ಹಾಪ್ಕಾಮ್ಸ್ಗೆ ದುಡಿಯುವ ಬಂಡವಾಳದ ಕೊರತೆ
Team Udayavani, Jan 2, 2018, 12:20 PM IST
ಬೆಂಗಳೂರು: ಹಾಪ್ಕಾಮ್ಸ್ ಸಂಸ್ಥೆಯಲ್ಲೀಗ “ದುಡಿಯುವ ಬಂಡವಾಳದ ಕೊರತೆ’ ಎದುರಾಗಿದೆ. ಈ ಸಂಸ್ಥೆ,ಕರ್ನಾಟಕ ರಾಜ್ಯ ಕೈಗಾರಿಕೆ ಸಹಕಾರಿ ಬ್ಯಾಂಕ್ ನಲ್ಲಿ 3.ಕೋಟಿ ಠೇವಣಿ ಇಟ್ಟಿದ್ದರೂ, ಸದರಿ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಬ್ಯಾಂಕ್ ನಲ್ಲಿ ಇಟ್ಟಿದ್ದ ಹಣವನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹಾಪ್ಕಾಮ್ಸ್ ಸಂಸ್ಥೆ ಇದೆ.
ಇದರಿಂದಾಗಿ ದುಡಿಯುವ ಬಂಡಾವಳದ ಕೊರತೆ ಉಂಟಾಗಿದ್ದು 10 ಕೋಟಿ ದುಡಿಯುವ ಬಂಡವಾಳದ ಅನುದಾನ ನೀಡುವಂತೆ ಹಾಪ್ ಕಾಮ್ಸ್ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪತ್ರ ಇದೀಗ ಉದಯವಾಣಿಗೆ ಲಭ್ಯವಾಗಿದೆ. ಹಾಪ್ ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಪತ್ರವನ್ನು ಬರೆದಿದ್ದು ಈ ಪತ್ರದಲ್ಲಿ ದುಡಿಯುವ ಬಂಡವಾಳದ ಕೊರತೆ ಕುರಿತು ಪ್ರಸ್ತಾಪನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕೆ ಸಹಕಾರಿ ಬ್ಯಾಂಕ್ನಲ್ಲಿ 3.ಕೋಟಿ ಠೇವಣಿ ಇಟ್ಟಿದ್ದರೂ ಸದರಿ ಬ್ಯಾಂಕ್ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಈ ಬ್ಯಾಂಕ್ನಲ್ಲಿ ಇಟ್ಟಿದ್ದ ಹಣವನ್ನು ಪಡೆಯಲು ಸಾಧ್ಯವಾಗದ ಪರಿಸ್ಥತಿಯಲ್ಲಿರುವುದನ್ನು ಕೂಡ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಹಾಪ್ ಕಾಮ್ಸ್ ಸಂಸ್ಥೆಯ ಸುಗಮ ಆಡಳಿತದ ದೃಷ್ಟಿಯಿಂದ ಹಾಗೂ ಪರಿಣಾಮಕಾರಿ ವ್ಯಾಪಾರ ನೀತಿ ರೂಪಿಸಿ ಮಾರುಕಟ್ಟೆಯಲ್ಲಿ ಸಮರ್ಥ ಸ್ಪರ್ಧೆ ನೀಡಲು ತುರ್ತಾಗಿ 10 ಕೋಟಿ ರೂ.ಅಗತ್ಯವಿರುತ್ತದೆ. ಈ ಸಂಬಂಧ ಅನುದಾನದ ರೂಪದಲ್ಲಿ ಹಣವನ್ನು ಮಂಜೂರು ಮಾಡಿಕೊಡಲು ಸಂಬಂಧ ಪಟ್ಟವರಿಗೆ ಆದೇಶಿಸಬೇಕು ಎಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಸ್ಥೆಗೆ ಅನುಕೂಲವಾಗಲಿ ಎಂದು ಹಾಪ್ ಕಾಮ್ಸ್ ಸಂಸ್ಥೆ ಕರ್ನಾಟಕ ರಾಜ್ಯ ಕೈಗಾರಿಕಾ ಸಹ ಕಾರಿ ಬ್ಯಾಂಕ್ ನಲ್ಲಿ 3 ಕೋಟಿ ರೂ.ಹಣವನ್ನು ಠೇವಣಿ ಮಾಡಿತ್ತು. ಆದರೆ ಈ ಬ್ಯಾಂಕ್ ನಷ್ಟದಲ್ಲಿದ್ದು ಹಣವಾಗಿ ಬಳಕೆಗೆ ಬಾರದಂತಾಗಿದೆ. ದುಡಿಯುವ ಬಂಡವಾಳ ಇದ್ದರೆ.
