![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 1, 2017, 7:30 AM IST
ಬೆಂಗಳೂರು: ಬಿಎಸ್ಎನ್ಎಲ್ನ ಉತ್ತಮ ನೆಟ್ವರ್ಕ್ ಮತ್ತು ಗುಣಮಟ್ಟದ ಸೇವೆಗಳಿಗಾಗಿ ಮೂರು ವರ್ಷಗಳಲ್ಲಿ
ಕರ್ನಾಟಕಕ್ಕಾಗಿ ಕೇಂದ್ರ ಸರ್ಕಾರ 1,500 ಕೋಟಿ ರೂ.ಗಿಂತ ಅಧಿಕ ಹಣ ಖರ್ಚು ಮಾಡಿದೆ ಎಂದು ಕೇಂದ್ರ ಸಂಹವನ
ಖಾತೆ (ಸ್ವತಂತ್ರ ಖಾತೆ) ರಾಜ್ಯ ಸಚಿವ ಮನೋಜ್ ಸಿನ್ಹ ತಿಳಿಸಿದರು.
ನಗರದ ಹೋಟೆಲ್ ಲಲಿತ್ ಅಶೋಕ್ನಲ್ಲಿ ಗುರುವಾರ ಭಾರತ್ ಸಂಚಾರ್ ನಿಗಮ ಲಿ., (ಬಿಎಸ್ಎನ್ಎಲ್)
ಹಮ್ಮಿಕೊಂಡಿದ್ದ “ಎನ್ಎಂಎಸ್- ಬ್ರಾಡ್ಬ್ಯಾಂಡ್’ ಮತ್ತು “ಎನ್ಎಂಎಸ್- ಎಂಪಿಎಲ್ಎಸ್’ ವ್ಯವಸ್ಥೆ ಲೋಕಾರ್ಪಣೆ
ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಜಿಎಸ್ಎನ್, ಒಎಫ್ಸಿ, ವೈ- ಫೈ ಸೇರಿ ವಿವಿಧ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ
ಹಲವು ಗುಣಮಟ್ಟದ ಸೇವೆಗಳಿಗೆ ಈ ಹಣ ವಿನಿಯೋಗಿಸಲಾಗಿದೆ. ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ಇದೆ ಎಂದರು.
ಡಿಜಿಟಲ್ ಜವಾಬ್ದಾರಿ: ಸರ್ಕಾರದ ಕನಸು “ಡಿಜಿಟಲ್ ಇಂಡಿಯಾ’ ಸಾಕಾರಗೊಳ್ಳುವಲ್ಲಿ ಬಿಎಸ್ಎನ್ಎಲ್
ಜವಾಬ್ದಾರಿ ಹೆಚ್ಚಿದೆ. ಇದನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಸಚಿವ ಮನೋಜ್ ಸಿನ್ಹ ವಿಶ್ವಾಸ
ವ್ಯಕ್ತಪಡಿಸಿದರು. ದೇಶದ ಒಂದು ಲಕ್ಷ ಗ್ರಾಮಗಳಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವ ಯೋಜನೆ ಈಗಾಗಲೇ
ಕೈಗೆತ್ತಿಕೊಂಡಿದ್ದು, ಇದರಡಿ ಕೈಗೆತ್ತಿಕೊಂಡ ರಾಜ್ಯದ ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವ ಕೆಲಸ
ಬಹುತೇಕ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಒಂದೂವರೆ ಲಕ್ಷ ಗ್ರಾಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ
ಎಂದು ಮಾಹಿತಿ ನೀಡಿದರು.
ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ ಅರುಣಾ ಸುಂದರರಾಜನ್ ಮಾತನಾಡಿ, ಬಿಎಸ್ಎನ್ ಎಲ್ ಡಿಜಿಟಲ್ ಬಿಲ್ ಪಾವತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.