ಸೋಲಾರ್‌ಗೆ ಇಲ್ಲಿದೆ ನಾನಾ ದಾರಿಗಳು


Team Udayavani, Feb 5, 2018, 3:55 PM IST

solar.jpg

ಹಣವನ್ನು ಹೇಗೋ ಹೊಂಚಬಹುದು. ಸಾಲ ಸಿಗುತ್ತದೆ. ಅಷ್ಟಿಷ್ಟು ಸಬ್ಸಿಡಿಯೂ ಗಿಟ್ಟುತ್ತದೆ. ಆದರೆ ಸೋಲಾರ್‌ ಪ್ಯಾನೆಲ್‌ ಹಾಕುವ ಯೋಜನೆಯನ್ನು ಹಾಕಿಕೊಂಡವರು ಮೊದಲು ನಿರ್ಧರಿಸಬೇಕಾಗಿರುವುದು ಸ್ಥಳಾವಕಾಶವನ್ನು. ಸ್ವಂತದ ಮನೆ ಇರಬೇಕು. ಫ್ಯಾÉಟ್‌ನಲ್ಲಿ ಬಾಡಿಗೆಗೆ ಇರುವವರಿಗೆ ಅಥವಾ ಫ್ಯಾÉಟ್‌ ಮಾಲೀಕರಿಗೆ ಇದು ವಜ್ಯì. ಮನೆಯ ಮೇಲ್ಛಾವಣಿ ಇದಕ್ಕೆ ಪ್ರಶಸ್ತ ಬೇರುಗಳು ಮನೆಯನ್ನೇ ನಡುಗಿಸಬಲ್ಲವು !

ಸ್ಥಳ. ಒಂದೊಮ್ಮೆ ಆ ಅವಕಾಶ ಇನ್ನಾವುದೋ ಕಾರಣಕ್ಕೆ ಇಲ್ಲ ಎಂತಾದರೆ ನಾವು ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಸ್ವಾವಲಂಬಿಯಾಗುವ ಅಥವಾ ವಿದ್ಯುತ್‌ ಪ್ರಸರಣ ಗ್ರಿಡ್‌ಗೆ ಮಾರಾಟ ಮಾಡುವ ಯೋಚನೆಯನ್ನೇ ಕೈ
ಬಿಡಬೇಕೇ?

ಗೋಡೆಗೆ ಪ್ಯಾನೆಲ್‌ ಶೃಂಗಾರ!
ಹೀಗೆ ಯೋಚಿಸಿ, ಮನೆಯ ಮೇಲ್ಛಾವಣಿ ಸೋಲಾರ್‌ ಪ್ಯಾನೆಲ್‌ ಹಾಕಲು ಸಿಕ್ಕುವುದಿಲ್ಲ. ಆದರೆ ಮನೆಯ ಎರಡು ಗೋಡೆಗಳು ಬಿಸಿಲಿದ್ದಷ್ಟೂ ಹೊತ್ತೂ ಸೂರ್ಯ ರಶ್ಮಿಗೆ ತೆರೆದಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಗೋಡೆಗೇ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಪಡೆಯಬಹುದೇ ಎಂಬ ಪ್ರಶ್ನೆ ಮೂಡದಿರದು. ಇದಕ್ಕೆ ನಾವು ದೂರದ ಅಮೆರಿಕಾದಿಂದ ದೃಷ್ಟಾಂತಗಳನ್ನೇ ಹಿಡಿದು ತರಬಹುದು! ನ್ಯೂಯಾರ್ಕ್‌ನ ಕ್ಯುಕೊÕàಟಿಕ್‌ ಸಿಸ್ಟಂ ಕಂಪನಿ ಅಲ್ಲಿನ ಅರ್ಬನ್‌ ಹೆಲ್ಪ್ ಪ್ಲಾನ್‌ ಹಾಸ್ಪಿಟಲ್‌ನ ಸಿಂಪ್ಸನ್‌ ಪೆವಿಲಿಯನ್‌ ಗೋಡೆಗೆ 37 ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿದೆ. ಈ ಆಸ್ಪತ್ರೆಯ ಮೇಲ್ಛಾವಣಿಯ ಮೇಲೆ ಸೋಲಾರ್‌ ಪ್ಯಾನೆಲ್‌ ಕೂರಿಸಿದ್ದರೆ ಕೇವಲ 12.1 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಗೆ ಮಾತ್ರ ಅವಕಾಶವಿತ್ತು. ಹೆಚ್ಚುವರಿ ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ ಅಳವಡಿಕೆಯಿಂದ ಆಗುವ ವಿದ್ಯುತ್‌ ಲಾಭ ಒಂದೆಡೆಯಾದರೆ, ಉತ್ಪಾದನೆಯಾಗುವ ದರದಲ್ಲಿ ಶೇ. 30ರಷ್ಟು ಮಾತ್ರ ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆದಿದ್ದು ಅಲಾಸ್ಕಾದಲ್ಲಿ ಸೂರ್ಯನ
ಪರಿಭ್ರಮಣೆಯನ್ನು ಅನುಸರಿಸಿ ಲೆಕ್ಕಿಸಿದಂತೆ ಗೋಡೆ ಸೋಲಾರ್‌ನ ಉತ್ಪಾದನೆ ಮೇಲ್ಛಾವಣಿ ಉತ್ಪಾದನೆಗಿಂತ ಶೇ. 9.8ರಷ್ಟು ಮಾತ್ರ ಕಡಿಮೆ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅಲಾಸ್ಕಾ ರಾಜ್ಯದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಮನೆಯ ಕಲ್ಪನೆಯಿಂದಲೇ ಹೊರಗಿಟ್ಟು, ರಸ್ತೆ ಪಕ್ಕದಲ್ಲೆಲ್ಲ 15 ಡಿಗ್ರಿ ಕೋನದಲ್ಲಿ, ಅಷ್ಟೇಕೆ, ನೆಲಕ್ಕೆ 90 ಡಿಗ್ರಿ
ಲಂಬವಾಗಿಯೂ ಜೋಡಿಸಲಾಗಿದೆ. ಅಲ್ಲಿನ ಲೈಮ್‌ ಸೋಲಾರ್‌ ಸಿಸ್ಟಂ ಈ ಮಾದರಿಯನ್ನು ಅನುಸರಿಸಿದೆ.