ಹಾಪ್ ಕಾಮ್ಸ್ ಈ ಹಣವನ್ನು ಅವಶ್ಯವಿದ್ದಾಗ ಬಳಕೆ ಮಾಡಿ, ಮತ್ತೆ ಹಾಗೇ ಇಡಬಹುದಾಗಿತ್ತು ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಹೇಳಿದ್ದಾರೆ. ಬ್ಯಾಂಕ್ ನಷ್ಟದಿಂದಾಗಿ ಸಂಸ್ಥೆಗೆ ಈಗ ದುಡಿಯುವ ಬಂಡವಾಳದ ಕೊರತೆ ಉಂಟಾಗಿದ್ದು ಈ ಸಂಬಂಧ ಸರ್ಕಾರಕ್ಕೆ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಲಾಗಿದೆ ಎಂದು ಚಂದ್ರೇ ಗೌಡ ತಿಳಿಸಿದ್ದಾರೆ.
ಏನಿದು ದುಡಿಯುವ ಬಂಡವಾಳ: ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯಲ್ಲಿ ಕಾರ್ಖಾನೆಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆ ಗಳು ಮತ್ತು ವಿದ್ಯಾರ್ಥಿನಿಲಯಗಳಿಗೆ ಹಣ್ಣು ತರಕಾರಿಗಳನ್ನು ಸಾಲದ ರೂಪದಲ್ಲಿ ಸರಬರಾಜು ಮಾಡುತ್ತಿದೆ. ಈ ಸಂಸ್ಥೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ಹಾಪ್ ಕಾಮ್ಸ್ ಗೆ ಹಣ ಬಿಡುಗಡೆ ಮಾಡಲಾಗುತ್ತದೆ.
ಹೀಗಾಗಿ ಈ ಹಣ ಬರುವವರೆಗೂ ಹಾಪ್ ಕಾಮ್ಸ್ ಕಾಯಬೇಕಾಗುತ್ತದೆ.ಆದರೆ ಹಾಪ್ ಕಾಮ್ಸ್ ಸಂಸ್ಥೆ ಹಣ್ಣು ಮತ್ತು ತರಕಾರಿಗಳನ್ನು ಬೆಳೆದ ರೈತರಿಗೆ ಹಣವನ್ನು ಆಗಿಂದಾಗಲೇ ಪಾವತಿಸಬೇಕಾಗಿದ್ದು ಹೀಗಾಗಿ ಹಾಪ್ ಕಾಮ್ಸ್ ನಲ್ಲಿ ದುಡಿಯುವ ಬಂಡವಾಳದ ಕೊರತೆ ಉಂಟಾಗುತ್ತದೆ.
ಹಾಪ್ ಕಾಮ್ಸ್ ಸಂಸ್ಥೆಯ ಆರ್ಥಿಕವಾಗಿ ನಷ್ಟದಲ್ಲಿಲ್ಲ.ಆದರೆ ದುಡಿಯುವ ಬಂಡವಾಳದ ಕೊರತೆಯ ಸಂಬಂಧ ಸಂಸ್ಥೆಯ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
-ವಿಶ್ವನಾಥ್, ಹಾಪ್ ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕರು.
* ದೇವೇಶ್ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Bengaluru; ಬಸ್ ಡ್ರೈವರ್ಗೆ ಎದೆನೋವು: ಬ್ರೇಕ್ ಹಾಕಿ ಅಪಾಯ ತಪಿಸಿದ ಎಎಸ್ಐ
Flipkart Big Billion Day ಸೆ. 27 ರಿಂದ ಆರಂಭ
Bengaluru: ನಮ್ಮ ಕ್ಲಿನಿಕ್ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
Thug Life: ದುಬಾರಿ ಬೆಲೆಗೆ ಕಮಲ್ ಹಾಸನ್ ʼಥಗ್ ಲೈಫ್ʼ ಓಟಿಟಿ ರೈಟ್ಸ್ ಸೇಲ್
BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್
Padmaavat To Billu.. ಟೈಟಲ್ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್ ಸಿನಿಮಾಗಳಿವು
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.