ಭಾರತ ಗಡಿ ಬಳಿ ಚೀನ ವಾಯು ಪಡೆ ಜಮಾವಣೆ: ಅಮೆರಿಕಕ್ಕೆ warning
Team Udayavani, Feb 5, 2018, 11:53 AM IST
ಹೊಸದಿಲ್ಲಿ : ಭಾರತದ ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಂ ವಿವಾದ “ಶಾಂತಿಯುತ’ವಾಗಿ ಬಗೆಹರಿದ ಕೆಲವು ತಿಂಗಳ ಬಳಿಕ ಇದೀಗ ಚೀನ ಪುನಃ ತನ್ನ ಮಿಲಿಟರಿ ಶಕ್ತಿಯನ್ನು ಚೀನ-ಟಿಬೆಟ್ ಗಡಿಯಲ್ಲಿ ಪ್ರದರ್ಶಿಸುವುದಕ್ಕೆ ಸಜ್ಜಾಗಿದೆ.
ಈ ಬಾರಿ ಚೀನ ತನ್ನ ವಾಯು ಪಡೆಯ ಶಕ್ತಿಯನ್ನು ಜಗತ್ತಿಗೆ ಜಾಹೀರು ಪಡಿಸುವುದಕ್ಕೆ ಮುಂದಾಗಿದ್ದು ಇದು ಬಹುತೇಕ ಅಮೆರಿಕಕ್ಕೆ ಸೆಡ್ಡು ಹೊಡೆಯವ ಉದ್ದೇಶವನ್ನು ಹೊಂದಿರುವಂತಿದೆ ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಭಾರತದ ಗಡಿ ನೆಮ್ಮದಿ ಚೀನದ ಈ ಕೃತ್ಯದಿಂದ ಈಗ ಪುನಃ ಕದಡುವಂತಾಗಿದೆ.
ಚೀನ-ಟಿಬೆಟ್ ಗಡಿಯಲ್ಲಿ ಬೀಜಿಂಗ್ ಮಾಮೂಲಿಗಿಂತ ಶೇ.20ರಷ್ಟು ಹೆಚ್ಚು, ಎಂದರೆ ಒಟ್ಟು 51 ಫೈಟರ್ ಜೆಟ್ಗಳನ್ನು ಸಜ್ಜು ಗೊಳಿಸಿದೆ. ಲ್ಹಾಸಾ ಗೊಂಗರ್ ಪ್ರದೇಶದಲ್ಲಿ ಎಂಟು ಫೈಟರ್ ಜೆಟ್ಗಳನ್ನು ಇರಿಸಲಾಗಿದೆ.
ಇದಲ್ಲದೆ 22 ಎಂಐ-017 ಹೆಲಿಕಾಪ್ಟರ್ ಗಳನ್ನು ತಂದು ನಿಲ್ಲಿಸಿದೆ. ಇವುಗಳ ಜತೆಗೆ ಚೀನ ಏರ್ ಮಿಸೈಲ್ ವ್ಯವಸ್ಥೆಯನ್ನೂ ಅಣಿಗೊಳಿಸಿದೆ.
ರಿಕಾಜೆ ಭಾಗದಲ್ಲಿ 17 ಯುದ್ಧ ವಿಮಾನಗಳು, 11 ಎಂಐ-17 ಮಾನವ ರಹಿತ ವಿಮಾನಗಳನ್ನು ಇರಿಸಲಾಗಿದೆ. ಸಿಕ್ಕಿಂ ವಲಯಕ್ಕೆ ಸನಿಹದಲ್ಲೇ ಜೆಟ್ಸ್ಗಳನ್ನು ಕೂಡ ಚೀನ ಸಮರ ಸನ್ನದ್ದ ಸ್ಥಿತಿಯಲ್ಲಿ ಇರಿಸಿದೆ.
ಇಷ್ಟಕ್ಕೂ ಚೀನ – ಟಿಬೆಟ್ ಗಡಿ ಪ್ರದೇಶ ಸಮರ ವಿಮಾನ ಹಾರಾಟದ ವಲಯವಲ್ಲ; ಅಂತಾಷ್ಟ್ರೀಯವಾಗಿ ಅದು ನಿಷಿದ್ಧ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಯಲ್ಲಿ ಚೀನ ಅಮೆರಿಕಕ್ಕೆ ಹಿಂದಿನ ಶೀತಲ ಸಮರ ಕಾಲದ ಮನೋಭಾವದಿಂದ ಹೊರ ಬರುವಂತೆ ನಿಷಿದ್ಧ ಬುದ್ಧಿವಾದ ಹೇಳಿದೆ. ತನ್ನ ವಾಯುಪಡೆ ಬಲವನ್ನು ಕೀಳಂದಾಜು ಮಾಡದಂತೆಯೂ ಅಮೆರಿಕಕ್ಕೆ ಅದು ತಾಕೀತು ಮಾಡಿದೆ.
ಹಾಗಿದ್ದರೂ ಇದೇ ವೇಳೆ ಚೀನದ ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ ಚೀನವು ಶಾಂತಿ ಮತ್ತು ಅಭಿವೃದ್ಧಿಯನ್ನು ಪೋಷಿಸುವಂತೆ ಅಮೆರಿಕಕ್ಕೆ ಕರೆ ನೀಡಿದೆ !
ಅಮೆರಿಕ ಈಚೆಗೆ ತನ್ನಲ್ಲಿನ ಅಣ್ವಸ್ತ್ರಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದೇ ಚೀನದ ಈ ಅತಿರೇಕದ ಪ್ರತಿಕ್ರಿಯೆಗೆ ಕಾರಣವೆಂದು ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.