ರಂಗದಲ್ಲಿ ಸಾಕಾರಗೊಂಡ ಪುಟಾಣಿಗಳ ಪ್ರತಿಭೆ 


Team Udayavani, Feb 2, 2018, 2:51 PM IST

20-37.jpg

ಬಡಗಿನ ಬೆಡಗಿನ ಸೊಗಡನ್ನು ಉಣಿಸುವಲ್ಲಿ ಕ್ರಿಯಾಶೀಲವಾದ ಯಶಸ್ವಿ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆಯ ಮಕ್ಕಳ ಮೇಳದ ಯಕ್ಷಗಾನ “ಸುಧನ್ವಾರ್ಜುನ’ ಎನ್ನುವ ಕಥಾನಕ ರಂಗದಲ್ಲಿ ಸಾಕಾರಗೊಳಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. 12 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿಸಿದ ಗುರುಗಳಾದ ಸೀತಾರಾಮ ಶೆಟ್ಟಿ ಕೊçಕೂರು, ದೇವದಾಸ್‌ ಕೂಡ್ಲಿಯವರು ಪಾಂಡವರ ಒಡ್ಡೋಲಗದ ಪ್ರಾತ್ಯಕ್ಷಿಕೆಯನ್ನು ನೆರವೇರಿಸಿದರು. ಇದೇ ಮಕ್ಕಳಿಂದ ರಾಜ್ಯಾದ್ಯಂತ ಹಲವಾರು ತಾಳಮದ್ದಲೆಗಳೂ ಏರ್ಪಟ್ಟವು. 

ಯಾವುದೇ ಪ್ರಬುದ್ಧ ಕಲಾವಿದರಿಗೂ ಕಡಿಮೆ ಇಲ್ಲದಂತೆ ತಮ್ಮ ವಾಕ್ಚಾತುರ್ಯದಿಂದ ಜನರ ಮನ ಸೆಳೆವ ಪುಟಾಣಿಗಳು ಯಕ್ಷಗಾನ ಪ್ರದರ್ಶನದಲ್ಲೂ ಅಷ್ಟೇ ಮೇಲುಗೈಯ್ಯನ್ನು ಸಾಧಿಸಿದ್ದಾರೆ. ಜ.7ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಾಲಗೋಪಾಲನಾಗಿ ಕಾಣಿಸಿಕೊಂಡ 4 ವರ್ಷದ ತನಿ ಕಾಳಾವರRರ್‌ ನಿಬ್ಬೆರಗಾಗುವಂತೆ ಅಭಿನಯಿಸಿದರು. ಹಂಸಧ್ವಜನ ಪಾತ್ರವನ್ನು ನಿರ್ವಹಿಸಿದ ನಿಶಾ ದಿಟ್ಟ ನಿಲುವಿನೊಂದಿಗೆ ಮಂತ್ರಿಯೊಂದಿಗೆ (ಮಿಥುನ್‌) ಒಡ್ಡೋಲಗವನ್ನು ಕೊಟ್ಟರು. ಪುರ ಪ್ರವೇಶಿಸಿದ ತುರಗವನ್ನು ಬಂಧಿಸಿ ಹಣೆಯಲ್ಲಿ ಕಟ್ಟಲ್ಪಟ್ಟ ಲೇಖನವನ್ನು ತರಿಸಿ ವಾಚಿಸಿದಾಗ ಹರಿಯ ದರ್ಶನ ಭಾಗ್ಯ ಸಮೀಪಿಸಿದ ಯೋಗವನ್ನು ಸ್ಮರಿಸಿ ಆನಂದ ಪಡುತ್ತಾನೆ. ಶ್ರೀ ಕೃಷ್ಣನ ದರ್ಶನ ಭಾಗ್ಯದ ನಿಮಿತ್ತ ಪಾಂಡವರೊಂದಿಗೆ ಯುದ್ಧಕ್ಕೆ ಡಂಗೂರ ಸಾರಿ ಮಗ ಸುಧನ್ವನನ್ನು ಸಭೆಗೆ ಕರೆಸುತ್ತಾನೆ. 

ತದನಂತರ ಸುಧನ್ವನ ಪಾತ್ರದಾರಿಯಾಗಿ ಪಂಚಮಿ ವೈದ್ಯ. ಆಗ ಸುಧನ್ವನು ಬೇಗದಿ ರಣಕನು, ವಾಗುತ ಮುದದಿಂದ. ಚಂಪಕಾನಗರದ ದಳಾಧಿಪತಿಯಾಗಿ ರಣಕ್ಕೆ ತೆರಳುವ ಹುಮ್ಮಸದಲ್ಲಿ ಕೋಲಿ¾ಂಚಿನಂತೆ ಪ್ರವೇಶ ಮಾಡಿ ಅಮ್ಮನ ಆಣತಿಗಾಗಿ ಮಾತೆಯ ಅಂತಃಪುರಕ್ಕೆ ತೆರಳುತ್ತಾನೆ. ಅಲ್ಲಿ ಅನಿರೀಕ್ಷಿತವಾಗಿ ಮಗನ ಆಗಮನವನ್ನು ಕಂಡ ಸುಗರ್ಭಾ(ಧರಣಿ) ಆತಂಕಕ್ಕೊಳಗಾಗುತ್ತಾಳೆ. ಮಗನೊಂದಿಗೆ ಅಸಾಮಾನ್ಯ ಯುದ್ಧದ ಬಗೆಗೆ ತರ್ಕಿಸುತ್ತಾಳೆ. ಶ್ರೀ ಕೃಷ್ಣನ ದರ್ಶನದ ಭಾಗ್ಯದ ಕುರಿತು ಸಂತಸ ಪಡುತ್ತಾಳೆ. ಮತ್ತೆ ಹರಸುತ್ತಾಳೆ. ಬಳಿಕ ಮಡದಿಯ ಅಂತಃಪುರಕ್ಕೆ ತೆರಳುವ ಮಾರ್ಗದಲ್ಲಿ ತಂಗಿ ಕುವಲೆ ವಿಷಯ ತಿಳಿದು ತಡೆಯುತ್ತಾಳೆ, ಧೈರ್ಯ ತುಂಬಿ ಹರಸುತ್ತಾಳೆ. ತಂಗಿ ಕುವಲೆಯಾಗಿ ತೊದಲು ನುಡಿಯಾಡಿ ಕಾಣಸಿಕೊಂಡವಳು ಮೂರುವರೆ ವರ್ಷದ ಬಾಲಕಿ ಪರಿಣಿತ ವೈದ್ಯ. 

