ಗ್ರಹಣದ ವೇಳೆ ಪೂಜೆಯಿಲ್ಲ
Team Udayavani, Jan 31, 2018, 11:19 AM IST
ಬೆಂಗಳೂರು: ಗ್ರಹಣ ಎನ್ನುವುದೇ ಅಶುಭ, ಬರಿಗಣ್ಣಿನಲ್ಲಿ ನೋಡಬಾರದು ಎಂಬುದು ಹಲವರ ನಂಬಿಕೆ. ವಿಜ್ಞಾನವನ್ನೇ ನಂಬಿರುವವರು ಇದಕ್ಕೆ ವಿರುದ್ಧವಾಗಿದ್ದಾರೆ. ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಅನೇಕರು ವೈಜ್ಞಾನಿಕವಾಗಿ ಪ್ರತಿಪಾದಿಸುತ್ತಿದ್ದಾರೆ.
ರಾಜ್ಯದ ಶಾಲಾ ಕಾಲೇಜು, ಬೆಂಗಳೂರಿನ ನೆಹರು ತಾರಾಲಯ, ಬ್ರೇಕ್ಥ್ರೂ ಸೈನ್ಸ್ ಸೊಸೈಟ್, ಭಾರತ ಜ್ಞಾನ ವಿಜ್ಞಾನ ಸಮಿತಿ ಹೀಗೆ ವಿವಿಧ ಸಂಘಟನೆಗಳು ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲು ಬೇಕಾದ ವ್ಯವಸ್ಥೆಯನ್ನು ಮಾಡಿದೆ. ಗ್ರಹಣ ಅಶುಭ ಹಾಗೂ ಅಶೌಚ್ಯ ಎಂಬ ಕಾರಣಕ್ಕೆ ದೇವಸ್ಥಾನದಲ್ಲಿ ಈ ವೇಳೆಗೆ ಯಾವುದೇ ಪೂಜೆ, ಅಲಂಕಾರ, ಅಭಿಷೇಕ ಇರುವುದಿಲ್ಲ.
ಜ.31ರ ಸಂಜೆ 6.21ರಿಂದ 7.38ರ ವರೆಗೆ ಚಂದ್ರಗ್ರಹಣ ನಡೆಯಲಿದೆ. ಎರಡು ಹುಣ್ಣಿಮೆಗಳು ಒಂದೇ ತಿಂಗಳಲ್ಲಿ ಬಂದರೆ(ಜ.1 ಮತ್ತು ಜ.31) ಎರಡನೇ ಹುಣ್ಣಿಮೆಯನ್ನು ನೀಲಿಚಂದ್ರ ಎಂದು ಕರೆಯಲಾಗುತ್ತದೆ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುತ್ತಿದೆ. ಎರಡು ಗ್ರಹಗಳ ಸಂಯೋಗದಿಂದ ಉಂಟಾಗುವ ರಾಹುಗ್ರಸ್ಥ ಉಪರಾಗದ ಸಂಬಂಧವೇ ಗ್ರಹಣ, ಇದನ್ನು ಬರಿಗಣ್ಣಿನಲ್ಲಿ ನೋಡಬಾರದು ಎಂದು ಧಾರ್ಮಿಕರ ನಂಬಿಕೆ.
ನೆಹರು ತಾರಾಲಯದಲ್ಲಿ ವ್ಯವಸ್ಥೆ: ಪೂರ್ಣಚಂದ್ರಗ್ರಹಣವನ್ನು ಸಾರ್ವಜನಿಕರು ಬರಿಗಣ್ಣಿನಿಂದ ನೋಡಲು ಬೇಕಾದ ವ್ಯವಸ್ಥೆಯನ್ನು ನಗರದ ಟಿ.ಚೌಡಯ್ಯ ರಸ್ತೆಯ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಮಾಡಲಾಗಿದೆ. ಸಂಜೆ 6.30ರಿಂದ ರಾತ್ರಿ 8.30ರ ತನಕ ಖಗೋಳದ ವಿದ್ಯಾಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ತಯಾರಿ ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ ಸಂಜೆ 6.15ಕ್ಕೆ, ಮಂಗಳೂರಿನಲ್ಲಿ ಸಂಜೆ 6.27ಕ್ಕೆ, ಮೈಸೂರಿನಲ್ಲಿ ಸಂಜೆ 6.20ಕ್ಕೆ, ಧಾರವಾಡದಲ್ಲಿ ಸಂಜೆ 6.22ಕ್ಕೆ, ಬಾಗಲಕೋಟೆಯಲ್ಲಿ ಸಂಜೆ 6.18ಕ್ಕೆ ಮತ್ತು ಗುಲ್ಬರ್ಗದಲ್ಲಿ ಸಂಜೆ 6.12ಕ್ಕೆ ಚಂದ್ರೋದಯವಾಗಲಿದೆ. ಬಹುತೇಕ ಕಡೆಗಳಲ್ಲಿ ಸಂಜೆ 6.21ರಿಂದಲೇ ಚಂದ್ರಗ್ರಹಣ ಗೋಚರವಾಗುತ್ತದೆ ಎಂದು ತಾರಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಶಾಲೆಗಳಲ್ಲಿ ಸೂಪರ್ ಮೂನ್ ವೀಕ್ಷಣೆ: ಭಾರತೀಯ ಖಭೌತ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ.ಪ್ರಜ್ವಲ್ಶಾಸಿŒ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಲಹೆಯಂತೆ ಜ.31ರಂದು ಸಂಜೆ 6.30ರ ನಂತರ ಶಾಲೆಯಲ್ಲಿ ಶಿಕ್ಷಕರು, ಮಕ್ಕಳು ಮತ್ತು ಅವರ ಪೋಷಕರು ಸಾಮೂಹಿಕವಾಗಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಜತೆಗೆ ಖಗೋಳದ ಕೆಲವೊಂದು ವಿದ್ಯಮಾನ ತಿಳಿಸಲು ಇಲಾಖೆ ಈ ವ್ಯವಸ್ಥೆ ಮಾಡಿದೆ. ಚಂದ್ರೋದಯದ ವೇಳೆ ಗೋಚರಿಸುವ ಸೂಪರ್ ಮೂನ್ ನೋಡಲು ಬೇಕಾದ ವ್ಯವಸ್ಥೆಯನ್ನು ಶಾಲಾ ಪರಿಸರದಲ್ಲೇ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೂಚಿಸಲಾಗಿದೆ.
ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯಿಂದ ಶ್ರೀನಗರ, ಬಸವೇಶ್ವರನಗರ, ವಿಜಯನಗರ, ರಾಜಾಜಿನಗರದ ಬಾಷ್ಯಂ ವೃತ್ತ, ಅರಬಿಂದೊ ಶಾಲೆ, ಕೆಂಗೇರಿ ಉಪನಗರ, ಆರ್.ಟಿ. ನಗರ ಹಾಗೂ ಜೆ.ಪಿ.ಪಾರ್ಕ್ನಲ್ಲಿ ಸಾಮೂಹಿಕವಾಗಿ ಚಂದ್ರಗ್ರಹಣ ವೀಕ್ಷಿಸಲು ಬೇಕಾದ ವ್ಯವಸ್ಥೆ ಮಾಡಿದೆ.
ಗ್ರಹಣದ ಸಮಯ ಮನುಷ್ಯರಿಗೆ ಅಶೌಚ್ಯವಾಗಿರುತ್ತದೆ. ಹೀಗಾಗಿ ದೇವಾಲಯಗಳಲ್ಲಿ ಪೂಜೆ, ಅಲಂಕಾರ ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆ ನಡೆಯುವುದಿಲ್ಲ. ಗ್ರಹಣದ ಕಾಲದಲ್ಲಿ ಮಂದಾಗ್ನಿ ಇರುತ್ತದೆ. ಇದನ್ನು ಬರಿಗಣ್ಣಿನಿಂದ ನೋಡುವುದು ಒಳ್ಳೆಯದಲ್ಲ.
-ಮುರುಗೋಡು ವಿಜಯವಿಠಲ ಆಚಾರ್ಯ, ಆಧ್ಯಾತ್ಮಕ ಚಿಂತಕ
ಗ್ರಹಣದ ಬಗ್ಗೆ ಜನರಲ್ಲಿ ಅನೇಕ ಬಗೆಯ ಮೂಢನಂಬಿಕೆ ಇದೆ. ಪೂರ್ಣಚಂದ್ರ ಗ್ರಹಣದ ವೇಳೆ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸಲು ಒಂದು ಸದಾವಕಾಶ. ಈ ಗ್ರಹಣ ನೋಡಲು ಯಾವುದೇ ಸಾಧನ-ಸಲಕರಣೆ ಅಗತ್ಯವಿಲ್ಲ. ಇದರಿಂದ ಯಾವ ಅಪಾಯವೂ ಇಲ್ಲ.
-ಎಚ್.ಎಸ್.ಜಯಕುಮಾರ್, ರಾಜ್ಯ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalakshmi Case: ಪ್ರಮುಖ ಆರೋಪಿಯನ್ನು ಪ.ಬಂಗಾಳದಲ್ಲಿ ಗುರುತಿಸಲಾಗಿದೆ ಎಂದ ಗೃಹ ಸಚಿವರು
Terrace garden: ಗೃಹಿಣಿಯ ಮಾನಸಿಕ ಖಿನ್ನತೆಗೆ ಔಷಧಿಯಾದ ತಾರಸಿ ಕೈತೋಟ
Tragic: ರೀಲ್ಸ್ ಮಾಡಲು ಕೆರೆಗೆ ಇಳಿದ ಯುವಕ ಸಾವು
Bengaluru: ಡಿಜೆ ವಿಚಾರ; ಎಸಿಪಿ ಚಂದನ್, ಮುತಾಲಿಕ್ ವಾಗ್ವಾದ
Magadi: ವಾಸವಿ ದೇವಾಲಯದ ಖಜಾಂಚಿ ಮನೆಗೆ ಕನ್ನ… 4 ಕೆಜಿ ಚಿನ್ನಾಭರಣ ದೋಚಿ ಪರಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!
Prakarana Tanikha Hantadallide Movie; ಟ್ರೇಲರ್ ನಲ್ಲಿ ಪ್ರಕರಣದ ವಿವರ
Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ
Kiran Rao ಚಿತ್ರ ಆಸ್ಕರ್ ಗೆ ಪ್ರವೇಶ: ಮಾಜಿ ಪತಿ ಆಮಿರ್ ಖಾನ್ ಹರ್ಷ
ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್-ಜಲಸಾಹಸ ಕ್ರೀಡೆಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.