![supreem](https://www.udayavani.com/wp-content/uploads/2024/07/supreem-2-415x259.jpg)
22 ಭಾರತೀಯ ನಾವಿಕರು ಒತ್ತೆಸೆರೆಯಿಂದ ಮುಕ್ತಿ: ಸುಶ್ಮಾ ಸ್ವರಾಜ್
Team Udayavani, Feb 6, 2018, 12:02 PM IST
![Sushma-helping-700.jpg](https://www.udayavani.com/wp-content/uploads/2018/02/6/Sushma-helping-700-620x348.jpg)
ಹೊಸದಿಲ್ಲಿ : ಕಳೆದ ಫೆ.1ರಂದು ಪಶ್ಚಿಮ ಆಫ್ರಿಕದ ಬೆನಿನ್ ಕರಾವಳಿಯ ದೂರ ಸಮುದ್ರದಲ್ಲಿ ನಾಪತ್ತೆಯಾಗಿದ್ದ 22 ಭಾರತೀಯ ನಾವಿಕರಿದ್ದ ತೈಲ ಟ್ಯಾಂಕರ್ ಪತ್ತೆಯಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.
ನಾಲ್ಕು ದಿನಗಳ ಒತ್ತೆ ಸೆರೆ ಬಳಿಕ ಕಡಲ್ಗಳ್ಳರು ಎಲ್ಲ ಭಾರತೀಯ ನಾವಿಕರನ್ನು ಬಿಡುಗಡೆಗೊಳಿಸಿದ್ದಾರೆ ಮತ್ತು ಅವರೆಲ್ಲ ಸುರಕ್ಷಿತರಾಗಿದ್ದು ಆರೋಗ್ಯದಿಂದ್ದಾರೆ. ತೈಲ ಟ್ಯಾಂಕರ್ ತನ್ನ ಯಾನವನ್ನು ಪುನರಾರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಚಿವೆ ಸುಶ್ಮಾ ಸ್ವರಾಜ್ ಅವರು ನೈಜೀರಿಯ ಮತ್ತು ಬೆನಿನ್ ಗೆ ಸಕಾಲದಲ್ಲಿ ನೀಡಿದ ನೆರವು ಮತ್ತು ಬೆಂಬಲಕ್ಕಾಗಿ ಕೃತಜ`ತೆಯನ್ನು ಅರ್ಪಿಸಿದ್ದಾರೆ.
ಟಾಪ್ ನ್ಯೂಸ್
![supreem](https://www.udayavani.com/wp-content/uploads/2024/07/supreem-2-415x259.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.