ಇಂದಿನಿಂದ ಹಾಕಿ ವರ್ಲ್ಡ್ ಲೀಗ್‌ ಫೈನಲ್‌ ಭಾರತಕ್ಕೆ ಅಗ್ನಿಪರೀಕ್ಷೆ


Team Udayavani, Dec 1, 2017, 7:50 AM IST

Ban01121714M.jpg

ಭುವನೇಶ್ವರ: ಪ್ರತಿಷ್ಠಿತ ಹಾಕಿ ವರ್ಲ್ಡ್ ಲೀಗ್‌ (ಎಚ್‌.ಡಬ್ಲ್ಯು.ಎಲ್‌.) ಸ್ಪರ್ಧೆಗೆ ಭುವನೇಶ್ವರ ಸಜ್ಜಾಗಿದೆ. ಡಿ. ಒಂದರಿಂದ ಡಿ. 10ರ ತನಕ ನಡೆಯುವ ಈ ಕೂಟದಲ್ಲಿ ವಿಶ್ವದ 8 ಬಲಾಡ್ಯ ತಂಡಗಳು ಪಾಲ್ಗೊಳ್ಳಲಿದ್ದು, ಇದರಲ್ಲಿ ಇತ್ತೀಚೆಗಷ್ಟೇ ಏಶ್ಯನ್‌ ಚಾಂಪಿಯನ್‌ ಆಗಿ ಮೂಡಿಬಂದ ಆತಿಥೇಯ ಭಾರತವೂ ಸೇರಿದೆ.

ಮನ್‌ಪ್ರೀತ್‌ ಸಿಂಗ್‌ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಭಾರತದ ಪಾಲಿಗೆ ಇದು ಮತ್ತೂಮ್ಮೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಎದುರಾಗಿರುವ ಸುವರ್ಣಾವಕಾಶ. ಜತೆಗೆ ತವರಿನಲ್ಲೇ ಎದುರಾಗುತ್ತಿರುವ ಅಗ್ನಿಪರೀಕ್ಷೆಯೂ ಹೌದು. ಶುಕ್ರವಾರದ ಮೊದಲ ಪಂದ್ಯದಲ್ಲೇ ಭಾರತ ತಂಡ ಹಾಲಿ ಚಾಂಪಿಯನ್‌ ಖ್ಯಾತಿಯ ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಕೋಚ್‌ ಮರಿನ್‌ಗೆ ದೊಡ್ಡ ಸವಾಲು
ವಿಶ್ವದ ನಂ.2 ತಂಡವಾಗಿರುವ ಆಸ್ಟ್ರೇಲಿಯ ವಿರುದ್ಧ ಭಾರತ ಇತ್ತೀಚಿನ ವರ್ಷಗಳಲ್ಲಿ ಗೆಲುವಿನ ರುಚಿ ಸವಿದದ್ದಿಲ್ಲ. ಕಳೆದ ಚಾಂಪಿಯನ್ಸ್‌ ಟ್ರೋಫಿ, ಸುಲ್ತಾನ್‌ ಅಜ್ಲಾನ್‌ ಷಾ ಹಾಕಿ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ಶರಣಾಗಿದೆ. ಹೀಗಾಗಿ ನೂತನ ಕೋಚ್‌ ಶೋರ್ಡ್‌ ಮರಿನ್‌ ಮುಂದೆ ಭಾರೀ ದೊಡ್ಡ ಸವಾಲಿದೆ.

ಢಾಕಾದಲ್ಲಿ ನಡೆದ ಏಶ್ಯ ಕಪ್‌ ಪಂದ್ಯಾವಳಿಯಲ್ಲಿ ಮೊದಲ ಸಲ ಭಾರತದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ ಶೋರ್ಡ್‌ ಮರಿನ್‌ ಇದರಲ್ಲಿ ಧಾರಾಳ ಯಶಸ್ಸು ಕಂಡಿರಬಹುದು. ಆದರೆ ಹಾಕಿ ಕೂಟವೊಂದು ಏಶ್ಯದಿಂದ ವಿಶ್ವ ಮಟ್ಟಕ್ಕೆ ವಿಸ್ತರಿಸಿಕೊಳ್ಳುವಾಗ ಎದುರಾಗುವ ಸವಾಲು ನಿಜಕ್ಕೂ ಕಠಿನ. ಇಲ್ಲಿನ ಒಂದೊಂದು ತಂಡವೂ ಜಾಗತಿಕ ಮಟ್ಟದಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಲು ಹೆಸರುವಾಸಿ. ಅಲ್ಲದೇ ಮುಂದಿನ ವರ್ಷ ಏಶ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಹಾಕಿ ವಿಶ್ವಕಪ್‌ ಪಂದ್ಯಾವಳಿ ಕಾದು ಕುಳಿತಿರುವಾಗ ಭಾರತವನ್ನು ವಿಶ್ವ ಮಟ್ಟದ ಹೋರಾಟಕ್ಕೆ ಅಣಿಗೊಳಿಸಲು ಮರಿನ್‌ ಭುವನೇಶ್ವರದಿಂದಲೇ ಹೋರಾಟದ ಸ್ಕೆಚ್‌ ರೂಪಿಸಬೇಕಾಗುತ್ತದೆ.

