ಮಾಣಿಕಪ್ರಭು ಜಾತ್ರಾ ಮಹೋತ್ಸವ ಸಂಪನ್ನ


Team Udayavani, Dec 6, 2017, 11:50 AM IST

bid-1.jpg

ಹುಮನಾಬಾದ: ಮಾಣಿಕಪ್ರಭುಗಳ 200ನೇ ಜಯಂತಿ, ದತ್ತ ಜಯಂತಿ ಹಾಗೂ ಮಾಣಿಕಪ್ರಭುಗಳ ಜಾತ್ರಾಮಹೋತ್ಸವವು, ಅದ್ಧೂರಿ ಸಂಗೀತ ದರ್ಬಾರ್‌ ಹಾಗೂ ಜಂಬು ಸವಾರಿಯ ಶೋಭಾ ಯಾತ್ರೆ ಮೂಲಕ ಸೋಮವಾರ ಅಂತ್ಯಗೊಂಡಿತು.

ರವಿವಾರ ರಾತ್ರಿ ಪ್ರಭು ಸಂಸ್ಥಾನದಲ್ಲಿ ಡಾ| ಜ್ಞಾನರಾಜ ಮಾಣಿಕಪ್ರಭುಗಳು ರಾಜ ಸಿಂಹಾಸನದ ಮೇಲೆ ಆಸೀನರಾಗಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಿ ಸಂಗೀತ ದರ್ಬಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಣಿಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳಿಂದ ಸಮೋಹ ಗಾಯನದ ಮೂಲಕ ಸಂಗೀತ ಕಾರ್ಯಕ್ರಮ ಆರಂಭಗೊಂಡಿತ್ತು. ನಂತರ ಪ್ರಖ್ಯಾತ ಕಥಕ್‌ ನೃತ್ಯಗಾರರಾದ ಶ್ರೀ ರಾಘವರಾಜ ಭಟ್ಟ ಹಾಗೂ ಮಂಗಲ ಭಟ್ಟ ಅವರಿಂದ ಮಾಕನ ಚೋರಿಲಿಲಾ ಗರ್ಬಾ, ತಿನ ತಾಲ್‌ ಮೂಲಕ ಅಮೋಘ ಕಥಕ್‌ ನರ್ತನೆ ಮಾಡಿ ನೆರೆದ ಸಾವಿರಾರು ಭಕ್ತರ ಮನ ಸೂರೆಗೊಳಿಸಿದರು. ನಂತರ ಖ್ಯಾತ ಗಾಯಕಿ ಸಂಗೀತಾ ಕಟ್ಟಿಯವರು ಗಾಯನ ಸೇವೆ ಸಲ್ಲಿಸಿದರು.

ರೂಪಾಲಿ ದೇಶಪಾಂಡೆ ಕಥಕ್‌ ನೃತ್ಯದಲ್ಲಿ ಮೀರಾಗಾಯನ ಅತ್ಯಂತ ಮನಮೋಹಕವಾಗಿ ಪ್ರಸ್ತುತ ಪಡಿಸಿದರು. ಜಯನ ಕೇಶಕರ ಅವರಿಂದ ಗಾಯನ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಖ್ಯಾತಿ ಗಾಯಕರು ತಮ್ಮ ಸಂಗೀತ ಸೇವೆಯನ್ನು ಪ್ರಭು ಚರಣಗಳಿಗೆ ಸಲ್ಲಿಸಿದರು.

ಈ ವೇಳೆ ಆನಂದರಾಜ ಪ್ರಭುಗಳು ಮಾತನಾಡಿ, ಪ್ರಭುಗಳ 200ನೇ ಜಯಂತಿ ನಿಮಿತ್ತ ಆಗಮಿಸಿದ ಅನೇಕ ರಾಷ್ಟ್ರ ಹಾಗೂ ರಾಜ್ಯಮಟ್ಟದ ಮಹಾಸ್ವಾಮಿಗಳು, ಸಂತರು, ಮಠಾಧಿಧೀಶರು, ಸಂಗೀತ ಕಲಾವಿದರು ಪ್ರಭುಗಳ ಅನುಕರಣೆಗೆ ಒಳಗಾಗಿದ್ದಾರೆ. ಅನೇಕ ಸಂಗೀತ ಕಲಾವಿದರು ಕರೆ ಮಾಡಿ ಮಾಣಿಕನಗರ ಸಂಗೀತದ ತವರು, ಸಂಗೀತದ ಸ್ವರ್ಗವೆ ಇಲ್ಲಿದೆ ಎಂದು ವರ್ಣಣೆ ಮಾಡಿದ್ದಾರೆ. 

ಇನ್ನು ಅನೇಕ ಕಲಾವಿದರು ಕೂಡ ತಮಗೆ ಅವಕಾಶ ನೀಡುವಂತೆ ಕೂಡ ಕೇಳಿಕೊಂಡಿದ್ದಾರೆ. ಪ್ರಭುಗಳ ಪ್ರತಿಯೊಂದು ಉತ್ಸವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನರು ಸೇರಿದಂತೆ ತೆಲಂಗಾಣ ಹಾಗೂ ಮಹಾರಾಷ್ಟ್ರದ ನೂರಾರು ಭಕ್ತರು ಅಲ್ಲಿಯೆ ಉಳಿದುಕೊಂಡು ಪ್ರಭು ಸೇವೆ ಸಲ್ಲಿಸಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ನಿರಂತರ
ಸೇವೆಸಲ್ಲಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು. ಅದೇರೀತಿ ಸಚಿವ ಈಶ್ವರ ಖಂಡ್ರೆ ಹಾಗೂ ಸ್ಥಳೀಯ ಶಾಸಕ ರಾಜಶೇಖರ ಪಾಟೀಲರಿಗೂ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಪರಂಪರೆಯಂತೆ ಸಂಸ್ಥಾನಕ್ಕೆ ವಿಶೇಷ ಸೇವೆ ಸಲ್ಲಿಸಿದ ಭಕ್ತರಿಗೆ ಮಾಣಿಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಪೈಕಿ ಶಾಮರಾವ್‌ ಸಗ್ರೋಳಿಕರ್‌, ದೇವಿದಾಸರಾವ್‌ ದೇಶಮುಖ, ವೆಂಕಟರಾವ್‌ ದೇಶಮುಖ ಕೃಷ್ಣಾಪುರ, ಹಣಮಂತಪ್ಪ ಸೋನಾತೆ ಮಾಣಿಕನಗರ, ಸುಭಾಷರಾವ್‌ ರಾವಬಾ ಮಾಣಿಕನಗರ ಅವರನ್ನು ಶ್ರೀಗಳು ಸನ್ಮಾನಿಸಿದರು. 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: The accused in the ATM robbery-shootout case have finally been identified.

Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್‌ ಪ್ರಕರಣದ ಆರೋಪಿಗಳ ಗುರುತು ಪತ್ತೆ

Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ

Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ

Bidar: farmer ends his life

Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು

Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ

Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ

Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.