೆ ಕೃಷಿ ಭೂಮಿಯಲ್ಲಿ ನೀವೂ ಒಂದು ದಿನದ ರೈತರಾಗಲು “ಮಣ್ಮಯಿ’ ಅವಕಾಶ ಕಲ್ಪಿಸುತ್ತಿದೆ. ಅಲ್ಲಿ ನಗರದ ಮಂದಿಯನ್ನು, ಹಳ್ಳಿಯ ಮಂದಿಯನ್ನೂ ಸೇರಿಸಿ,
ಪರಸ್ಪರ ಎರಡು ಸಂಸ್ಕೃತಿಯ ಮಿಲನ ಮಾಡಿಸಲು “ಮಣ್ಮಯಿ’ ಹೊರಟಿದೆ. ಒಂದು ದಿನ ಮಟ್ಟಿಗೆ ಬೆಟ್ಟದ ಬುಡದಲ್ಲಿ ಕಳೆದು, ರೈತರೊಂದಿಗೆ ಅನುಭವ ಹಂಚಿಕೊಳ್ಳುವ ಯೋಗ ನಿಮ್ಮದಾಗಲಿದೆ. ಆಸಕ್ತರು, ನವೆಂಬರ್ 4ರ ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ತೆರಳಬೇಕಾಗುತ್ತದೆ. ಮೊದಲ 50 ಮಂದಿಗೆ ಮಾತ್ರ ಪ್ರವೇಶ.
ಎಲ್ಲಿ?: ಅಮೃತಭೂಮಿ, ಹೊಂಡರಬಾಳು, ಚಾಮರಾಜನಗರ
ಯಾವಾಗ?: ನವೆಂಬರ್ 4- 5, ಮಧ್ಯಾಹ್ನ 12.30 ಶುರು
ವೆಬ್ಸೈಟ್: manmayeeblr.blogspot.in
ಸಂಪರ್ಕ: 9611105029, 9743731223
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ: ಲೋಕಾಯುಕ್ತದಿಂದ ಬಿಎಸ್ವೈ ವಿಚಾರಣೆ
Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ
Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್ ಸೀಮಿತ: ಆರ್. ಅಶೋಕ್
Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ
Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.