ಒಂಟಿ ವೃದ್ಧೆಗೆ ಶೌಚಾಲಯ: ಸ್ಥಳೀಯರ ಶ್ರಮದಾನ
Team Udayavani, Feb 3, 2018, 11:29 AM IST
ಉಪ್ಪಿನಂಗಡಿ: ಕಡು ಬಡತನದಲ್ಲಿ ಜೀವಿಸುತ್ತಿರುವ ಒಂಟಿ ಮಹಿಳೆಯ ಮನೆಗೆ ಶೌಚಾಲಯ ಇಲ್ಲದಿರುವುದನ್ನು ಮನಗಂಡ ಕಜಾಕ್ಕಾರು ಅಂಬೇಡ್ಕರ್ ಸೇವಾ ಸಮಿತಿ ಪದಾಧಿಕಾರಿಗಳು ತಮ್ಮ ಸ್ವಂತ ದುಡಿಮೆಯ ಮೂಲಕ ಶೌಚಾಲಯ ನಿರ್ಮಿಸಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ.
ಉಪ್ಪಿನಂಗಡಿ ಗ್ರಾ.ಪಂ. ಸಿಬಂದಿ ಮಹಾಲಿಂಗ ಎಂಬವರು ಮನೆ ತೆರಿಗೆ ವಸೂಲಿಗೆಂದು ಬಂದಿದ್ದ ಸಂದರ್ಭದಲ್ಲಿ ಇಲ್ಲಿನ ರಾಮನಗರ ರೋಟರಿ ಭವನದ ಸಮೀಪದಲ್ಲಿ ವಾಸವಿರುವ ಅವ್ವಮ್ಮ ಅವರ ಮನೆಗೆ ಶೌಚಾಲಯ ಇಲ್ಲ ಎಂಬ ವಿಚಾರ ತಿಳಿಯಿತು. ಆದರೆ, ಸರಕಾರದ ಸುತ್ತೋಲೆಯಂತೆ ಶೌಚಾಲಯ ನಿರ್ಮಿಸಲು ಈ ವೃದ್ಧೆ ಅಸಹಾಯಕರಾಗಿದ್ದ ಕಾರಣ ಮಹಾಲಿಂಗ ಅವರು ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳಿಗೆ ಈ ವಿಚಾರ ಮನವರಿಕೆ ಮಾಡಿಕೊಟ್ಟರು.
ಅಂಬೇಡ್ಕರ್ ಸೇವಾ ಸಮಿತಿ ಪದಾಧಿಕಾರಿಗಳಾಗಿರುವ ಕಜಾಕ್ಕಾರು ನಿವಾಸಿಗಳಾದ ರವಿ, ಸಂತೋಷ್, ಸುಂದರ, ಪುನೀತ್, ಸತೀಶ್, ಸೀನಪ್ಪ, ಮನೋಜ್, ಕೃಷ್ಣಪ್ಪ ಹಾಗೂ ಇತರರು ತಕ್ಷಣವೇ ಸ್ಪಂದಿಸಿ, ತಮ್ಮ ಕೆಲಸಗಳಿಗೆ ರಜೆ ಹಾಕಿ, ವೃದ್ಧೆಯ ಮನೆಗೆ ಶೌಚಾಲಯ ಮಾಡಿಸಿಕೊಟ್ಟರು. ಇವರ ಈ ಸೇವೆ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.