ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ತಬ್ಧ


Team Udayavani, Nov 30, 2017, 1:32 PM IST

30-Nov-10.jpg

ಕಿನ್ನಿಗೋಳಿ: ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ 2010ರಲ್ಲಿ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗಿದ್ದು, ಜೂನ್‌ ತಿಂಗಳಿನಿಂದ ಘಟಕವೂ ಸ್ತಬ್ಧಗೊಂಡಿದೆ.

ಹದಿನೆಂಟು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 16.80 ಕೋಟಿ ರೂ. ವೆಚ್ಚದ ಈ ಯೋಜನೆ ಏಳು ವರ್ಷ ಆಗುತ್ತ ಬಂದರೂ ಪೂರ್ಣವಾಗಿಲ್ಲ. ಮಂಗಳೂರು ತಾಲೂಕಿನ ಮೂಲ್ಕಿ ವಿಭಾಗದಲ್ಲಿ ಹರಿಯುವ ಶಾಂಭವಿ ನದಿಗೆ ಬಳಕುಂಜೆ ಗ್ರಾಮದ ಬಳಿ ಜಾಕ್‌ವೆಲ್‌ ನಿರ್ಮಿಸಿ ಕೊಲ್ಲೂರು ಪದವಿನಲ್ಲಿ ಟ್ಯಾಂಕ್‌ ರಚಿಸಿ ಗುರುತ್ವಾಕರ್ಷಣೆಯ ಶಕ್ತಿಯಿಂದ ನೀರು ಸಂಗ್ರಹಿಸಿ, ಮೆನ್ನಬೆಟ್ಟು, ಕಟೀಲು, ಕಿನ್ನಿಗೋಳಿ, ಬಳಕುಂಜೆ, ಕಿಲ್ಲಾಡಿ, ಪಡುಪಣಂಬೂರು, ಅತಿಕಾರಿಬೆಟ್ಟು, ಐಕಳ, ಕೆಮ್ರಾಲ, ಹಳೆಯಂಗಡಿ – ಈ 10 ಗ್ರಾ.ಪಂ.ಗಳಿಗೆ ಸಂಬಂಧಿಸಿದ 18 ಗ್ರಾಮಗಳಿಗೆ ಕೊಳವೆ ಮೂಲಕವಾಗಿ ನೀರೊದಗಿಸುವ ಕಾಮಗಾರಿಯನ್ನು ಹೈದರಾಬಾದ್‌ ಮೂಲಕ ಸಾಯಿ ಸುಧೀರ್‌ ಇನ್‌ಫ್ರಾಸ್ಟ್ರಕ್ಟರ್‌ ಸಂಸ್ಥೆಗೆ ವಹಿಸಲಾಗಿತ್ತು. ಈ ಗುತ್ತಿಗೆದಾರರಿಗೆ ಈಗಾಗಲೇ 9.58 ಕೋಟಿ ರೂ. ಪಾವತಿಯಾಗಿದ್ದರೂ ನೀರು ಪೂರೈಕೆಯಾಗದೆ ಗ್ರಾಮಸ್ಥರು ಅತೀವ ತೊಂದರೆ ಅನುಭವಿಸುತ್ತಿದ್ದಾರೆ.

ಸಭೆ ನಡೆಸಿದರೂ ಫ‌ಲವಿಲ್ಲ
ಹತ್ತು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ನೀರು ಪೂರೈಕೆಯ 56 ಟ್ಯಾಂಕ್‌ಗಳಿದ್ದು, ಸದ್ಯ 26ಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಆಪರೇಟರ್‌ ನೇಮಕವಾಗಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಒಬ್ಬರಿದ್ದು, ಅದು ಸಾಲುವುದಿಲ್ಲ. ನೀರು ಶುದ್ಧೀಕರಣ ಘಟಕಕ್ಕೆ ತಜ್ಞರ ನೇಮಕವೂ ಆಗಿಲ್ಲ. ಪೈಪ್‌ಗ್ಳ ಮೂಲಕ ನೀರು ಸರಬರಾಜು ಮಾಡಲಾಗುವುದು. ಮೀಟರ್‌ ಅಳವಡಿಸಿ, ದರ ನಿಗದಿಪಡಿಸಲಾಗುವುದು. ಯೋಜನೆಯ ಸಿಬಂದಿ ವೇತನ ಹಾಗೂ ವಿದ್ಯುತ್‌ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಳೆದ ಬಾರಿ ಜಿ.ಪಂ. ಅಧಿಕಾರಿ ವರ್ಗದ ಸಭೆ ನಡೆಸಿ, ವ್ಯವಸ್ಥೆ ಮಾಡಿದ್ದರೂ ಸಮರ್ಪಕವಾಗಿಲ್ಲ.

