ಲವ್‌ ಬ್ರೇಕ್ ಅಪ್ ಪ್ಯಾಚ್ ಅಪ್ ಮದುವೆ!


Team Udayavani, Dec 16, 2017, 12:41 PM IST

kohli-anushka.jpg

ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಕ್ರಿಕೆಟ್‌ ಜಗತ್ತಿನಲ್ಲಿ ಹೊಸಮೈಲಿಗಲ್ಲು ಸ್ಥಾಪಿಸುತ್ತಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ನ‌ ಮುದ್ದು ಮುಖದ ಹುಡುಗಿ ಅನುಷ್ಕಾ ಶರ್ಮ ನಡುವಿನ ಪ್ರೇಮ ಹಸೆಮಣೆ ಏರಿಸಿದೆ. ಈ ತಾರಾ ಜೋಡಿಯ ಪ್ರೇಮವು ಹಲವು ಏಳು ಬೀಳು ಕಂಡಿದೆ. ಇನ್ನೇನು ಇಬ್ಬರ ಸಂಬಂಧ ಮುರೀತು, ಮತ್ತೆ ಯಾವತ್ತೂ ಇವರು ಒಂದಾಗಲ್ಲ ಅನ್ನುವ ಮಟ್ಟಕ್ಕೂ ಹೋಗಿದೆ. ಇವರ ಪ್ರೇಮದ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.

ಜಾಹೀರಾತಿನಲ್ಲಿ ಮೊದಲ ಭೇಟಿ: ಅದು, 2013ರ ಸಮಯ. ಅದಾಗಲೇ ಕೊಹ್ಲಿ ಕ್ರಿಕೆಟ್‌ನಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ. ಧೋನಿ ನಂತರ ಕೊಹ್ಲಿಯೇ ನಾಯಕ ಅನ್ನುವ ಕೂಗು ಆಗಲೇ ಎದ್ದಿತ್ತು. ಹೀಗಾಗಿ ಜಾಹೀರಾತು ಕಂಪನಿಗಳು ಕೊಹ್ಲಿಯ ಹಿಂದೆ ಬಿದ್ದಿದ್ದವು. ಶಾಂಪೂವೊಂದರ ಜಾಹೀರಾತಿಗೆ ಕೊಹ್ಲಿ ಸಹಿ ನೀಡಿದ್ದ. ಅತ್ತ ಅನುಷ್ಕಾ ಕೂಡ ಅದೇ ಜಾಹೀರಾತಿನಲ್ಲಿದ್ದರು. ಈ ಇಬ್ಬರಿಂದ ಮೊದಲ ಬಾರಿಗೆ ಜಾಹೀರಾತು ಮಾಡಿಸಲಾಯಿತು. ಇದೇ ಪರಿಚಯ ಮುಂದೇ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿತು.

ನ್ಯೂಜಿಲೆಂಡ್‌ನ‌ಲ್ಲಿ ಸಿಕ್ಕಿಬಿದ್ದ ಜೋಡಿ: 2013 ಅಂತ್ಯದಲ್ಲಿ ಆರಂಭವಾದ ಇವರ ಪ್ರೇಮ ತುಂಬಾ ಗಪ್‌ಚುಪ್‌ ಆಗಿತ್ತು. ಕದ್ದು ಮುಚ್ಚಿ ಓಡಾಡ ಮಾಡ್ತಿತ್ತು. ಒಂದೆರಡು ಬಾರಿ ಮಾಧ್ಯಮದ ಕಣ್ಣಿಗೆ ಬಿದ್ದಾಗ ನಮ್ಮದು ಕೇವಲ ಸ್ನೇಹದ ಭೇಟಿ ಎಂದು ಹೇಳಿ ಇಬ್ಬರೂ ಕಾಗೆ ಹಾರಿಸಲು ಪ್ರಯತ್ನಿಸಿದ್ದರು. ಆದರೆ ಅಧಿಕೃತವಾಗಿ ಈ ಜೋಡಿ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದು ನ್ಯೂಜಿಲೆಂಡ್‌ನ‌ಲ್ಲಿ.

2014ರಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸಕ್ಕೆ ಹೋಗಿತ್ತು. ಇತ್ತ ಶೂಟಿಂಗ್‌ ನಡುವೆ ಫ್ರೀ ಮಾಡಿಕೊಂಡು ಅನುಷ್ಕಾ ಕೂಡ ನ್ಯೂಜಿಲೆಂಡ್‌ಗೆ ಹಾರಿದ್ದರು. ಇವರಿಬ್ಬರೂ ಶಾಪಿಂಗ್‌ ಮಾಲ್‌, ಪಾರ್ಕ್‌ನಲ್ಲಿ ಕೈಕೈ ಹಿಡಿದುಕೊಂಡು ಅಡ್ಡಾಡಿದ ಫೋಟೋಗಳು ವೈರಲ್‌ ಆದವು. ಆಗಲೇ ಇವರ ಪ್ರೇಮದ ಕಥೆ ಕ್ರೀಡಾ ಭಿಮಾನಿಗಳಿಗೆ ಅಧಿಕೃತವಾಗಿ ಗೊತ್ತಾಗಿದ್ದು.