ತೇಲುತ ವಿದ್ಯುತ್‌ ಶಾಕ್‌!
ಗುಜರಾತ್‌ನಲ್ಲಿ ನೀರಿನ ಕಾಲುವೆಗಳ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದನೆ ಮಾಡುವ ಕಥನಗಳನ್ನು ನಾವು ಕೇಳಿದ್ದೇವೆ. ಇದರಿಂದ ವಿದ್ಯುತ್‌ ಉತ್ಪತ್ತಿ ಜೊತೆಗೆ ಸೂರ್ಯ ಶಾಖದ ಕಾರಣ ಆವಿಯಾಗುವ ನೀರಿನ ಪ್ರಮಾಣ ಕೂಡ ಕಡಿಮೆಯಾಗುವುದು ಗಮನೀಯ ಅಂಶ. ಜಲ ವಿದ್ಯುತ್‌ನ ಹೊಸ ಯೋಜನೆ ಸಾಧ್ಯವಿಲ್ಲದಾಗ ಮತ್ತು ಅದಕ್ಕೆ ಬೇಕಾದ ನೀರೇ ಕಡಿಮೆಯಾಗುತ್ತಿರುವಾಗ ಇಂತಹ ಪ್ರಯೋಗ ಇನ್ನಷ್ಟು ಬೇಕು. ಕೇರಳ ರಾಜ್ಯದ ಬಹುದೊಡ್ಡ ಆಸ್ತಿ ನೀರು. ಈಗ ಆ ರಾಜ್ಯದಲ್ಲಿ ನೀರಿನ ಮೇಲೆ ತೇಲುವ ಸೋಲಾರ್‌ ಪ್ಯಾನೆಲ್‌ಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ಅಲ್ಲಿನ ವೈಯನಾಡಿನ ಬನಸುರ ನದಿಯ ಮೇಲೆ 500 ಕೆಡಬ್ಯು$Éಪಿ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ 1938 ಪ್ಯಾನೆಲ್‌ಗ‌ಳನ್ನು ಖುದ್ದು ಕೇರಳದ ರಾಜ್ಯ ವಿದ್ಯುತ್‌ ಬೋರ್ಡ್‌ 9.25 ಕೋಟಿ ರೂ. ವೆಚ್ಚದಲ್ಲಿ ಹಾಕಿದೆ. 18 ಫೆರೊÅà ಸಿಮೆಂಟ್‌ ತೇಲು ವ್ಯವಸ್ಥೆಯ ಮೇಲೆ ಅಳವಡಿಸಿರುವ ಸೋಲಾರ್‌ ಪ್ಯಾನೆಲ್‌ ಬರೋಬ್ಬರಿ 1.25 ಎಕರೆ ಪ್ರದೇಶವನ್ನು ಅವಲಂಬಿಸಿದೆ. ಜನವರಿ 2016ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಈಗ ಪ್ರತಿ ವರ್ಷ 7.5 ಲಕ್ಷ ಯೂನಿಟ್‌ ವಿದ್ಯುತ್‌ ಈ ಸ್ಥಾವರದಿಂದ ಉತ್ಪಾದನೆಯಾಗುತ್ತಿದೆ. ಒಂದೊಮ್ಮೆ ನಮ್ಮ ರಾಜ್ಯದಲ್ಲೂ ಕರ್ನಾಟಕ ಪವರ್‌ ಕಾರ್ಪೊರೇಷನ್‌ ಲಿಂಗನಮಕ್ಕಿ ಆಣೆಕಟ್ಟಿನ ಶರಾವತಿ ಹಿನ್ನೀರಿನಲ್ಲೂ ಇಂತಹ ಫೋ›ಟಿಂಗ್‌ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿದರೆ ಆವಿಯಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು ಮತ್ತು ಹೆಚ್ಚುವರಿಯಾಗಿ ನೀರಿನ ಉತ್ಪಾದನೆಯೂ ಆಗುತ್ತಿತ್ತು.
ಅಲ್ಲವೇ?

ಈ ನಡುವೆ ಮಡಚಬಹುದಾದಂತ ಸೋಲಾರ್‌ ಪ್ಯಾನೆಲ್‌ಗ‌ಳು ಬಂದಿವೆ. ಸೋಲಾರ್‌ ಪ್ಯಾನೆಲ್‌ಗ‌ಳ ಕ್ಷಮತೆ ಹೆಚ್ಚಾಗಿದೆ. ಅವುಗಳ ಬೆಲೆಯಲ್ಲೂ ಗಣನೀಯ ಇಳಿಕೆಯಾಗಿದೆ. ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಪರಿಸರಕ್ಕೆ ಅಪಾಯಕಾರಿಯಾದ ಅಣು ವಿದ್ಯುತ್‌, ಥರ್ಮಲ್‌ಗ‌ಳ ಜಾಗದಲ್ಲಿ ಸೋಲಾರ್‌ ಕಡೆಗೆ ನಾವು ವಾಲಲೇಬೇಕಾಗಿದೆ.

– ಗುರು ಸಾಗರ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.