ಕೃಷಿಯನ್ನೇ ನಂಬಿದ‌ ಎಲ್‌ಐಸಿ ಅಧಿಕಾರಿ


Team Udayavani, Feb 11, 2018, 11:32 PM IST

LIC-Krushi-11-2.jpg

ಕಾಪು: ಎಲ್‌ಐಸಿಯ ನಿವೃತ್ತ ಅಧಿಕಾರಿ, ಎಂ. ಎ., ಎಲ್‌ಎಲ್‌ಬಿ ಪದವೀಧರರಾಗಿರುವ ಮಜೂರು ಗ್ರಾಮದ ಗೋಪಾಲ ಕುಂದರ್‌ ಅವರು ನಿವೃತ್ತಿಯ ಅನಂತರ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಮಳೆಗಾಲ ಮುಗಿದಾಕ್ಷಣ ಸಾವಯವ ತರಕಾರಿ ಕೃಷಿಯತ್ತ ಗಮನ ಹರಿಸುವ ಅವರು ಒಂದು ಎಕರೆ ಕೃಷಿ ಗದ್ದೆಯಲ್ಲಿ ಗೊಂಡೆ ಹೂ, ಹರಿವೆ, ಬಸಳೆ, ಸೋರೆ ಕಾಯಿ, ಪಡುವಲ ಕಾಯಿ, ಕಾಸರಗೋಡು ಬದನೆ, ಜೋಳ, ಬೆಂಡೆ, ಅಲಸಂಡೆ ಸಹಿತ ಹಲವು ವಿಧದ ಕೃಷಿಯನ್ನು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಎಂ. ಎ., ಎಲ್‌ಎಲ್‌ಬಿ ಪದವೀಧರ 
ಮಜೂರು ಗ್ರಾಮದ ಉಳಿಯಾರಿನ ಪ್ರಗತಿಪರ ಕೃಷಿಕರಾಗಿರುವ ಗೋಪಾಲ್‌ ಕುಂದರ್‌ ಮೂಲತಃ ಪಾಂಗಾಳ ಗುಡ್ಡೆ ಗರಡಿ ಮನೆಯ ಕೃಷಿಕ ಕುಟುಂಬಕ್ಕೆ ಸೇರಿದವರು. ಉದ್ಯೋಗವನ್ನು ಅರಸಿ ಕರಾವಳಿಯಿಂದ ಮುಂಬಯಿಗೆ ತೆರಳಿ ಹಗಲು ಕೆಲಸ ಮಾಡಿ ರಾತ್ರಿ ಶಾಲೆಗೆ ತೆರಳಿ ವಿದ್ಯೆ ಕಲಿತ ಇವರು ಎಂ. ಎ. / ಎಲ್‌.ಎಲ್‌.ಬಿ. ಪದವಿಯನ್ನು ಪಡೆದಿರುವರು. ಮುಂದೆ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.

ಎಲ್‌ಐಸಿ ಬೆಂಡೆ…!
ಬಾಲ್ಯದಿಂದಲೂ ಕೃಷಿಯತ್ತ ಒಲವು ಹೊಂದಿದ್ದ ಗೋಪಾಲ್‌ ಕುಂದರ್‌ ಅವರು ಎಲ್‌ಐಸಿ ಉದ್ಯೋಗದೊಂದಿಗೆ ಮುಂಬಯಿಯಿಂದ ಊರಿಗೆ ಮರಳಿದ ಬಳಿಕ ವೃತ್ತಿಯ ಜತೆಗೆ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡರು. ಮನೆ ಪದಾರ್ಥಕ್ಕಾಗಿ ಬೆಳೆಸಿದ ತರಕಾರಿ ರುಚಿಯನ್ನು ತನ್ನ ಸಹೋದ್ಯೋಗಿಗಳಿಗೂ ನೀಡಲಾರಂಭಿಸಿದ್ದರು. ಗೋಪಾಲಣ್ಣನ ಮನೆಯಲ್ಲಿ ಬೆಳೆದ ಬೆಂಡೆಯ ರುಚಿ ಸವಿದ ಅವರ ಸಹೋದ್ಯೋಗಿಗಳು ಎಲ್‌ಐಸಿ ಬೆಂಡೆಯೆಂದೇ ಕರೆಯಲಾರಂಭಿಸಿದರು. ಇದನ್ನೇ ಪ್ರೇರಣೆಯಾಗಿಸಿಕೊಂಡ ಅವರು ನಿವೃತ್ತಿಯ ಬಳಿಕ ಕೃಷಿಯನ್ನೇ ತಮ್ಮ ಜೀವಾಳವನ್ನಾಗಿಸಿಕೊಂಡಿದ್ದಾರೆ.

