![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Dec 17, 2017, 10:07 AM IST
ಸುರತ್ಕಲ್ : ಮಂಗಳೂರು ಮಹಾನಗರ ಪಾಲಿಕೆ ಉಪಕಚೇರಿಗೆ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಭೇಟಿ ನೀಡಿ ಹೊಸ ಕಟ್ಟಡ ರಚನೆ ಕುರಿತು ಮಾಹಿತಿ ಪಡೆದರು. ಈ ಸಂದರ್ಭ ನೂತನ ಕಟ್ಟಡದಲ್ಲಿ ಇರುವ ಸೌಲಭ್ಯಗಳ ಕುರಿತಾಗಿ ಅಧಿಕಾರಿಗಳು ಯೋಜನೆ ವಿವರ ಒದಗಿಸಿದರು.
ಪೇಪರ್ಲೆಸ್ ಯೋಜನೆ ಪ್ರಗತಿಯಲ್ಲಿದ್ದು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಆಯುಕ್ತ ನಝೀರ್ ಉತ್ತರಿಸಿದರು. ಪಾಲಿಕೆ ಸಿಬಂದಿಗಳಲ್ಲಿ ಸೌಲಭ್ಯದ ಬಗ್ಗೆ ವಿಚಾರಿಸಿದರು. ಹಿರಿಯ ಸಿಬಂದಿಯೊಬ್ಬರಿಗೆ ಪ್ರಮೋಷನ್ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿದ ಬೇಗ್ ಅವರು ಜಿಲ್ಲಾ ಧಿಕಾರಿಗೆ ಕಡತ ಶೀಘ್ರ ವಿಲೇವಾರಿ ಮಾಡಲು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಒಳಚರಂಡಿ ಯೋಜನೆಗೆ ಸಚಿವರು ಬೆಳಗಾವಿ ಅ ವೇಶನದಲ್ಲಿ 35 ಕೋಟಿ ರೂ. ಒದಗಿಸಿರುವುದಕ್ಕೆ ಕ್ಷೇತ್ರದ ನಾಗರಿಕರ ಪರವಾಗಿ ಶಾಸಕ ಮೊದಿನ್ ಬಾವಾ ಅವರು ಸಚಿವರನ್ನು ಸಮ್ಮಾನಿಸಿದರು. ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಅಶೋಕ್ ಶೆಟ್ಟಿ, ಬಶೀರ್ ಅಹ್ಮದ್, ಅಯಾಝ್, ವೈ.ರಾಘವೇಂದ್ರ ರಾವ್, ಆನಂದ ಅಮೀನ್, ಮಾಜಿ ಪಾಲಿಕೆ ಸದಸ್ಯ ಹರೀಶ್ ಸುರತ್ಕಲ್, ರಾಜೇಶ್ ಕುಳಾಯಿ, ವಿಜಯ್ ಆಚಾರ್ಯ, ರಾಜ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.