ಸಮಾಧಾನವೆಂದರೆ, 2015ರ ರಾಯ್‌ಪುರ ಟೂರ್ನಿಯಲ್ಲಿ ಭಾರತ ಕಂಚಿನ ಪದಕ ಪಡೆದಿತ್ತು ಎಂಬುದು. ಇದನ್ನು ಬೆಳ್ಳಿ ಅಥವಾ ಚಿನ್ನವನ್ನಾಗಿ ಪರಿವರ್ತಿಸುವುದು ಭಾರತದ ಗುರಿ ಆಗಿರಬೇಕು. ಆಗ ಲೀಗ್‌ ಹಂತದಲ್ಲಿ ಕನಿಷ್ಠ 2 ಪಂದ್ಯಗಳನ್ನಾದರೂ ಗೆಲ್ಲುವುದು ಅನಿವಾರ್ಯ. ಆಸ್ಟ್ರೇಲಿಯದ ಬಳಿಕ ಇಂಗ್ಲೆಂಡ್‌, ಯುರೋಪಿಯನ್‌ ಪವರ್‌ಹೌಸ್‌ ಜರ್ಮನಿ ತಂಡಗಳ ಸವಾಲು ಭಾರತದ ಮುಂದಿದೆ.

ರೋಲ್ಯಾಂಟ್‌ ಓಲ್ಟಮನ್ಸ್‌ ಜಾಗಕ್ಕೆ ಬಂದ ಶೋರ್ಡ್‌ ಮರಿನ್‌, ಭಾರತೀಯ ಹಾಕಿ ಆಟಗಾರರಿಗೆ ಆರಂಭದಿಂದಲೇ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಕೋಚ್‌ ಎಂಬುದನ್ನು ಮರೆಯುವಂತಿಲ್ಲ. ಆಟಗಾರರಿಗೆ ಅವರದೇ ಶೈಲಿಯಲ್ಲಿ ಆಡಲು ಅವಕಾಶ ಕಲ್ಪಿಸಿದ್ದರ ಫ‌ಲವಾಗಿ ಭಾರತಕ್ಕೆ 10 ವರ್ಷಗಳ ಬಳಿಕ ಏಶ್ಯ ಕಪ್‌ ಒಲಿಯಿತು ಎಂದು ವಿಶ್ಲೇಷಿಸಲಾಗುತ್ತದೆ. ವಿಶ್ವ ಹಾಕಿ ಫೈನಲ್ಸ್‌ನಲ್ಲಿ ಮರಿನ್‌ ಇದೇ ತಂತ್ರವನ್ನು ಮುಂದುವರಿಸುವ ಸಾಧ್ಯತೆ ಇದೆ.

“ಡೈನಾಮಿಕ್‌ ಆಟಗಾರ’ನೆಂದೇ ಗುರುತಿಸಲ್ಪಡುವ ನಾಯಕ ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಭಾರತೀಯ ತಂಡ ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಸಮತೋಲನದಿಂದ ಕೂಡಿದೆ. ಹರ್ಮನ್‌ಪ್ರೀತ್‌, ಸುಮಿತ್‌, ದೀಪ್ಸನ್‌, ಗುರ್ಜಂತ್‌, ವರುಣ್‌ ಕುಮಾರ್‌ ಅವರೆಲ್ಲ ತಂಡದ ಪ್ರತಿಭಾನ್ವಿತ ಯುವ ಆಟಗಾರರು. ಕಳೆದ ವರ್ಷದ ಜೂನಿಯರ್‌ ವಿಶ್ವಕಪ್‌ನಲ್ಲಿ ಭರವಸೆಯ ಆಟವಾಡಿದ ಛಾತಿ ಇವರದು. ಅನುಭವಿಗಳಾದ ರೂಪಿಂದರ್‌ ಪಾಲ್‌, ಲಾಕ್ರಾ ಗಾಯದಿಂದ ಚೇತರಿಸಿಕೊಂಡು ಬಹಳ ಸಮಯದ ಬಳಿಕ ತಂಡಕ್ಕೆ ಮರಳಿದ್ದಾರೆ.

