ATM ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಟ್ಟರೆ ನೀವೂ ಹೀಗೆ ಮಾಡ್ತಿರಾ ?
Team Udayavani, Dec 28, 2017, 5:07 PM IST
ಫ್ಲೋರಿಡಾ, ಅಮೆರಿಕ : ನೀವು ಎಟಿಎಂ ಗೆ ಹೋದಾಗ ಅದು ನೀವು ಕೇಳಿದ್ದಕ್ಕಿಂತ ಹೆಚ್ಚು ಹಣವನ್ನು ಹೊರ ಹಾಕಿದರೆ ನೀವೇನು ಮಾಡುವಿರಿ ? ಖಂಡಿತವಾಗಿಯೂ ಸಂತೋಷದಿಂದ ಸ್ವೀಕರಿಸುತ್ತೀರಿ ಮತ್ತು ಎಷ್ಟು ಮಾತ್ರಕ್ಕೂ ಎಟಿಎಂ ಸ್ಕ್ರೀನ್ ಮೇಲೆ ನಿಮ್ಮ ಕೋಪ-ತಾಪ-ಸಿಟ್ಟು-ಸೆಡವನ್ನು ತೋರಿಸುವುದಿಲ್ಲ, ಅಲ್ವಾ ?
ಆದರೆ ಫ್ಲೋರಿಡಾದ ಮೆರಿಟ್ ಐಲ್ಯಾಂಡ್ ನಿವಾಸಿಯಾಗಿರುವ ಮೈಕೆಲ್ ಜೋಸೆಫ್ ಓಲೆಕ್ಸಿಕ್ ಮಾತ್ರ ನಿಮ್ಮ ಹಾಗಲ್ಲ; ಎಟಿಎಂ ತಾನು ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಟ್ಟದ್ದಕ್ಕೆ ಸಿಟ್ಟಿಗೆದ್ದ ಆತ ಎಟಿಎಂ ಪರದೆಗೆ ಬಲವಾಗಿ ಹೊಡೆದು ಅದನ್ನು ಒಡೆದು ಹಾಕಿದ್ದಾನೆ.
23ರ ಹರೆಯದ ಓಲೆಕ್ಸಿಕ್ ಕಳೆದ ನವೆಂಬರ್ನಲ್ಲಿ ಎಟಿಎಂ ಗೆ ಹೋದಾಗ ಆತ ಕೇಳಿದ್ದಕ್ಕಿಂತ ಎಷ್ಟೋ ಹೆಚ್ಚಿನ ಹಣವನ್ನು ಅದು ಹೊರ ತಳ್ಳಿತು. ಇಷ್ಟು ಹಣ ನನಗ್ಯಾಕೆ ? ಅದರಿಂದ ನನಗೇನು ಮಾಡಲಿಕ್ಕಿದೆ ಎಂದು ಕೋಪಗೊಂಡ ಆತ ಒಡನೆಯೇ ಸಿಟ್ಟಿನಿಂದ ಎಟಿಎಂ ಪರದೆಯನ್ನು ಬಲವಾಗಿ ಗುದ್ದಿದ. ಪರಿಣಾವಾಗಿ ಆ ಪರದೆ ಒಡೆದು ಚೂರು ಚೂರಾಯಿತು. ಆತನ ಈ ಕೃತ್ಯ ಎಟಿಎಂ ಸಿಸಿ ಟಿವಿ ಯಲ್ಲಿ ದಾಖಲಾಯಿತು.
ಈ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಫ್ಲೋರಿಡಾ ಪೊಲೀಸರು ಒಂದು ತಿಂಗಳ ಬಳಿಕ ಕಳೆದ ಶುಕ್ರವಾರ ಆತನನ್ನು ಬಂಧಿಸಿದರು. ಎಟಿಎಂ ಗೆ 5,000 ಡಾಲರ್ ಹಾನಿ ಉಂಟುಮಾಡಿದ್ದಕ್ಕೆ ಕೇಸು ದಾಖಲಿಸಿದರು. ಎಟಿಎಂ ನಾನು ಕೇಳಿದ್ದಕ್ಕಿಂತ ಎಷ್ಟೋ ಹೆಚ್ಚು ಹಣವನ್ನು ಕೊಟ್ಟಾಗ ನನಗೆ ಸಿಟ್ಟು ಬಂದು ನಾನು ಅದರ ಪರದೆಯನ್ನು ಗುದ್ದಿದ್ದು ಹೌದೆಂದು ಆತ ಪೊಲೀಸರಲ್ಲಿ ಒಪ್ಪಿಕೊಂಡ.
ಈ ಘಟನೆ ಕೊಕೋವಾದಲ್ಲಿನ ವೆಲ್ಸ್ ಫಾರ್ಗೋ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ನಡೆಯಿತೆಂದು ಯುಎಸ್ಎ ಟುಡೇ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ
CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Mangaluru: ರಾಷ್ಟ್ರೀಯ ಸ್ಟಾಂಡಪ್ ಪ್ಯಾಡ್ಲಿಂಗ್: ರಾಜ್ಯಕ್ಕೆ 7 ಪದಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.