
ಉತ್ತಮ ರೇಟಿಂಗ್ ಗ್ರಾಮಕ್ಕೆ ಹೆಚ್ಚು ಕನ್ಯಾದಾನ?
Team Udayavani, Feb 4, 2018, 12:51 PM IST

ಹರಿಯಾಣ: 2014ರ ಹರಿಯಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ, ತಮ್ಮ ರಾಜ್ಯದ ಮದುವೆಯಾಗದ ಯುವಕರಿಗೆ ಸೂಕ್ತ ವಧು ಹುಡುಕಿಕೊಡುವ ವಾಗ್ಧಾನ ನೀಡಿ ವಿವಾದಕ್ಕೊಳಗಾಗಿದ್ದ ಆ ರಾಜ್ಯದ ಹಾಲಿ ಕೃಷಿ ಮತ್ತು ಪಂಚಾಯತ್ಸಚಿವ ಓಂ ಪ್ರಕಾಶ್ ಧನ್ಕರ್, ಅಂಥದ್ದೇ ವಿಚಾರವನ್ನು ಪುನಃ ಪ್ರಸ್ತಾವಿಸಿ, ಮತ್ತೆ ಸುದ್ದಿಯಾಗಿದ್ದಾರೆ.
ಝಜ್ಜರ್ನಲ್ಲಿ ಶುಕ್ರವಾರ ಮಾತನಾಡಿದ್ದ ಅವರು, “ಗ್ರಾಮೀಣ ಭಾಗದ ಯುವಕರು ತಮ್ಮ ಹಳ್ಳಿಯನ್ನು ಸ್ವತ್ಛ ಹಾಗೂ ಸುಂದರವಾಗಿರಿಸಿಕೊಂಡರೆ ಅವರಿಗೆ ಉತ್ತಮ ವಧು ಸಿಗುವ ಅವಕಾಶಗಳು ಹೆಚ್ಚಾಗುತ್ತವೆ” ಎಂದು ಹೇಳಿದ್ದಾರೆ.
ಎಪ್ರಿಲ್ನಿಂದ, ಸ್ವತ್ಛ ಗ್ರಾಮಗಳಿಗೆ ಸ್ಟಾರ್ ರೇಟಿಂಗ್ ಕೊಡುವ ಹೊಸ ಯೋಜನೆಯನ್ನು ಅವರ ಇಲಾಖೆ ಅನುಷ್ಠಾನಗೊಳಿಸಲಿದ್ದು, ಪ್ರತಿ ಗ್ರಾಮಕ್ಕೆ ಅವುಗಳ ನೈರ್ಮಲ್ಯ ಮಟ್ಟ ಆಧರಿಸಿ, ಮೂರು, ಐದು ಅಥವಾ ಏಳು ಸ್ಟಾರ್ ನೀಡಲಾಗುತ್ತದೆ.
ಇದನ್ನು ತಮ್ಮ ಭಾಷಣದಲ್ಲಿ ವಿವರಿಸಲು ಯತ್ನಿಸಿದ್ದ ಧನ್ಕರ್, ” ಉತ್ತಮ ರೇಟಿಂಗ್ ಪಡೆಯುವ ಹಳ್ಳಿಗಳಿಗೆ ಹೆಣ್ಣು ಕೊಡಲು ಜನ ಮುಂದೆ ಬರುತ್ತಾರೆ” ಎಂದಿದ್ದಾರೆ.
ಯುವಕ-ಯುವತಿಯರ ಅನುಪಾತದ ಪಟ್ಟಿಯಲ್ಲಿ ಹರಿಯಾಣ, ದೇಶದಲ್ಲೇ ಕೊನೆಯ ಸ್ಥಾನ ಪಡೆದಿದೆ. ಅಲ್ಲಿ, ಪ್ರತಿ 1000 ಯುವಕರಿಗೆ 879 ಯುವತಿಯರಿದ್ದು ಹೆಣ್ಣು ಸಿಗುವುದೇ ಕಷ್ಟ ಎಂಬಂತಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.