ಭುಟ್ಟೋ ಕೊಂದಿದ್ದು ಲಾಡೆನ್?
Team Udayavani, Dec 29, 2017, 6:55 AM IST
ಕರಾಚಿ: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಸಂಚು ಸಮರ್ಪಕವಾಗಿ ಜಾರಿ ನಿಟ್ಟಿನಲ್ಲಿ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಆಪಾ^ನಿಸ್ತಾನಕ್ಕೆ ತನ್ನ ನೆಲೆ ವರ್ಗಾಯಿಸಿದ್ದ. ಜತೆಗೆ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರ್ರಫ್ ಅವರನ್ನೂ ಕೊಲ್ಲಲು ಸಂಚು ರೂಪಿಸಿದ್ದ. ಹೀಗೆಂದು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್ಐ ಮೂಲಗಳನ್ನು ಉಲ್ಲೇಖೀಸಿ ಪಾಕಿಸ್ಥಾನ ಮಾಧ್ಯಮಗಳು ವರದಿ ಮಾಡಿವೆ.
ರಾವಲ್ಪಿಂಡಿಯ ಲಿಯಾಖತ್ ಬಾಘ…ನಲ್ಲಿ 2007ರ ಡಿ. 27ರಂದು ಭುಟ್ಟು ಅವರು ಉಗ್ರರ ಬಂದೂಕು ಹಾಗೂ ಬಾಂಬ್ ದಾಳಿಗೊಳಗಾಗಿ ಹತ್ಯೆಯಾಗಿದ್ದರು. ಅವರ 10ನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಈ ವರದಿಗಳು ಬಂದಿವೆ.
2007ರ ಡಿ. 19ರಂದು ಪಾಕಿಸ್ಥಾನದ ಆಂತರಿಕ ವ್ಯವಹಾರಗಳ ಸಚಿವಾಲಯ ಹಾಗೂ ಪಾಕಿಸ್ಥಾನ ಸೇನಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಐಎಸ್ಐ, “”ಭುಟ್ಟೋ ಮಾತ್ರವಲ್ಲದೆ, ಅಂದಿನ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಉಲೇಮಾ-ಎ-ಇಸ್ಲಾಂ-ಫಾಝಲ್ ಸಂಘಟನೆಯ ಮುಖ್ಯಸ್ಥ ಫಝೂÉರ್ ರಹಮಾನ್ ಅವರ ಹತ್ಯೆಗೂ ಲಾಡೆನ್ ಸಂಚು ರೂಪಿಸಿದ್ದಾನೆ. ಇವರ ಹತ್ಯೆಗಾಗಿ ತಯಾರಿಸಲಾಗಿರುವ ವಿಶೇಷ, ಶಕ್ತಿಶಾಲಿ ಬಾಂಬ್ಗಳನ್ನು ವಾಜಿರಿಸ್ತಾನದ ಮುಸಾ ತಾರೀಖ್ ಎಂಬಾತನೊಂದಿಗೆ ಪಾಕಿಸ್ಥಾನದಲ್ಲಿರುವ ತನ್ನ ವಿಧೇಯರಿಗೆ ಕಳುಹಿಸಲೂ ಸಿದ್ಧತೆ ನಡೆಸಿದ್ದಾನೆ. ಹಾಗಾಗಿ, ತುರ್ತಾಗಿ ಈ ಮೂವರ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಪತ್ರದಲ್ಲಿ ಆಗ್ರಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.