ಸ್ವಾವಲಂಬನ ಫ್ರೆಂಡ್ಸ್ ಡೊಂಬಿವಲಿ : ಸಾಂಸ್ಕೃತಿಕ ಸಂಜೆ
Team Udayavani, Nov 15, 2017, 12:46 PM IST
ಡೊಂಬಿವಲಿ: ಸ್ವಾವಲಂಬನ ಫ್ರೆಂಡ್ಸ್ ಡೊಂಬಿವಲಿ ವತಿಯಿಂದ ಸಂಸ್ಥೆಯ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವು ಇತ್ತೀಚೆಗೆ ಡೊಂಬಿವಲಿ ಪೂರ್ವ ಗಣಪತಿ ಮಂದಿರದ ಓಂಕಾರ್ ಸಭಾಗೃಹದಲ್ಲಿ ನಡೆಯಿತು.
ಸ್ವಾವಲಂಬನ ಕೇಂದ್ರದ ವಿದ್ಯಾರ್ಥಿಗಳು, ಪಾಲಕರು, ಸ್ಥಳೀಯ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಪತ್ರಕರ್ತ ವಸಂತ ಕಲಕೋಟಿ ಅವರು, ಪ್ರಾಚಾರ್ಯ ವೆಂಕಟೇಶ ಪೈ ಅವರು ಹಾಗೂ ನಾನು ಕನ್ನಡಪರ ಸಾಹಿತ್ಯ ಸೇವೆಯಲ್ಲಿ ಜತೆಜತೆಯಾಗಿ ಸಾಗಿ ಬಂದವರು.
ಪರಿಸರ ಕಾಳಜಿ ಹಾಗೂ ನಿರುದ್ಯೋಗಿಗಳಿಗೆ ಸ್ವಾವಲಂಬನೆ ಕಲಿ
ಸುವ ಸಂಸ್ಥೆಯು ಮುಂಬಯಿಯಲ್ಲಿ ಇದೊಂದೇ ಆಗಿದೆ. ಅದು ಕನ್ನಡಿಗರದ್ದು ಎನ್ನಲು ಹೆಮ್ಮೆಯಾಗುತ್ತಿದೆ ಎಂದರು.
ಅತಿಥಿಯಾಗಿ ಆಗಮಿಸಿದ ಸೆನ್ಸಾರ್ ಬೋರ್ಡ್ನ ರಂಗ ಪೂಜಾರಿ ಅವರು ಮಾತನಾಡಿ, ನಗರ ಪರಿಸರದಲ್ಲಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಉಚಿತವಾಗಿ ಒದಗಿಸುತ್ತಿರುವ ಸ್ವಾವಲಂಬನ ಸಂಸ್ಥೆಗೆ ಇತರರೂ ಸಹಾಯ ಹಸ್ತ ನೀಡುವುದು ಅವಶ್ಯವಾಗಿದೆ ಎಂದು ನುಡಿದರು.
ಆಮಂತ್ರಿತ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಅನಂತ ಪೈ ಅವರು, ಸ್ವಾವಲಂಬನದ ಉದ್ದೇಶಗಳು ಅನುಕರಣೀಯ. ಬಟ್ಟೆಚೀಲಗಳನ್ನು ಹೊಲಿದು, ಮಾರಾಟ ಮಾಡುವುದರೊಂದಿಗೆ ಪ್ಲಾಸ್ಟಿಕ್ ಬಳಸಬೇಡಿ ಎಂಬ ಸಂದೇಶವೂ ಒಳಗೊಂ
ಡಿದೆ. ಇಲ್ಲಿನ ಕಾರ್ಯಕ್ರಮಗಳಿಗೆ ತಾನು ಯಾವತ್ತೂ ಸಹಕರಿಸುತ್ತೇನೆ ಎಂದರು.
ಮತ್ತೋರ್ವ ಅತಿಥಿ ಲೇಖಕ ಪಿ. ಆರ್. ರವಿ ಶಂಕರ್ ಡಹಾಣೂ ಅವರು ಮಾತನಾಡಿ, ಸಂಗೀತ ಅಥವಾ ನಾಟಕದ ಪಾತ್ರಧಾರಿಗಳು ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ಉಂಟಾಗುವ ಸವಾಲುಗಳ ಬಗ್ಗೆ ವಿವರಿಸಿ ಸಲಹೆ ನೀಡಿದರು. ಸ್ವಾವಲಂಬನ ಕೇಂದ್ರದ ವಿದ್ಯಾರ್ಥಿಗಳಿಗೆ ಮಾತುಗಾರಿಕೆಯ ಬಗ್ಗೆ ಸಲಹೆ ನೀಡಿ, ಉಚಿತವಾಗಿ ನಡೆಸುವ ಶಿಬಿರಗಳ ಸದುಪಯೋಗವನ್ನು ಎಲರೂ ಪಡೆದುಕೊಳ್ಳುವಂತೆ ವಿನಂತಿಸಿದರು.
ಪ್ರಾಚಾರ್ಯ ವೆಂಕಟೇಶ್ ಪೈ ಅವರು ಸ್ವಾವಲಂಬನದ ಚಟುವಟಿಕೆಗಳ ಬಗ್ಗೆ ವಿವರಿಸಿ, ಭವಿಷ್ಯದಲ್ಲಿ ಇಂತಹ ತರಬೇತಿಗಳಿಗೆ ಉಚಿತವಾದ ಸ್ಥಳವೊಂದರ ಅಗತ್ಯವನ್ನು ತಿಳಿಸಿದರು. ಸಂಸ್ಥೆಯಲ್ಲಿ ಆಯೋಜಿಸಿದ್ದ ಗಣೇಶ ಚಿತ್ರಬಿಡಿಸುವ ಹಾಗೂ ಭಜನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ಸಂಧ್ಯಾ ಸನತ್, ಸುನಂದಾ ಎನ್. ಶೆಟ್ಟಿ, ಹೇಮಂತ್ ಮೆಂಡನ್, ಪ್ರತಿಭಾ ವೈದ್ಯ, ಆಶಾ ಉಮೇಶ್ ನಾಯಕ್, ಕಸ್ತೂರಿ ಐನಾಪುರೆ ಹಾಗೂ ಸ್ಥಳೀಯ ಓಂಕಾರ ಶಾಲೆಯ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಮೊದಲಾದವರನ್ನು ಅಭಿನಂದಿಸಲಾಯಿತು.
ಸ್ವಾವಲಂಬನ ಕೇಂದ್ರದಲ್ಲಿ ತಾವು ಕಲಿತ ಭಜನೆ, ಸಂಗೀತ, ಸುಗಮ ಸಂಗೀತ ಮೊದಲಾದ ಶಿಬಿರಗಳ ವಿದ್ಯಾರ್ಥಿಗಳಿಂದ ಸಂಗೀತ ರಸ ಸಂಜೆ ನಡೆಯಿತು. ಪ್ರೀತಂ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಸ್ತೂರಿ ಐನಾಪೂರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್ಬಾಸ್ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್
Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ
Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ
Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ
BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.