ಸ್ಥಳೀಯರಿಂದ ರಸ್ತೆ ಉಬ್ಬು ನಿರ್ಮಾಣ
Team Udayavani, Dec 8, 2017, 4:29 PM IST
ಉಪ್ಪಿನಂಗಡಿ: ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿರುವ ಬಾರ್ಯ ಗ್ರಾ.ಪಂ. ವ್ಯಾಪ್ತಿಯ ಗಿರಿ ಗುಡ್ಡೆ ಎಂಬಲ್ಲಿ ರಸ್ತೆಗೆ ಉಬ್ಬುಗಳನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದರು. ಆದರೆ ಇಲಾಖೆ ಸ್ಪಂದಿಸದೇ ಇರುವುದರಿಂದ ಗ್ರಾಮಸ್ಥರು ತಾವೇ ಹಣ ಹಾಕಿ ರಸ್ತೆ ಉಬ್ಬು ನಿರ್ಮಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಪಘಾತ ವಲಯ
ಬಂಟ್ವಾಳವನ್ನು ಸಂಪರ್ಕಿಸುವ ಕಲ್ಲೇರಿ- ಗೋದಾಮುಗುಡ್ಡೆ ಸಡಕ್ ರಸ್ತೆಯು ಗಿರಿಗುಡ್ಡೆ ಎಂಬಲ್ಲಿ ಅಪಾಯಕಾರಿ ತಿರುವನ್ನು ಹೊಂದಿದೆ. ಇಲ್ಲಿ ರಸ್ತೆ ಕೂಡ ಸಮತಟ್ಟಾಗಿರದೇ ತಗ್ಗು ಪ್ರದೇಶದತ್ತ ವಾಲಿಕೊಂಡಂತಿದೆ. ಈ ಪ್ರದೇಶದಲ್ಲಿ ದಿನ ನಿತ್ಯ ಅಪಘಾತಗಳು ನಡೆಯುತ್ತಿದ್ದವು. ಕಳೆದ ಕೆಲವು ದಿನಗಳ ಹಿಂದೆ ಪಿಕಪ್ ವಾಹನವೊಂದು ರಿಕ್ಷಾಕ್ಕೆ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ಎಲ್ಕೆಜಿ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ. ಅದಾದ ಕೆಲವು ದಿನಗಳ ಅಂತರದಲ್ಲಿ ಜೀಪು-ಆಮ್ನಿ ಪರಸ್ಪರ ಢಿಕ್ಕಿಯಾಗಿ ಹಲವು ಮಂದಿ ಗಾಯಗೊಂಡಿದ್ದರು. ವಾಹನಗಳು ವೇಗದಲ್ಲಿ ಬರುವುದರಿಂದ ತಿರುವಿನಲ್ಲಿ ಅಪಘಾತ ನಡೆಯುತ್ತಿದ್ದು, ವಾಹನಗಳ ವೇಗ ನಿಯಂತ್ರಿಸಲು ಇಲ್ಲಿ ರಸ್ತೆ ಉಬ್ಬುಗಳನ್ನು ಹಾಕಬೇಕೆಂಬ ಒತ್ತಾಯ ಸ್ಥಳೀಯ ರದ್ದಾಗಿತ್ತು.
ಅಪಘಾತ ನಡೆದ ಸಂದರ್ಭ ಸ್ಥಳಕ್ಕೆ ಬರುತ್ತಿದ್ದ ಸಂಚಾರಿ ಪೊಲೀಸರನ್ನೂ ಈ ಬಗ್ಗೆ ಸ್ಥಳೀಯರು ಒತ್ತಾಯಿಸಿದ್ದರು. ಅವರು ಕೂಡ ಇದನ್ನು ಅಪಾಯಕಾರಿ ರಸ್ತೆ ಎಂದು ದೃಢಪಡಿಸಿದ್ದು, ಪಿಡಬ್ಲ್ಯುಡಿ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿರುವುದಾಗಿ ಸ್ಥಳೀಯರಿಗೆ ತಿಳಿಸಿದ್ದರು. ಆದರೂ ಈವರೆಗೆ ರಸ್ತೆಗೆ ಉಬ್ಬು ನಿರ್ಮಿಸಲು ಇಲಾಖೆ ಮುಂದಾಗಿರಲಿಲ್ಲ.
ಸ್ಥಳೀಯರ ಸಹಕಾರ
ಪ್ರತಿದಿನ ನಡೆಯುವ ಅಪಘಾತಗಳಿಂದ ಬೇಸತ್ತ ಸ್ಥಳೀಯರು ಇಲ್ಲಿ ತಾವೇ ರಸ್ತೆ ಉಬ್ಬು ನಿರ್ಮಿಸುವ ತೀರ್ಮಾನಕ್ಕೆ ಬಂದರಲ್ಲದೆ, ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಇಲಾಖೆಗಳ ಮಾರ್ಗದರ್ಶನ ಪಡೆದು ತಿರುವಿಗಿಂತ ಸ್ವಲ್ಪ ದೂರದಲ್ಲಿ ರಸ್ತೆ ಉಬ್ಬು ನಿರ್ಮಿಸಿದ್ದಾರೆ. ವಾಹನ ಸವಾರರಿಗೆ ಉಬ್ಬು ಎದ್ದು ಕಾಣುವಂತೆ ಅದಕ್ಕೆ ಬಿಳಿ ಹಾಗೂ ಹಳದಿ ಬಣ್ಣ ಕೂಡ ಬಳಿಯಲಾಗಿದೆ. ಅಲ್ಲದೆ, ಜೆಸಿಬಿ ಮೂಲಕ ರಸ್ತೆಯ ಇಕ್ಕೆಲಗಳಲ್ಲಿದ್ದ ಗಿಡಗಂಟಿಗಳನ್ನು ತೆಗೆದು ರಸ್ತೆಯನ್ನು ಅಗಲಗೊಳಿಸಲಾಗಿದೆ.
ಗ್ರಾ.ಪಂ. ಮಾಜಿ ಸದಸ್ಯ ಸುಲೈಮಾನ್, ಹಾಲಿ ಸದಸ್ಯ ಧರ್ನಪ್ಪ ಗೌಡ, ಅಶ್ರಫ್, ಬಾರ್ಯ ಸಿಎ ಬ್ಯಾಂಕ್ ಅಧ್ಯಕ್ಷ ಸುಬ್ರ ಹ್ಮಣ್ಯ, ಸ್ಥಳೀಯರಾದ ಪ್ರಶಾಂತ್ ಜೈನ್, ಮಜೀದ್, ನಾಗೇಶ್ ಪೂಜಾರಿ ಸೇರಿದಂತೆ ವಿವಿಧ ಸಂಘ ಟನೆಗಳು, ಸ್ಥಳೀಯರ ಸಹಕಾರದಿಂದ ಈ ಕಾರ್ಯ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vishwa Hindu Parishad: ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಲಿ: ಭಂಡಾರಕೇರಿ ಶ್ರೀ
Shiruru Landslide Tragedy: ಟ್ಯಾಂಕರ್ ಎಂಜಿನ್, ಸ್ಕೂಟಿ ಪತ್ತೆ
Election Schedule: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆ ನೀತಿ ಸಂಹಿತೆ: ಮಾರ್ಗಸೂಚಿ
Badminton; ಅನ್ಮೋಲ್ ಖರಬ್ಗೆ ಬ್ಯಾಡ್ಮಿಂಟನ್ ಪ್ರಶಸ್ತಿ
Duleep Trophy:ಇಂಡಿಯಾ ಎ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.