ಸದ್ದಿಲ್ಲದೇ ಮಂಗಳೂರಲ್ಲಿ ತಂಗಿದ ಲಂಕಾ ಪ್ರಧಾನಿ
Team Udayavani, Nov 22, 2017, 9:38 AM IST
ಮಂಗಳೂರು: ದೇಶದ ಮುಖ್ಯಸ್ಥರು, ಯಾವುದಾದರೂ ದೇಶದ ಪ್ರಧಾನಿ ಆಗಮಿಸುತ್ತಾರೆ ಎಂದರೆ ಅತ್ಯಂತ ಬಿಗು ಭದ್ರತೆ ಕಾರ್ಯಕ್ರಮ ಇತ್ಯಾದಿ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿದ್ದಲ್ಲ!
ಆದರೆ ಶ್ರೀ ಕ್ಷೇತ್ರ ಕೊಲ್ಲೂರು ದೇಗುಲಕ್ಕೆ ಆಗಮಿಸಿದ ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರು ಅಲ್ಲಿಂದ ಮಂಗಳೂರಿಗೆ ಬಂದು ತಂಗಿದ್ದು, ಮಂಗಳೂರಿನ ಹೊರ ಜಗತ್ತಿಗೆ ಗೊತ್ತೇ ಆಗಿಲ್ಲ. ಅಷ್ಟೇ ಅಲ್ಲದೆ, ಇಲ್ಲಿನ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೇಟ್ ವೇ ಹೊಟೇಲ್ನಲ್ಲಿ ವಾಸ್ತವ್ಯ: ಶ್ರೀಲಂಕಾ ದಿಂದ ಆಗಮಿಸಿದ ಸಿಂಘೆ ಅವರು ಮಂಗಳವಾರ ಬೆಳಗ್ಗೆ 7.05ಕ್ಕೆ ಬೆಂಗಳೂರಿನಿಂದ ಜೆಟ್ ಏರ್ವೆàಸ್ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಅವರು 16 ಬೆಂಗಾವಲು ಪಡೆ ಕಾರುಗಳೊಂದಿಗೆ ಮಂಗಳೂರಿನ ಸ್ಟೇಟ್ಬ್ಯಾಂಕ್ ಬಳಿಯಿರುವ ಗೇಟ್ವೇ ಹೊಟೇಲ್ಗೆ ಆಗಮಿಸಿದರು. ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಬಳಿಕ ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ 9.20ಕ್ಕೆ ಕೊಲ್ಲೂರಿಗೆ ತೆರಳಿದರು. ದೇಗುಲ ಭೇಟಿ ಬಳಿಕ ಮಧ್ಯಾಹ್ನ 2.20ರ ವೇಳೆಗೆ ಮತ್ತೆ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಆಗಮಿಸಿ, ಹೊಟೇಲ್ನಲ್ಲಿ ತಂಗಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಗೆ ಅವರು ಹೊಸದಿಲ್ಲಿಗೆ ಪ್ರಯಾಣಿಸಲಿದ್ದಾರೆ.
ಒಂದು ಅಂತಸ್ತು ಪ್ರಧಾನಿಗೆ ಮೀಸಲು: ಸಿಂಘೆ ಅವರ ಆಗಮನ ಹಿನ್ನೆಲೆಯಲ್ಲಿ ಹೊಟೇಲ್ನ ಒಂದು ಅಂತಸ್ತನ್ನು ಸಂಪೂರ್ಣ ಅವರಿಗೆ ಮೀಸಲಿರಿಸಲಾಗಿದೆ. ಅಲ್ಲಿ ವಾಸ್ತವ್ಯ ಇದ್ದವರನ್ನು ಬೇರೆಡೆ ಸ್ಥಳಾಂತರಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಮೊಬೈಲ್ ಜಾಮರ್ ಅಳವಡಿಸಲಾಗಿದ್ದು, ಉನ್ನತ ಮಟ್ಟದ ಭದ್ರತೆ ನೀಡಲಾಗಿದೆ. ಇಡೀ ಹೊಟೇಲ್ ಪೊಲೀಸ್, ಭದ್ರತಾ ದಳದ ಮಂದಿಯಿಂದ ತುಂಬಿದೆ. ಮಂಗಳೂರು ನಗರದಲ್ಲೂ ಬಿಗು ಪಹರೆ ಇದ್ದು, ಕೆಎಸ್ಆರ್ಪಿ, ಸಶಸ್ತ್ರ ದಳ, ಪೊಲೀಸರನ್ನು ನಿಯೋಜಿಸಲಾಗಿದೆ.
ತಂಗಿದ ಮೊದಲ ವಿದೇಶಿ ಪ್ರಧಾನಿ: ವಿದೇಶದ ಪ್ರಧಾನಿಯೊಬ್ಬರು ಮಂಗಳೂರಿಗೆ ಆಗಮಿಸಿ ಇಲ್ಲೇ ಒಂದು ದಿನ ಉಳಿದುಕೊಂಡ ಉದಾಹರಣೆ ಇಲ್ಲಿಯವರೆಗೆ ಇಲ್ಲ. ಮಂಗಳೂರಿಗೆ ಆಗಮಿಸಿದ ಗಣ್ಯಾತಿಗಣ್ಯರ ಪಟ್ಟಿಯಲ್ಲಿ ನೇಪಾಲದ ದೊರೆ ಬೀರೇಂದ್ರ, ಹಿಂದಿನ ಪೋಪ್ ದ್ವಿತೀಯ ಜಾನ್ಪಾಲ್ ಇದ್ದಾರೆ.
ಕಾಣೆ ಮೀನಿಗೆ ಫಿದಾ: ಶ್ರೀಲಂಕಾ ಪ್ರಧಾನಿಗೆ ದಕ್ಷಿಣ ಭಾರತದ, ಅದರಲ್ಲೂ ಮಂಗಳೂರಿನ ಖಾದ್ಯಗಳ ಮೆನು ಸಿದ್ಧಪಡಿಸಲಾಗಿದೆ. ಅವರ ಭೇಟಿಗೆ ಮುನ್ನ ಶ್ರೀಲಂಕಾ ಖಾದ್ಯಗಳ ಮೆನು ತರಿಸಲಾಗಿತ್ತಾದರೂ ಸ್ಥಳೀಯ ಖಾದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಂಗಳೂರಿನ ಕಾಣೆ, ಮಾಂಜಿ ಮೀನು ಸೇರಿದಂತೆ ಕರಾವಳಿಯ ಬಗೆ ಬಗೆಯ ಖಾದ್ಯಗಳನ್ನು ಪ್ರಧಾನಿ ಅವರು ಸವಿದಿದ್ದು, ಟೇಸ್ಟ್ಗೆ ಮಾರು ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.