ಬೆಂಡೆ ಕೃಷಿಯಿಂದ ಗೊಂಡೆ ಕೃಷಿಯವರೆಗೆ ಪಯಣ 
ಆರಂಭದಲ್ಲಿ ಬೆಂಡೆ ಕೃಷಿಯ ಮೂಲಕ ತರಕಾರಿ ಕೃಷಿ ಬದುಕನ್ನು ಪ್ರಾರಂಭಿಸಿದ ಗೋಪಾಲ್‌ ಕುಂದರ್‌ ಅವರು ಬಳಿಕ ತನ್ನ ಪತ್ನಿ ರೋಹಿಣಿ ಅವರ ಸಹಕಾರದೊಂದಿಗೆ ತರಕಾರಿ ಬೆಳೆಗಳನ್ನು ಬೆಳೆಸತೊಡಗಿದರು. ಜೋಳ, ಪಡುವಳ ಕಾಯಿ, ಸೋರೆ ಕಾಯಿ ಬೆಳೆಯತ್ತಲೂ ಗಮನ ಹರಿಸಿದ ಅವರು ಕರಾವಳಿಯ ಮಣ್ಣಿನಲ್ಲಿ ಗೊಂಡೆ ಹೂವಿನ ಬೆಳೆಯನ್ನು ಬೆಳೆಸುವ ಮೂಲಕ ಎಲ್ಲರ ಗಮನ ಸೆಳೆದರು. ಇತರೆಲ್ಲಾ ತರಕಾರಿ ಕೃಷಿಗಳಿಗೂ ಕ್ರಿಮಿನಾಶಕವೆಂದೇ ಹೇಳಲಾಗುತ್ತಿರುವ ಗೊಂಡೆ ಬೆಳೆ ಉತ್ತಮ ಇಳುವರಿಯನ್ನು ನೀಡುವ ಮೂಲಕ ಇವರ ಕೈ ಹಿಡಿಯಿತು.

ಕೈಹಿಡಿದ ಬಸಳೆ ಕೃಷಿ
ಬೆಂಡೆ ಮತ್ತು ಗೊಂಡೆಯ ಯಶಸ್ಸಿನ ಬಳಿಕ ಮತ್ತೂಂದು ರೀತಿಯ ಕೃಷಿಯತ್ತ ಒಲವು ತೋರಿಸಿದ ಅವರು ಪೇಟೆಯಿಂದ ಪದಾರ್ಥಕ್ಕಾಗಿ ತಂದ ಬಸಳೆ ತುಂಡುಗಳನ್ನು ದರ ತೆಗೆದು ನೆಟ್ಟು ಬಸಳೆ ಕೃಷಿಯತ್ತಲೂ ಮನ ಹಾಯಿಸಿದರು. ಬಸಳೆ ಗಿಡಗಳು ಬೆಳೆಯುತ್ತಾ ಬಂದಂತೆ ಅದರಲ್ಲಿ  ಕಾಯಿ ಆಗುವುದನ್ನೂ ವೀಕ್ಷಿಸಿದ ಅವರು ಕುತೂಹಲಕ್ಕಾಗಿ ಈ ಕಾಯಿಗಳನ್ನೇ ಒಣಗಿಸಿ, ಬೀಜದಿಂದಲೂ ಬಸಳೆ ಕೃಷಿ ಮಾಡಬಹುದೆನ್ನುವುದನ್ನು ಆವಿಷ್ಕರಿಸಿದರು. ಆ ಮೂಲಕ ಬಸಳೆ ಕೃಷಿಯೂ ಅವರ ಕೈ ಹಿಡಿಯಿತು.

