![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Dec 29, 2017, 11:59 AM IST
ರಾಂಚಿ : ಮುಸ್ಲಿಂ ಪುರುಷನನ್ನು ವಿವಾಹದ ಹಿಂದೂ ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಆಕೆಯ ಮಾವ ಮತ್ತು ಆತನ ಸಹೋದರ ಜತೆಗೂಡಿ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಆಕೆಯನ್ನು ಕೊಂದು ಹಾಕಿದ ಆಘಾತಕಾರಿ ಮತ್ತು ಅಮಾನವೀಯ ಘಟನೆ ಜಾರ್ಖಂಡ್ನ ರಾಮಗಢ ಜಿಲ್ಲೆಯಿಂದ ವರದಿಯಾಗಿದೆ.
ಹಿಂದೂ ಮಹಿಳೆಯನ್ನು ರೇಪ್ ಮಾಡಿ ಕೊಂದ ಘಟನೆಯು ತಿಂಗಳ ಹಿಂದೆ ನಡೆದಿತ್ತು. ಕಳೆದ ನವೆಂಬರ್ 6ರಿಂದ ನಾಪತ್ತೆಯಾಗಿದ್ದ ಈ ಮಹಿಳೆಯ ಶವವು ಹಗ್ಗದಿಂದ ಕೈ ಕಾಲು ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಗರ್ನಾ ನದೀ ಕಿನಾರೆಯಲ್ಲಿ ಕಂಡು ಬಂದಾಗಲೇ ಆಕೆಯ ಅತ್ಯಾಚಾರ, ಕೊಲೆ ಬಯಲಾಯಿತು. ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದು ಬಳಿಕ ಆಕೆಯನ್ನು ಕೊಂದಿರುವ ಸಂಗತಿ ಸಾಬೀತಾಯಿತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕ್ಷಿಪ್ರಗತಿಯಿಂದ ಕಾರ್ಯೋನ್ಮುಖರಾದ ಪೊಲೀಸರು ಮೊತ್ತ ಮೊದಲಾಗಿ ಆಕೆಯ ಮುಸ್ಲಿಂ ಪತಿ ಆದಿಲ್ನನ್ನು ಬಂಧಿಸಿದರು. ತನಿಖೆಯ ವೇಳೆ ಈತ ಹಲವು ಆಘಾತಕಾರಿ ಸಂಗತಿಗಳ ಬಗ್ಗೆ ಬಾಯಿ ಬಿಟ್ಟಾಗಲೇ ಮಹಿಳೆ ಅನುಭವಿಸಿದ್ದ ನರಕ ಯಾತನೆಗಳು ಬೆಳಕಿಗೆ ಬಂದವು.
ಪೊಲೀಸರ ಪ್ರಕಾರ ಅತ್ಯಾಚಾರ, ಕೊಲೇಗೀಡಾದ ಹಿಂದೂ ಮಹಿಳೆಯು ತನ್ನ ಹಾಗೂ ತನ್ನ ಪ್ರಿಯಕರ ಆದಿಲ್ ನ ಹೆತ್ತವರ ವಿರೋಧವನ್ನು ಲೆಕ್ಕಿಸದೆ ಕಳೆದ ತಿಂಗಳಲ್ಲಿ ಆದಿಲ್ನನ್ನು ಮದುವೆಯಾಗಿದ್ದಳು. ಮದುವೆಯ ಬಳಿಕ ನೂತನ ದಂಪತಿ ಬೊಕಾರೋದಲ್ಲಿನ ಆದಿಲ್ನ ಚಿಕ್ಕಪ್ಪನ ಮನೆಗೆ ಹೋಗಿದ್ದರು. ಆಗ ಆ ಚಿಕ್ಕಪ್ಪ ಆದಿಲ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿ ಬೊಕಾರೋಗೆ ಆತನನ್ನು ಬರಮಾಡಿಸಿಕೊಂಡಿದ್ದ.
ಆದಿಲ್ ನ ಚಿಕ್ಕಪ್ಪ ಮತ್ತು ತಂದೆ ಸೇರಿ ಹುಡುಗಿಯನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಬಲವಂತ ಪಡಿಸಿದರು. ಆದಕ್ಕೆ ಒಪ್ಪದಿದ್ದ ಆಕೆಯನ್ನುಆದಿಲ್ ಸಹಿತವಾಗಿ, ಮುಂದಿನ ಜೀವನ ನಡೆಸಲು, ರಾಂಚಿಗೆ ಕಳುಹಿಸಿಕೊಡಲು ತೀರ್ಮಾನಿಸಿದರು. ಅಂತೆಯೇ ಅವರನ್ನು ಕಾರಿನಲ್ಲಿ ಒಯ್ದ ತಂದೆ – ಚಿಕ್ಕಪ್ಪ ಮಾರ್ಗ ಬದಲಾಯಿಸಿ ನಿರ್ಜನ ಅರಣ್ಯ ಪ್ರದೇಶಕ್ಕೆ ಒಯ್ದರು. ಅಲ್ಲಿ ಅವರು ಮೊದಲು ಆದಿಲ್ ಮೇಲೆ ಹಲ್ಲೆ ನಡೆಸಿ ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಆತನ ಸಮ್ಮುಖದಲ್ಲೇ ಹುಡುಗಿಯ ಮೇಲೆ ಸರದಿ ಪ್ರಕಾರ ಗ್ಯಾಂಗ್ ರೇಪ್ ನಡೆಸಿ, ಬಳಿಕ ಆಕೆಯನ್ನು ಕೊಂದು ಅರಣ್ಯದಲ್ಲಿ ಗಿಡಗಂಟಿಗಳ ನಡುವೆ ಶವವನ್ನು ಬಿಸುಟು ಹೋದರು.
ಈ ಇಡಿಯ ಪ್ರಕರಣ ಪೊಲೀಸ್ ತನಿಖೆಯಲ್ಲಿ ಬಹಿರಂಗವಾದಾಗ ಅನೇಕ ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಭಾರೀ ಪ್ರತಿಭಟನೆ ನಡೆಸಿದವು. ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಅತ್ಯಾಚಾರ, ಕೊಲೆ ಆರೋಪಿಗಳಾಗಿರುವ ಆದಿಲ್ನ ಅಪ್ಪ – ಚಿಕ್ಕಪ್ಪನನ್ನು ಪೊಲೀಸರು ಇನ್ನಷ್ಟೆ ಬಂಧಿಸಬೇಕಾಗಿದೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.