ಅವ್ಯವಸ್ಥೆ ಆಗರ
ಕೊಲ್ಲೂರು ಪದವಿನಲ್ಲಿರುವ ಘಟಕದಲ್ಲಿ ಭದ್ರತಾ ಸಿಬಂದಿ / ಕಾವಲುಗಾರರಿಲ್ಲದೆ ಶ್ಮಶಾನ ಮೌನವಾಗಿದೆ. ಸಿಬಂದಿ ವಸತಿಗೃಹಗಳ ಬಾಗಿಲು ಮುರಿದಿದ್ದು, ಅಕ್ರಮ ಚಟುವಟಿಕೆಯ ತಾಣವಾಗಿದೆ. ಮುಖ್ಯ ಗೇಟ್‌ ಕೂಡ ತೆರೆದಿದೆ. ಘಟಕದ ಸುತ್ತ ಹುಲ್ಲು ಬೆಳೆದಿದ್ದು, ಒಂದು ಸಲ ಜೆಸಿಬಿಯಿಂದ ಕೆಲಸ
ಮಾಡಿದಂತೆ ಗೋಚರವಾಗುತ್ತಿದೆ. ಐಕಳ, ಕಿನ್ನಿಗೋಳಿ, ಮೆನ್ನಬೆಟ್ಟು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗೋಚರಿಸಿದೆ. ಬಹು ಗ್ರಾಮ ಯೋಜನೆ ಪೂರ್ಣವಾಗಿಅನುಷ್ಠಾನಗೊಂಡರೆ ಉಪಯೋಗ ಆದೀತು. ಸಮಿತಿಯ ಸಭೆ ನಡೆಸಿದ್ದರೂ ಜಿ.ಪಂ. ಸದಸ್ಯರಿಗೆ ಯಾವುದೇ ಮಾಹಿತಿ ಇರಲಿಲ್ಲವಂತೆ.

ಕಳಪೆ ಕಾಮಗಾರಿ, ತಾಂತ್ರಿಕ ವೈಫ‌ಲ್ಯ
ಕಿನ್ನಿಗೋಳಿ ಕುಡಿಯವ ನೀರಿನ ಯೋಜನೆಯ ಘಟಕ ಸದ್ಯ ಸಂರ್ಪೂಣ ಸ್ಥಗಿತವಾಗಿದೆ. ಯಂತ್ರಗಳು ಚಾಲನೆ ಇಲ್ಲದೆ ತುಕ್ಕು ಹಿಡಿದಿವೆ. ಈ ಬಗ್ಗೆ ಜಿಲ್ಲಾ ಪಂಚಾಯತ್‌ ಸಭೆಯಲ್ಲಿ ಪ್ರಶ್ನಿಸಲಾಗುವುದು ಹಾಗೂ ಅಧಿಕಾರಿಗಳ ಮೂಲಕ ಇದರ ಕಾರಣ ತಿಳಿದು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ 7000 ಘಟಕಗಳು ಮಾರ್ಚ್‌ 16ರ ಒಳಗೆ ಪೂರ್ತಿಯಾಗುತ್ತವೆ ಎಂದು ವಿಧಾನಸಭೆ, ಪರಿಷತ್‌ಗಳಲ್ಲಿ ಘೋಷಣೆ ಮಾಡಿದೆ. ಕುಂಟುತ್ತಾ ಸಾಗಿರುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ ಕಾಮಗಾರಿಗೆ ಸ್ಪಷ್ಟ ನಿದರ್ಶನ. ಎಲ್ಲ ಅವಾಂತರಗಳಿಗೂ ಸರಕಾರವೇ ನೇರ ಹೊಳೆ. ಕಳಪೆ ಕಾಮಗಾರಿ ಹಾಗೂ ತಾಂತ್ರಿಕ ವೈಫ‌ಲ್ಯದಿಂದ ಹೀಗಾಗಿದೆ.
ವಿನೋದ್‌ ಕುಮಾರ್‌ ಬೊಳ್ಳೂರು, ಜಿ.ಪಂ. ಸದಸ್ಯರು

ರಘುನಾಥ ಕಾಮತ್‌ ಕೆಂಚನಕೆರೆ 

ಟಾಪ್ ನ್ಯೂಸ್

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು

Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು

Bishnoi: ಬಿಷ್ಣೋಯಿನ ಕೊಂದ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mangaluru: ಬಸ್‌ ಸಿಬಂದಿ ನಡುವೆ ಜಗಳ; ಕನ್ನಡಿಗೆ ಹಾನಿ; 4 ಸಾವಿರ ರೂ. ನಷ್ಟ

2

Mangaluru: ಹೂಡಿಕೆ ಆಮಿಷ; ಲಕ್ಷಾಂತರ ರೂ. ವರ್ಗಾಯಿಸಿಕೊಂಡು ವಂಚನೆ

death

Mangaluru: ಅಪರಿಚಿತ ಶವ ಪತ್ತೆ; ಸೂಚನೆ

12

Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

10(2)

Mangaluru: ಸರಕಾರಿ ಶಾಲಾ ಶೌಚಾಲಯಗಳಿಗೆ ಹೊಸ ರೂಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು

Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು

Bishnoi: ಬಿಷ್ಣೋಯಿನ ಕೊಂದ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.