ಸಾವಯವ ಗೊಬ್ಬರವೇ ಬಳಕೆ
ಹಟ್ಟಿಗೊಬ್ಬರ ಮತ್ತು ಸುಡುಮಣ್ಣಿನ ಮಿಶ್ರಣವನ್ನೇ ಹದ ಮಾಡಿ ತನ್ನೆಲ್ಲ ತರಕಾರಿ ಕೃಷಿಗಳಿಗೆ ಬಳಸುತ್ತಾ ಬರುತ್ತಿರುವುದರಿಂದ ಗೋಪಾಲ ಕುಂದರ್‌ ಅವರು ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಬೆಳಗ್ಗೆದ್ದು ಎರಡು ಕ್ಯಾನ್‌ಗಳಲ್ಲಿ ಗೋಮೂತ್ರ, ಸೆಗಣಿ, ಸುಡುಮಣ್ಣಿನ ಮಿಶ್ರಣವನ್ನು ತಾನೇ ಹದ ಮಾಡಿ ಗದ್ದೆಗೆ ಸುರಿಯುತ್ತಾರೆ. ಸಾವಯವ ಗೊಬ್ಬರ ಆರೋಗ್ಯಕ್ಕೆ ಉತ್ತಮ ಮತ್ತು ಉತ್ತಮ ಇಳುವರಿ ನೀಡುವಲ್ಲಿಯೂ ಸಹಕಾರಿ ಎಂಬ ಭಾವನೆ ಅವರದ್ದು.

ಬಸಳೆ ಬೀಜದಿಂದ ಗಿಡ ಮಾಡುವ‌ ವಿಧಾನ 
ಬಸಳೆ ಗಿಡ ಬಿಡುವ ಬಿಳಿ ಬಣ್ಣದ ಹೂವುಗಳು ಮುಂದೆ ನೇರಳೆ ಬಣ್ಣದ ಕಾಯಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಆ ನೇರಳೆ ಬಣ್ಣದ ಕಾಯಿಗಳನ್ನು ಮೂರರಿಂದ ನಾಲ್ಕು ದಿನ ಬಿಸಿಲಿನಲ್ಲಿ ಒಣಗಿಸಿದ ಬಳಿಕ ಹದ ಮಾಡಿದ ನೆಲದಲ್ಲಿ ಬಿತ್ತನೆ ಮಾಡಿ ನೀರುಣಿಸಿದರೆ ಬಸಳೆ ಗಿಡಗಳು ಮೊಳಕೆಯೊಡೆಯುತ್ತವೆ. ಮೊಳಕೆಯೊಡೆದ ಬಸಳೆ ಗಿಡಗಳನ್ನು ದರ ಅಗೆದು ಕೆಳಭಾಗದಲ್ಲಿ ಒಣಗೊಬ್ಬರ ಹಾಕಿ ಮಣ್ಣಿನ ಮಿಶ್ರಣದೊಂದಿಗೆ ನೆಡಬೇಕು. ಹೀಗೆ ನೆಟ್ಟ ಗಿಡಗಳು ಬೆಳವಣಿಗೆಗೆ ಅನುಗುಣವಾಗಿ ಸುಡು ಮಣ್ಣು, ಸಾವಯವ ಗೊಬ್ಬರ ಹಾಕಿ ಪೋಷಿಸಿಕೊಂಡು ಬರಬೇಕು. ಸಮರ್ಪಕ ರೀತಿಯಲ್ಲಿ ಬಸಳೆ ಗಿಡ ಬೆಳೆದರೆ 20-25 ದಿನಗಳೊಳಗಾಗಿ ಬಸಳೆಯನ್ನು ತುಂಡರಿಸಿ ಮಾರುಕಟ್ಟೆಗೆ ಕೊಂಡೊಯ್ಯಬಹುದಾಗಿದೆ.

ಬದುಕು ಕಟ್ಟಲು ಪ್ರೇರಣೆ
ಸ್ವಂತ ಪರಿಶ್ರಮದೊಂದಿಗೆ ಮಕ್ಕಳನ್ನು ಸಾಕಿದಂತೆ ಕೃಷಿ ಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬರುವ ಮೂಲಕ ದಿನದ ಕನಿಷ್ಠ 2-3 ಗಂಟೆಗಳನ್ನು ಕೃಷಿ ಗದ್ದೆಯಲ್ಲಿ ಕಳೆಯುತ್ತೇನೆ. ಬಹಳಷ್ಟು ಮಂದಿ ಕೃಷಿ ಲಾಭದಾಯಕವಲ್ಲ ಎಂದು ಹೇಳುತ್ತಾರೆ. ಆದರೆ ನಾನು ಕೃಷಿಯ ಮೇಲೆ ಪ್ರೀತಿಯಿಟ್ಟಿದ್ದು, ಕೃಷಿ ನಿರಂತರವಾಗಿ ನನ್ನ ಕೈ ಹಿಡಿದಿದೆ.
– ಗೋಪಾಲ ಕುಂದರ್‌ 

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.