ಟಿ20: ನ್ಯೂಜಿಲ್ಯಾಂಡಿಗೆ ಸುಲಭ ಜಯ
Team Udayavani, Jan 23, 2018, 6:40 AM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಯಲ್ಲಿ 5-0 ವೈಟ್ವಾಶ್ ಅನುಭವಿಸಿದ ಸಂಕಟದಲ್ಲಿರುವ ಪಾಕಿಸ್ಥಾನ ಟಿ20 ಸರಣಿಯಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿ ಆಘಾತಕ್ಕೆ ಸಿಲುಕಿದೆ.
ಸೋಮವಾರದ ಮೊದಲ ಮುಖಾಮುಖೀಯಲ್ಲಿ ಆತಿಥೇಯ ಕಿವೀಸ್ ಸಫìರಾಜ್ ಅಹ್ಮದ್ ಬಳಗವನ್ನು 7 ವಿಕೆಟ್ಗಳಿಂದ ಸುಲಭದಲ್ಲಿ ಮಣಿಸಿದೆ.
ವೇಗಿಗಳಾದ ಟಿಮ್ ಸೌಥಿ ಮತ್ತು ಸೇತ್ ರ್ಯಾನ್ಸ್ ದಾಳಿಗೆ ತತ್ತರಿಸಿದ ಪಾಕಿಸ್ಥಾನ 19.4 ಓವರ್ಗಳಲ್ಲಿ 105 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದರೆ, ನ್ಯೂಜಿಲ್ಯಾಂಡ್ 15.5 ಓವರ್ಗಳಲ್ಲಿ 3 ವಿಕೆಟಿಗೆ 106 ರನ್ ಮಾಡಿ ಗೆಲುವು ಸಾಧಿಸಿತು. 3 ಪಂದ್ಯಗಳ ಸರಣಿಯ 2ನೇ ಹಣಾಹಣಿ ಜ. 25ರಂದು ಆಕ್ಲೆಂಡ್ನಲ್ಲಿ ನಡೆಯಲಿದೆ.
ಸೌಥಿ (13ಕ್ಕೆ 3) ಮತ್ತು ರ್ಯಾನ್ಸ್ (26ಕ್ಕೆ 3) ಬೌಲಿಂಗ್ ಆಕ್ರಮಣವನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾದ ಪಾಕಿಸ್ಥಾನ 6ನೇ ಓವರ್ ವೇಳೆ 22 ರನ್ನಿಗೆ 4 ವಿಕೆಟ್ ಉರುಳಿಸಿಕೊಂಡು ಚಿಂತಾಜನಕ ಸ್ಥಿತಿಗೆ ತಲಪಿತ್ತು. ಕೊನೆಗೂ ಈ ಸ್ಥಿತಿಯಿಂದ ಚೇತರಿಸಿಕೊಳ್ಳಲೇ ಇಲ್ಲ. ಪಾಕ್ ಪರ ಇಬ್ಬರಷ್ಟೇ ಎರಡಂಕೆಯ ಗಡಿ ದಾಟಿದರು. ಬಾಬರ್ ಆಜಂ (41) ಮತ್ತು ಹಸನ್ ಅಲಿ (23) ಸಣ್ಣ ಮಟ್ಟದ ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ ನೂರರ ಗಡಿ ದಾಟುವಂತಾಯಿತು.
ನ್ಯೂಜಿಲ್ಯಾಂಡ್ ಆರಂಭವೂ ಆಘಾತಕಾರಿಯಾಗಿತ್ತು. 8 ರನ್ ಆಗುವಷ್ಟಲ್ಲಿ ಮಾರ್ಟಿನ್ ಗಪ್ಟಿಲ್ (2) ಮತ್ತು ಗ್ಲೆನ್ ಫಿಲಿಪ್ಸ್ (3) ವಿಕೆಟ್ ಹಾರಿಹೋಗಿತ್ತು. ಆದರೆ ಕಾಲಿನ್ ಮುನ್ರೊ (ಅಜೇಯ 49), ಟಾಮ್ ಬ್ರೂಸ್ (26) ಮತ್ತು ರಾಸ್ ಟಯ್ಲರ್ (ಅಜೇಯ 22) ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು. ಆಕ್ರಮಣಕಾರಿ ಆಟದ ಮೂಲಕ 43 ಎಸೆತಗಳಿಂದ 49 ರನ್ (3 ಬೌಂಡರಿ, 2 ಸಿಕ್ಸರ್) ಹೊಡೆದ ಮುನ್ರೊ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-19.4 ಓವರ್ಗಳಲ್ಲಿ 105 (ಬಾಬರ್ 41, ಹಸನ್ ಅಲಿ 23, ಸೌಥಿ 13ಕ್ಕೆ 3, ರ್ಯಾನ್ಸ್ 26ಕ್ಕೆ 3, ಸ್ಯಾಂಟ್ನರ್ 15ಕ್ಕೆ 2). ನ್ಯೂಜಿಲ್ಯಾಂಡ್-15.5 ಓವರ್ಗಳಲ್ಲಿ 3 ವಿಕೆಟಿಗೆ 106 (ಮುನ್ರೊ ಔಟಾಗದೆ 49, ಬ್ರೂಸ್ 26, ಟಯ್ಲರ್ ಔಟಾಗದೆ 22, ರಯೀಸ್ 24ಕ್ಕೆ 2). ಪಂದ್ಯಶ್ರೇಷ್ಠ: ಕಾಲಿನ್ ಮುನ್ರೊ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್ ಚೌಟ
Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.