ಜೋಡಿಹಕ್ಕಿ: ಲವ್ ಜೆಹಾದ್ ಶಂಕೆ?
Team Udayavani, Dec 22, 2017, 11:25 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ನಗರದಲ್ಲಿ ಕಳೆದೆರಡು ದಿನಗಳಿಂದ ಅನುನಾಸ್ಪದವಾಗಿ ಕಂಡು ಬಂದ ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಸಂಭವಿಸಿದೆ. ಅವರಿಬ್ಬರು ಭಿನ್ನ ಕೋಮಿನ ಯುವತಿ-ಯುವಕರೆಂದು ತಿಳಿದು ಬಂದಿದೆ. ಇದು ಲವ್ ಜೆಹಾದ್ನ ಸಂಚು ಎಂಬ ಶಂಕೆ ವ್ಯಕ್ತವಾಗಿದೆ.
ದೇಗುಲದ ಮುಂಭಾಗದ ರಥಬೀದಿಯಲ್ಲಿರುವ ಛತ್ರದ ಹೊರಗೆ ಮಧ್ಯವಯಸ್ಕ ಯುವತಿ ಮಂಗಳವಾರದಿಂದ ಏಕಾಂಗಿಯಾಗಿ ವಾಸ್ತವ್ಯ ಹೊಂದಿದ್ದು ನಿರಂತರ ಮೊಬೈಲ್ ಕರೆ ಯಲ್ಲಿ ನಿರತಳಾಗಿದ್ದಳು. ಈಕೆ ಬಳಿ ಯುವಕನೋರ್ವ ಆಗಾಗ್ಗೆ ಬಂದು ಮಾತನಾಡಿ ಹೋಗುತ್ತಿದ್ದುದನ್ನು ಛತ್ರ ದಲ್ಲಿದ್ದ ಕೆಲವರು ಗಮನಿಸಿದ್ದಾರೆ. ಅವರಿಬ್ಬರ ನಡವಳಿಕೆ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ದೇಗುಲದ ಪರಿಸರದಲ್ಲಿ ಕಾರ್ಯ ನಿರತ ಭದ್ರತಾ ಸಿಬಂದಿ ಬುಧವಾರ ವಿಚಾರಿಸಿ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ರಾತ್ರಿ ಜೋಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರಿಬ್ಬರು ನಾವು ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಆದರೆ ವಿಚಾರಣೆ ವೇಳೆ ಅವರಿಬ್ಬರ ಹೇಳಿಕೆಗಳು ತದ್ವಿರುದ್ಧವಾಗಿ ಕಂಡುಬಂದಿವೆ.
ಯುವತಿ ಬೆಂಗಳೂರು ಮೂಲದವಳಾಗಿದ್ದು ಪೊಲೀಸರು ಆಕೆಯ ಹೆತ್ತವರ ಸಂಪರ್ಕಿಸಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಯುವಕ ಸುಳ್ಯ ತಾಲೂಕಿನ ಬೆಳ್ಳಾರೆಯ ಪಝಾನ್ ಎಂದು ತಿಳಿದು ಬಂದಿದೆ. ಯುವಕ- ಯವತಿಯರಿಬ್ಬರೂ ಪೊಲೀಸ್ ವಶದಲ್ಲಿದ್ದಾರೆ. ಸುಬ್ರಹ್ಮಣ್ಯ ಠಾಣೆಯ ಪೊಲೀಸರು ವಿಚಾರಣೆ ನಡಸುತ್ತಿದ್ದು ಇಲ್ಲಿ ತನಕ ಘಟನೆ ಕುರಿತಂತೆ ಯಾವುದೇ ಪ್ರಕರಣ ದಾಖಲುಗೊಂಡಿಲ್ಲ.
ಲವ್ ಜೆಹಾದ್ ಜಾಲ ಶಂಕೆ?
ಭಕ್ತರ ಸೋಗಿನಲ್ಲಿ ಭಿನ್ನಮತೀಯ ಜೋಡಿಗಳು ಅಕ್ರಮವಾಗಿ ಇಲ್ಲಿಗೆ ಆಗಮಿಸಿ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಕಂಡುಬರುತ್ತಿದ್ದು ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ಅನ್ಯಕೋಮಿನ ಯುವಕರು ಲವ್ಜೆಹಾದ್ ನಡೆಸುತ್ತಿದ್ದಾರೆ. ಈ ಪ್ರಕರಣ ಕೂಡ ಲವ್ ಜೆಹಾದ್ ಸಂಚಿನ ದ್ದಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುವಂತೆ ಸಂಘಟನೆಗಳು ಒತ್ತಾಯಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.