ಐಪಿಎಲ್‌ನಲ್ಲಿ ಕೊಹ್ಲಿಗೆ ಚಿಯರ್‌: 2014ರಿಂದಲೇ ಐಪಿಎಲ್‌ ಸಂದರ್ಭದಲ್ಲಿ ಅನುಷ್ಕಾ ಕ್ರೀಡಾಂಗಣಕ್ಕೆ ಬಂದು ಕೊಹ್ಲಿ ಬೆಂಬಲಿಸುತ್ತಿದ್ದರು. ಕೊಹ್ಲಿ ಸಿಕ್ಸರ್‌, ಬೌಂಡರಿ ಬಾರಿಸಿದಾಗ ಅನುಷ್ಕಾ ಮುಖದಲ್ಲಿ ಹರ್ಷ ಎದ್ದು ಕಾಣುತ್ತಿತ್ತು. ಪಂದ್ಯದ ನಂತರ ಮತ್ತು ಮುನ್ನ ಈ ಜೋಡಿ ಭೇಟಿಯಾದ ಫೋಟೋಗಳು ಕೂಡ ವೈರಲ್‌ ಆಗುತ್ತಿದ್ದವು. ಏಕದಿನ ಪಂದ್ಯದ ಸಂದರ್ಭದಲ್ಲಿ ಶತಕ ದಾಖಲಿಸಿದಾಗ ಕ್ರೀಡಾಂಗಣದಿಂದಲೇ ಅನುಷ್ಕಾಗೆ ಫ್ಲೇಯಿಂಗ್‌ ಕಿಸ್‌ ನೀಡಿದ್ದು ಭಾರೀ ಸದ್ದು ಮಾಡಿತ್ತು.

ಬ್ರೇಕ್‌ಅಪ್‌ ಗಾಸಿಪ್‌: ಚೆನ್ನಾಗಿಯೇ ಇದ್ದ ಈ ಜೋಡಿಯ ನಡುವಿನ ಬ್ರೇಕ್‌ಅಪ್‌ ಸುದ್ದಿ ಹಬ್ಬಿದ್ದು 2016ರಲ್ಲಿ. ಇದಕ್ಕೆಲ್ಲ ಕಾರಣವಾಗಿದ್ದು ಬಾಲಿವುಡ್‌. ಹೌದು, ಅನುಷ್ಕಾಗೆ ಬಾಲವುಡ್‌ ಬಿಡಲು ಇಷ್ಟಿಯಿಲ್ಲ. ಆದರೆ ಕೊಹ್ಲಿಗೆ ಅನುಷ್ಕಾ ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸುವುದುಬೇಡ ಅನ್ನುವ ಭಾವನೆಯಿದೆ. ಈ ಬಿಕ್ಕಟ್ಟಿನಿಂದ ಈ ಜೋಡಿ ಬ್ರೇಕ್‌ಅಪ್‌ ಆಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸುಮಾರು 6 ತಿಂಗಳ ಕಾಲ ಈ ಜೋಡಿ ಜತೆಯಾಗಿ ಓಡಾಡಿರಲಿಲ್ಲ. ಪಾರ್ಟಿಗಳಲ್ಲಿ ಭೇಟಿ ಮಾಡಿದರೂ ದೂರವೇ ಉಳಿದಿದ್ದರು. ಇದು ಬ್ರೇಕ್‌ಅಪ್‌ ಗಾಸಿಪ್‌ ಸೃಷ್ಟಿಸಿತ್ತು.

ಪ್ಯಾಚ್‌ಅಪ್‌ ಮಾಡಿದ ಸಲ್ಮಾನ್‌ ಖಾನ್‌: ದೂರವಾಗಿದ್ದ ಅನುಷ್ಕಾ ಮತ್ತು ಕೊಹ್ಲಿ ಜೋಡಿಯನ್ನು ಮತ್ತೆ ಒಂದಾಗಿಸಿದ್ದು ಬಾಲಿವುಡ್‌ ಬಾಕ್ಸ್‌ ಆಫೀಸ್‌ ಕಿಂಗ್‌ ಸಲ್ಮಾನ್‌ ಖಾನ್‌ ಅನ್ನುವ ಮಾತಿದೆ. ಕೊಹ್ಲಿ ಮತ್ತು ಅನುಷ್ಕಾ ಇಬ್ಬರಿಗೂ ಆತ್ಮೀಯ ಸ್ನೇಹಿತನಾಗಿದ್ದ ಸಲ್ಮಾನ್‌ ಈ ಜೋಡಿಯನ್ನು ಪುನಃ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡಿಸಿದ ಸಲ್ಮಾನ್‌ ಪ್ಯಾಚ್‌ಅಪ್‌ ಮಾಡಿಸಿದ್ದಾರೆ.

ಜತೆಜತೆಯಲ್ಲಿಯೇ ಸುತ್ತಾಟ: ಪ್ಯಾಚ್‌ಅಪ್‌ ನಂತರ ಅಧಿಕೃತವಾಗಿ ಈ ಜೋಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಜತೆಗಿರುವ ಫೋಟೋಗಳನ್ನು ಕೊಹ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಹೆಚ್ಚಿನದಾಗಿ ಇವರ ಓಡಾಟ ಭಾರತ ಕ್ರಿಕೆಟ್‌ ತಂಡ ವಿದೇಶಿ ಪ್ರವಾಸ ಕೈಗೊಂಡಾಗ ಆಗಿರುತ್ತಿತ್ತು. ಹಣವಿದ್ದು, ತಾರಾಪಟ್ಟವಿದ್ದು, ಹಲವು ಏಳು ಬೀಳುಗಳನ್ನು ಕಂಡು ಅಂತೂ ಮದುವೆಯಾಗಿದ್ದಾರೆ. ಈ ಜೋಡಿಗೊಂದು ಶುಭಹಾರೈಸೋಣ.

ಟಾಪ್ ನ್ಯೂಸ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.