ಪರಂಪರೆ ಆಧರಿಸಿ ಇತಿಹಾಸ ಕೆದಕಬೇಕು
Team Udayavani, Nov 26, 2017, 12:35 PM IST
ಬೆಂಗಳೂರು: ಭಾರತದ ನೈಜ ಇತಿಹಾಸ ಮತ್ತು ವೀರಗಾಥೆಯ ಮೇಲೆ ಬೆಳಕು ಚೆಲ್ಲುವ ಕೆಲಸ ಆಗಬೇಕು ಎಂದು ನಟ ಹಾಗೂ ರಂಗಕರ್ಮಿ ಪ್ರಕಾಶ ಬೆಳವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಬೈ ಹಿಂದೂ ಸ್ವಯಂ ಸೇವಕ ಸಂಘದ ಸಹ ಸಂಯೋಜಕ ರವಿಕುಮಾರ್ ಬರೆದಿರುವ ಇಂಡಿಯನ್ ಹಿರೋಯಿಸಂ ಇನ್ ಇಸ್ರೇಲ್ ಪುಸ್ತಕದ ಕನ್ನಡ ಅವತರಣಿಗೆ, ಆರ್ಎಸ್ಎಸ್ ಪ್ರಚಾರಕ್ ಪ್ರದೀಪ್ ಮೈಸೂರು ಕನ್ನಡಕ್ಕೆ ಅನುವಾದಿಸಿರುವ “ಬಿಚ್ಚುಗತ್ತಿ’ ಕೃತಿಯನ್ನು ಶನಿವಾರ ನಗರದ ಮಿಥಿಕ್ ಸೊಸೈಟಿಯಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಯಾರು ಬೇಕಾದರೂ ರಚಿಸಬಹುದಾದ ಚರಿತ್ರೆಯಲ್ಲಿ ಸುಳ್ಳುಗಳು ಹೆಚ್ಚಾಗುತ್ತಿವೆ. ನಮ್ಮದು ನೈಜ ಇತಿಹಾಸ. ಇದನ್ನು ಕ್ರೋಢೀಕರಿಸುವ ವ್ಯವಸ್ಥೆ ಆಗಬೇಕು. ನಮ್ಮ ಪರಂಪರೆಯ ಆಧಾರದಲ್ಲಿ ಇತಿಹಾಸ ಕೆದಕಬೇಕು. ಪಾಶ್ಚಾತ್ಯರು ನಮ್ಮಲ್ಲಿ ಕೀಳರಿಮೆ ತುಂಬುವ ಚರಿತ್ರೆ ಸೃಷ್ಟಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಸ್ರೇಲ್ನಲ್ಲಿ ಮಾತ್ರವಲ್ಲ ಫ್ರಾನ್ಸ್, ಜರ್ಮನಿ, ಸಿಂಗಾಪುರ ಮೊದಲಾದ ಕಡೆಗಳಲ್ಲೂ ಭಾರತೀಯ ಯೋಧರ ಸ್ಮಾರಕಗಳಿವೆ. ಯುರೋಪ್ನಲ್ಲಿ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಹೈಫಾ ಯುದ್ಧದಲ್ಲಿ 13 ಲಕ್ಷ ಭಾರತೀಯ ಯೋಧರು ಪಾಲ್ಗೊಂಡಿದ್ದರು ಎಂಬುದನ್ನು ನೆನಪಿಸಿದರು.
ಮುಂಬೈ ಹಿಂದು ಸ್ವಯಂ ಸೇವಕ ಸಂಘದ ಸಹ ಸಂಯೋಜಕ ರವಿಕುಮಾರ ಅಯ್ಯರ್ ಮಾತನಾಡಿ, ವಿದೇಶದಲ್ಲಿ ಭಾರತೀಯ ಸೈನಿಕರ ಶೌರ್ಯ, ಸಾಹಸ ಇಂದಿಗೂ ಸ್ಮಾರಕಗಳಲ್ಲಿ ಜೀವಂತವಿವೆ. ಇತಿಹಾಸ ರಚಿಸಿರುವ ಪಾಶ್ಚಾತ್ಯ ಬರಹಗಾರರು ಭಾರತೀಯರನ್ನು ಸಾಹಸ ಮನೋಭಾವದವರು ಎಂದು ತೋರಿಸಿಲ್ಲ ಎಂದರು.
ದಿ ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ವಿ. ನಾಗರಾಜ್, ಆರ್ಎಸ್ಎಸ್ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ ಪ್ರದೀಪ್ ಮೈಸೂರು, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗಡೆ, ತುಮಕೂರು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ
Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್
Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ
Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್ನಿಂದ 2ಲಕ್ಷ ದಂಡ
Fraud: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ
ರೈಸ್ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ
Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ
Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್
Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.