ಡ್ರಗ್ಸ್ ಕಳ್ಳಸಾಗಣೆ: DU, JNU, Amity ವಿದ್ಯಾರ್ಥಿಗಳು ಸೆರೆ
Team Udayavani, Dec 30, 2017, 5:09 PM IST
ಹೊಸದಿಲ್ಲಿ : ಮಾದಕ ದ್ರವ್ಯ ಹೊಂದಿದ ಕಾರಣಕ್ಕೆ ನರ್ಕಾಟಿಕ್ಸ್ ಕಂಟ್ರೋಲ್ ಬ್ಯೂರೋ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ ಅವರಲ್ಲಿದ್ದ 1.140 ಕೆಜಿ ಕನಾಬೀಸ್ ಮತ್ತು ಮೂರು ಎಲ್ಎಸ್ಡಿ ಬ್ಲಾಟ್ ಪೇಪರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಲ್ವರು ಬಂಧಿತರಲ್ಲಿ ಇಬ್ಬರು ದಿಲ್ಲಿ ವಿಶ್ವವಿದ್ಯಾಲಯದ ಹಿಂದು ಕಾಲೇಜಿನ ವಿದ್ಯಾರ್ಥಿಗಳು; ಒಬ್ಟಾತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದವ; ಮತ್ತು ಇನ್ನೊಬ್ಬ ಎಮಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ದಿಲ್ಲಿ ವಲಯದ ಎನ್ಸಿಬಿ ಈ ನಾಲ್ಕು ಬಂಧಿತ ವಿದ್ಯಾರ್ಥಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ.
ಎನ್ಸಿಬಿ ಉಪ ಮಹಾ ನಿರ್ದೇಶಕ (ಉತ್ತರ) ಎಸ್ ಕೆ ಝಾ ಅವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿ, “ಬಂಧಿತ ವಿದ್ಯಾರ್ಥಿಗಳಾದ ಅನಿರುಧ್ ಮಾಥುರ್, ತೆನ್ಜಿನ್ ಫುನ್ಶೋಗ್ ಮತ್ತು ಸ್ಯಾಲಿ ಮಲಿಕ್ ಮಾದಕ ದ್ರವ್ಯ ವ್ಯಸನಿಗಳಾಗಿದ್ದು ಗೌರವ್ ಎಂಬಾತನಿಂದ ಇವರು ಮಾದಕ ದ್ರವ್ಯ ಪಡೆಯುತ್ತಿದ್ದರು. ದಿಲ್ಲಿ ವಿವಿ ಕ್ಯಾಂಪಸ್ನಲ್ಲಿ ಮಾದಕ ದ್ರವ್ಯ ಬಳಕೆ ವ್ಯಾಪಕವಾಗಿದೆ ಎಂದು ಇವರು ಹೇಳಿದ್ದಾರೆ. ಕ್ಯಾಂಪಸ್ಗೆ ಮಾದಕ ದ್ರವ್ಯ ಪೂರೈಸುವ ಕಳ್ಳಸಾಗಣೆಗಾರರ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ.ಅದನ್ನೀಗ ಪರಿಶೀಲಿಸಿ ಮುಂದಿನ ಕಾರ್ಯಾಚರಣೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.