ಆಸೀಸ್‌ ಫೇವರಿಟ್‌
ಆಸ್ಟ್ರೇಲಿಯ ಕೂಡ ನೂತನ ತರಬೇತುದಾರನ ಸೇವೆ ಪಡೆದಿದೆ. ಕಳೆದ ಕೆಲವು ವರ್ಷಗಳಿಂದ ನ್ಯೂಜಿಲ್ಯಾಂಡ್‌ ತಂಡದ ಪರ ಉತ್ತಮ ನಿರ್ವಹಣೆ ತೋರಿದ ಕಾಲಿನ್‌ ಬ್ಯಾಚ್‌ ಈಗ ಕಾಂಗರೂ ಕೋಚ್‌ ಆಗಿದ್ದಾರೆ. ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡ ಸಹಜವಾಗಿಯೇ ಆಸ್ಟ್ರೇಲಿಯದ ಮೇಲಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 6ನೇ ಸ್ಥಾನಕ್ಕೆ ಕುಸಿದುದನ್ನು ಬಿಟ್ಟರೆ ಕಳೆದ 4 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯ ವಿಶ್ವ ಹಾಕಿಯಲ್ಲಿ ತನ್ನ ಪ್ರಭುತ್ವ ಉಳಿಸಿಕೊಂಡು ಬಂದಿರುವುದನ್ನು ಮರೆಯುವಂತಿಲ್ಲ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಆಸ್ಟ್ರೇಲಿಯವೇ ನೆಚ್ಚಿನ ತಂಡವಾಗಿ ಗುರುತಿಸಲ್ಪಡುತ್ತಿದೆ.

ಭಾರತದ ಪಂದ್ಯಗಳು
ದಿನಾಂಕ    ಪಂದ್ಯ    ಸಮಯ

ಡಿ. 1    ಭಾರತ-ಆಸ್ಟ್ರೇಲಿಯ    ಸಂಜೆ 7.30
ಡಿ. 2    ಭಾರತ-ಇಂಗ್ಲೆಂಡ್‌    ಸಂಜೆ 7.30
ಡಿ. 4    ಭಾರತ-ಜರ್ಮನಿ    ಸಂಜೆ 7.30

“ಎ’ ವಿಭಾಗ: ಆರ್ಜೆಂಟೀನಾ, ಬೆಲ್ಜಿಯಂ, ಹಾಲೆಂಡ್‌, ಸ್ಪೇನ್‌
“ಬಿ’ ವಿಭಾಗ: ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌, ಜರ್ಮನಿ

ಭಾರತ ತಂಡ:
ಗೋಲ್‌ ಕೀಪರ್
: ಆಕಾಶ್‌ ಚಿಕ್ತೆ, ಸೂರಜ್‌ ಕರ್ಕೇರ.
ಡಿಫೆಂಡರ್: ದೀಪ್ಸನ್‌ ಟಿರ್ಕಿ, ಅಮಿತ್‌ ರೋಹಿದಾಸ್‌, ವರುಣ್‌ ಕುಮಾರ್‌, ಬೀರೇಂದ್ರ ಲಾಕ್ರಾ, ಹರ್ಮನ್‌ಪ್ರೀತ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌.
ಮಿಡ್‌ಫಿàಲ್ಡರ್: ಮನ್‌ಪ್ರೀತ್‌ ಸಿಂಗ್‌ (ನಾಯಕ), ಎಸ್‌.ಕೆ. ಉತ್ತಪ್ಪ, ಚಿಂಗ್ಲೆನ್ಸನಾ ಸಿಂಗ್‌ (ಉಪನಾಯಕ), ಸುಮಿತ್‌, ಕೊಥಜಿತ್‌ ಸಿಂಗ್‌.
ಫಾರ್ವರ್ಡ್ಸ್‌: ಆಕಾಶ್‌ದೀಪ್‌ ಸಿಂಗ್‌, ಲಲಿತ್‌ ಉಪಾಧ್ಯಾಯ, ಗುರ್ಜಂತ್‌ ಸಿಂಗ್‌, ಎಸ್‌.ವಿ. ಸುನೀಲ್‌, ಮನ್‌ದೀಪ್‌ ಸಿಂಗ್‌.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.