![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 20, 2017, 11:42 AM IST
ಮುಂಬಯಿ : ಪ್ರಖ್ಯಾತ ಚಿತ್ರ ನಿರ್ಮಾಪಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರು ನ.19ರ ವಿಶ್ವ ಟಾಯ್ಲೆಟ್ ದಿನದ ಅಂಗವಾಗಿ ತಮ್ಮ ಹೊಸ ಚಿತ್ರ “ಮೇರೇ ಪ್ಯಾರೇ ಪ್ರೈಮ್ ಮಿನಿಸ್ಟರ್’ ನ ಮೊದಲ ಪೋಸ್ಟರ್ ಅನ್ನು ಟ್ವಿಟರ್ ಮೂಲಕ ಅನಾವರಣ ಮಾಡಿದ್ದಾರೆ.
ಪೋಸ್ಟರ್ನಲ್ಲಿ ಕಂಡು ಬರುವಂತೆ ಪುಟ್ಟ ಬಾಲಕನೊಬ್ಬನು ಗೋಡೆಯ ಮೇಲೆ ಟಾಯ್ಲೆಟ್ ಸ್ಕೆಚ್ ಬಿಡಿಸಿರುತ್ತಾನೆ. ಆತನೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಮರಾಠಿ ನಟಿ ಅಂಜಲಿ ಪಾಠಕ್ (ಸಿನೇಮಾದಲ್ಲಿ ಬಾಲಕನ ತಾಯಿ ಪಾತ್ರ ವಹಿಸಿದ್ದಾರೆ) ನಿಂತಿರುವುದು ಕಂಡು ಬರುತ್ತದೆ.
“ಮೇರೇ ಪ್ಯಾರೇ ಪ್ರೈಮ್ ಮಿನಿಸ್ಟರ್’ ಚಿತ್ರವು ತಾಯಿ-ಮಗನ ಸಂಬಂಧವನ್ನು ಹೃದಯಂಗಮವಾಗಿ ಸಾದರಪಡಿಸುತ್ತದೆ; ಮಾತ್ರವಲ್ಲ ಯಾವುದೇ ಪ್ರತಿಕೂಲ ಸನ್ನಿವೇಶವನ್ನು ಧನಾತ್ಮಕವಾಗಿ ಸ್ವೀಕರಿಸುವುದನ್ನು ಭರವಸೆಯೊಂದಿಗೆ ಕಲಿಸುತ್ತದೆ.
ಈ ಚಿತ್ರದಲ್ಲಿ ಬಾಲಕನು ತನ್ನ ಒಂಟಿ ತಾಯಿಗೆ (ಆಕೆಗಾಗಿ) ಒಂದು ಟಾಯ್ಲೆಟ್ ನಿರ್ಮಿಸುವುದನ್ನು ಬಹುವಾಗಿ ಬಯಸುತ್ತಾನೆ.
ಮಧ್ಯ ರಾತ್ರಿಯ ಹೊತ್ತಿಗೆ ಹೆದರುತ್ತಾ ಬಹಿರ್ದೆಶೆಗೆ ಹೋಗುವ ತನ್ನ ತಾಯಿಯ ಸುರಕ್ಷೆಯ ಬಗ್ಗೆ ಬಾಲಕನಿಗೆ ತುಂಬ ಭಯ ಮತ್ತು ಕಾಳಜಿ ಇರುತ್ತದೆ.
ಇದಕ್ಕೆ ಪರಿಹಾರ ಕಾಣಲು ಬಾಲಕನು ಪ್ರಧಾನ ಮಂತ್ರಿಗೆ ಕಾಗದ ಬರೆಯುತ್ತಾನೆ. ಮಾತ್ರವಲ್ಲ ಅದನ್ನು ಪ್ರಧಾನಿಗೆ ತಲುಪಿಸಲು ಮತ್ತು ಟಾಯ್ಲೆಟ್ ನೆರವು ಪಡೆಯಲು ಆತ ತನ್ನಿಬ್ಬರು ಸ್ನೇಹಿತರೊಂದಿಗೆ ದಿಲ್ಲಿಗೆ ಬರುತ್ತಾನೆ.
ಈ ಸಿನೇಮಾ ಹೊಸ ಭರವಸೆ, ವಿಶ್ವಾಸ ಮತ್ತು ಸ್ಫೂರ್ತಿಯನ್ನು ಜನಸಾಮಾನ್ಯರಲ್ಲಿ ಬಡಿದೆಬ್ಬಿಸುವಂತಿದೆ ಎಂದು ಚಿತ್ರ ನಿರ್ಮಾಪಕ ರಾಕೇಶ್ ಮೆಹ್ರಾ ಹೇಳಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.