ಇನ್ನು ಸತಿ ಶಿರೋಮಣಿ ಪ್ರಭಾವತಿ. ತನ್ನ ವನಪು, ವೈಯ್ನಾರದಿಂದ ರಂಗದಲ್ಲಿ ಕಾಣಿಸಿಕೊಂಡವಳು ಪ್ರಭಾವತಿ (ಪ್ರಣಮ್ಯ). ಪತಿಯನ್ನು ಸ್ವಾಗತಿಸಿ, ಸತ್ಕರಿಸಿ ಆತನಿಂದ ವಿಚಾರವನ್ನು ತಿಳಿದು ಸ್ವರ್ಗ ಪ್ರಾಪ್ತಿಗೆ ಸಂತಾನವನ್ನು ಅಪೇಕ್ಷಿಸುತ್ತಾಳೆ. ಕರ್ತವ್ಯ ನಿರತನಾದ ಸುಧನ್ವ ಒತ್ತಾಯಕ್ಕೆ ಮಣಿದು ಶಾಸ್ತ್ರವನ್ನು ನೆನಪಿಸಿಕೊಂಡು ಇರುಳು ಕಳೆಯುವುದಕ್ಕಾಗಿ ಮಡದಿಯ ಅಂತಃಪುರದಲ್ಲಿ ನಿಲ್ಲುತ್ತಾನೆ. ಅತ್ತ ಅರ್ಜುನ(ಸಾತ್ಯಕಿ), ಪ್ರಧ್ಯಮ್ನ (ಅನನ್ಯ), ವೃಷಕೇತು (ನಿಶಾ) ಮೊದಲಾದವರ ಪರಂಪರೆಯ ಒಡ್ಡೋಲಗ. ಯಜ್ಞಾಶ್ವವನ್ನು ಮರಳಿ ಪಡೆಯುವ ಯೋಚನೆ, ಇದಿರಾಗಿ ನಿಂತ ಎರಡನೇ ಸುಧನ್ವನ ಪಾತ್ರದಲ್ಲಿ ಕಾಣಿಸಿಕೊಂಡವರು ಪೂಜಾ ಆಚಾರ್‌. ಬಿಡುವಿಲ್ಲದ ರಂಗ, ಯುದ್ಧದ ಮೇಲೊಂದು ಯುದ್ಧ. ಕಾವೇರಿದ ರಂಗದಲ್ಲಿ ಕೋಲಾಹಲ.. ಅಂತೂ ಅರ್ಜುನನ ಸೋಲಾದಾಗ ಶ್ರೀ ಹರಿಯ ನಮನ. ತಕ್ಷಕ್‌ ಕಾಳಾವರರ್‌ ಶ್ರೀ ಕೃಷ್ಣನ ವೇಷದಾರಿಯಾಗಿ ಮಿಂಚಿದರು. 

ಅರ್ಜುನನ ಶಪಥವೂ ಈಡೇರುವಂತೆ ಮಾಡಿ, ಸುಧನ್ವ ಭಕ್ತಿಯೂ ಮೇಲಾಗುವಂತೆ ಮಾಡಿದ ಶ್ರೀ ಹರಿ ಪ್ರಸಂಗಕ್ಕೆ ಮಂಗಳ ಹಾಡಿದರು. ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರುಗಳಾದ ಲಂಬೋದರ ಹೆಗಡೆ ಭಾಗವತರಾಗಿದ್ದರು. ಮದ್ದಲೆಯಲ್ಲಿ ಗುರುಗಳಾದ ದೇವದಾಸ್‌ ಕೂಡ್ಲಿ, ಚಂಡೆಯಲ್ಲಿ ಶಿವಾನಂದ ಕೋಟ, ಶಿಬಿರಾರ್ಥಿ ಲೋಹಿತ್‌ ಕೊಮೆ ಸಹಕರಿಸಿದರು. ಸೀತಾರಾಮ ಶೆಟ್ಟಿ ಕೊçಕೂರು ನಿರ್ದೆಶಿಸಿದರು.

ಪ್ರಶಾಂತ್‌ ಮಲ್ಯಾಡಿ

ಟಾಪ್ ನ್ಯೂಸ್

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.