ಶ್ರೀಕಾಂತ್ಗೆ ಆಘಾತ; ಪ್ರಣಯ್ಗೆ ಪ್ರಶಸ್ತಿ
Team Udayavani, Nov 9, 2017, 7:20 AM IST
ನಾಗ್ಪುರ: ವಿಶ್ವದ ಎರಡನೇ ರ್ಯಾಂಕಿನ ಕಿದಂಬಿ ಶ್ರೀಕಾಂತ್ ಅವರನ್ನು ಮೂರು ಗೇಮ್ಗಳ ಹೋರಾಟದಲ್ಲಿ ಸೋಲಿಸಿದ ಎಚ್ಎಸ್ ಪ್ರಣಯ್ ಅವರು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಈ ವರ್ಷ ನಾಲ್ಕು ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದ ಶ್ರೀಕಾಂತ್ ಅವರನ್ನು 21-15, 16-21, 21-7 ಗೇಮ್ಗಳಿಂದ ಆಘಾತಗೊಳಿಸಿದ ವಿಶ್ವದ 11ನೇ ರ್ಯಾಂಕಿನ ಪ್ರಣಯ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು.
ಮೊದಲ ಗೇಮ್ನಲ್ಲಿ 3-0 ಮುನ್ನಡೆ ಸಾಧಿಸುವ ಮೂಲಕ ಶ್ರೀಕಾಂತ್ ಉತ್ತಮ ಆರಂಭ ಪಡೆದಿದ್ದರು. ಆದರೆ ಆಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಪ್ರಣಯ್ ತೀವ್ರ ಪೈಪೋಟಿಯಿಂದ ಹೋರಾಡಿ 7-7 ಸಮಬಲ ಸಾಧಿಸಿ ಮುನ್ನಡೆದರು.
ಅಂತಿಮವಾಗಿ 21-15ರಿಂದ ಮೊದಲ ಗೇಮ್ ವಶಪಡಿಸಿಕೊಂಡರು. ದ್ವಿತೀಯ ಗೇಮ್ನಲ್ಲಿ ಶ್ರೀಕಾಂತ್ ವೀರೋಚಿತ ಆಟ ಆಡಿದರು. ಆದರೂ ಪ್ರಣಯ್ 13-13 ಅಂಕಗಳ ತನಕ ಸಮಬಲದ ಹೋರಾಟ ನೀಡಿದ್ದರು. ನಿರ್ಣಾಯಕ ತೃತೀಯ ಗೇಮ್ನಲ್ಲಿ ಮತ್ತೆ ಮೇಲುಗೈ ಸಾಧಿಸಿದ ಪ್ರಣಯ್ ಸುಲಭವಾಗಿ ಗೆದ್ದು ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!
Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ
Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ
Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್ ಕುಮಾರ್ ರೈ
Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.