ಪ್ರೆಸ್‌ಕ್ಲಬ್‌ನಲ್ಲಿ ಆಪರೇಷನ್‌ ಹದ್ದು


Team Udayavani, Nov 29, 2017, 11:35 AM IST

Press-Club-haddu.jpg

ಬೆಂಗಳೂರು: ದಿನವಿಡೀ ಪತ್ರಕರ್ತರಿಂದ ಗಿಜಿಗುಡುವ, ಕಬ್ಬನ್‌ ಪಾರ್ಕ್‌ನಲ್ಲಿನ ಪ್ರೆಸ್‌ಕ್ಲಬ್‌ ಆವರಣ ಮಂಗಳವಾರ ಕೆಲಕಾಲ ಕುತೂಹದ ಕೇಂದ್ರವಾಗಿತ್ತು. ಹಲವು ಸುದ್ದಿಗೋಷ್ಠಿಗಳ ನಡುವೆ ಪ್ರೆಸ್‌ಕ್ಲಬ್‌ ಮೊದಲ ಬಾರಿ ಆಪರೇಷನ್‌ ಒಂದಕ್ಕೆ ಸಾಕ್ಷಿಯಾಯಿತು! ಅದೇ “ಆಪರೇಷನ್‌ ಹದ್ದು’.

ಕ್ಲಬ್‌ ಎದುರಿರುವ ಎರಡು ದೊಡ್ಡ ಮರಗಳಲ್ಲಿ ಆಶ್ರಯ ಪಡೆದಿದ್ದ ಎರಡು ಹದ್ದುಗಳ ರೆಕ್ಕೆ ಏಕಕಾಲಕ್ಕೆ ಅಕಾಸ್ಮಾತಾಗಿ ಗಾಳಿಪಟದ ದಾರಕ್ಕೆ ಸಿಲುಕಿಕೊಂಡಿದೆ. ಹೀಗೆ ರೆಕ್ಕೆ ಸಿಲುಕಿಕೊಂಡು ಅದೆಷ್ಟು ಹೊತ್ತಾಗಿತ್ತೋ, ಹದ್ದುಗಳೆರಡೂ ಎಷ್ಟು ಕಾಲ ಪ್ರಾಣ ಭಯದಲ್ಲಿ ಚಡಪಡಿಸಿದವೋ ತಿಳಿಯದು. ಒಟ್ಟಿನಲ್ಲಿ ಅವೆರಡೂ ಜನರ ಕಣ್ಣಿಗೆ ಬಿದ್ದಾಗ ಮಧ್ಯಾಹ್ನ 12 ಗಂಟೆಯಾಗಿತ್ತು.

ಹದ್ದುಗಳು ರೆಕ್ಕೆ ಬಡಿದಾಡುವ ಸದ್ದು ಕೇಳಿಸಿಕೊಂಡ ಸಾರ್ವಜನಿಕರೊಬ್ಬರು ಮರದ ಮೇಲೆ ನೋಡಿದಾಗ ಹದ್ದುಗಳ ಚಡಪಡಿಸುವುಕೆ ಕಂಡಿದೆ. ಕೂಡಲೇ ಅವರು ಪ್ರೆಸ್‌ಕ್ಲಬ್‌ ಸಿಬ್ಬಂದಿಗೆ ವಿಷಯ ಹೇಳಿದ್ದಾರೆ. ಕ್ಲಬ್‌ ಸಿಬ್ಬಂದಿ ಅಗ್ನಿಶಾಮಕ ದಳದ ಕಚೇರಿಗೆ ಕರೆ ಮಾಡಿ, ವಿಷಯ ತಿಳಿಸಿ ಬೇಗ ಬನ್ನಿ ಎಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕೆಲವೇ ನಿಮಿಷದಲ್ಲಿ ನೂರಾರು ಮಂದಿ ಪ್ರೆಸ್‌ಕ್ಲಬ್‌ ಆವರಣದಲ್ಲಿ ಸೇರಿ, ಮರದಲ್ಲಿ ಪರದಾಡುತ್ತಿದ್ದ ಹದ್ದುಗಳತ್ತ ದೃಷ್ಟಿ ನೆಟ್ಟರು. ಅಷ್ಟೊಂದು ಜನರನ್ನು ಕಂಡ ಹದ್ದುಗಳು ಗಾಬರಿಯಾಗಿ ಮತ್ತಷ್ಟು ವೇಗವಾಗಿ ರೆಕ್ಕೆ ಬಡಿಯಲಾರಂಭಿಸಿದವು.

ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಜತೆಗೂಡಿ ಹದ್ದುಗಳ ರಕ್ಷಣೆ ಕಾರ್ಯ ಆರಂಭಿಸಿದರು. ಮರಕ್ಕೆ ಏಣಿ ಹಾಕಿ, ಉದ್ದದ ಬಿದಿರಿನ ಗಳ ಹಿಡಿದು ರಕ್ಷಣೆಗೆ ನಿಂತ ಸಿಬಂದಿ ಬರೋಬ್ಬರಿ ಒಂದು ಗಂಟೆ ಕಾರ್ಯಾಚರಣೆಯ ನಂತರ ಹದ್ದುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ನಂತರ ಬಿಬಿಎಂಪಿ ಸಿಬ್ಬಂದಿ ಹದ್ದುಗಳಿಗೆ ಔಷಧೋಪಚಾರ ಮಾಡಿದರು. ಗಾಳಿಪಟದ ದಾರ ರೆಕ್ಕೆಯೊಳಗೆ ಸಿಲುಕಿದ್ದರಿಂದ ರೆಕ್ಕೆಗೆ ಸಣ್ಣ ಗಾಯವಾಗಿದೆ. ಷದೋಪಚಾರ ಮಾಡಿ, ಗಾಯ ಗುಣವಾದ ನಂತರ ಹದ್ದುಗಳನ್ನು ಬಿಡುಗಡೆ ಗೊಳಿಸುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ಮರದ ಕೊಂಬೆಯಲ್ಲಿ ಮೊದಲು ಒಂದು ಹದ್ದು ಗಾಳಿಪಟದ ದಾರಕ್ಕೆ ಸಿಲುಕಿದ್ದನ್ನು ನೋಡಿದೆವು. ಅದೇ ವೇಳೇ ಪಕ್ಕದ ಮತ್ತೂಂದು ಮರದಲ್ಲಿ ಇನ್ನೊಂದು ಹದ್ದು ಕೂಡ ಗಾಳಿಪಟದ ದಾರಕ್ಕೆ ರೆಕ್ಕಿ ಸಿಲುಕಿಸಿಕೊಂಡಿತ್ತು. ಯಾರೂ ನೋಡದೆ ಹೋಗಿದ್ದರೆ ಹದ್ದುಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದವು.
-ರಾಜೇಶ್‌, ಪ್ರೆಸ್‌ಕ್ಲಬ್‌ ಸಿಬ್ಬಂದಿ

ಟಾಪ್ ನ್ಯೂಸ್

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

6-belthanagdy

ಬೆಳ್ತಂಗಡಿ:ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ

Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ

Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ

1-kangg

BJP; ಆಕ್ರೋಶದ ಬಳಿಕ ಹೇಳಿಕೆ ಹಿಂಪಡೆದುಕೊಂಡ ಕಂಗನಾ ರಣಾವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್‌ ಅಮಾನತು

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

3

Crime: ಬುಲೆಟ್‌ ಖರೀದಿಸಲು ಸಾಧ್ಯವಾಗದ್ದಕ್ಕೆ ಹತಾಶೆ; 3 ಬೈಕ್‌ಗಳಿಗೆ ಬೆಂಕಿ ಹಚ್ಚಿದವ ಸೆರೆ

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

2(2)

Vitla: ಟ್ರಾಫಿಕ್‌ ಜಾಮ್‌ ವಿಟ್ಲ ಪೇಟೆಯಲ್ಲಿ ನಿತ್ಯ ಸಂಕಟ

7-uv-fusion

Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.