PNB effect: ಸಿಬಿಐನಿಂದ 6 ತಿಂಗಳ ಬಳಿಕ 389 ಕೋಟಿ ವಂಚನೆ ಕೇಸು
Team Udayavani, Feb 24, 2018, 3:29 PM IST
ಹೊಸದಿಲ್ಲಿ : ದಿಲ್ಲಿಯ ವಜ್ರಾಭರಣ ಕಂಪೆನಿಯೊಂದರಿಂದ ತನಗೆ 389.85 ಕೋಟಿ ರೂ.ಗಳ ಸಾಲ ವಂಚನೆಯಾಗಿದೆ ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ದೂರು ನೀಡಿದ ಆರು ತಿಂಗಳ ಅನಂತರ ಸಿಬಿಐ ಕೊನೆಗೂ, ಇಂದು ಶನಿವಾರ ಕೇಸು ದಾಖಲಿಸಿಕೊಂಡಿದೆ.
ದಿಲ್ಲಿಯ ಕರೋಲ್ ಬಾಗ್ನಲ್ಲಿರು ದ್ವಾರಕಾದಾಸ್ ಸೇಠ್ ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಿರುದ್ಧ ಸಿಬಿಐ, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ಗೆ 389.85 ಕೋಟಿ ರೂ. ಸಾಲ ವಂಚನೆ ಮಾಡಿರುವ ಬಗ್ಗೆ ಇಂದು ಶನಿವಾರ ಕೇಸು ದಾಖಲಿಸಿಕೊಂಡಿತು.
ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಮೆಹೂಲ್ ಚೋಕ್ಸಿ ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 11,300 ಕೋಟಿ ರೂ. ಸಾಲ ವಂಚನೆ ಮಾಡಿರುವುದರ ವಿರುದ್ಧ ಕುಣಿಕೆ ಬಿಗಿಯುತ್ತಿರುವ ಸಿಬಿಐ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ತನಗೆ ದಿಲ್ಲಿ ವಜ್ರಾಭರಣ ಉದ್ಯಮ ಸಂಸ್ಥೆಯಿಂದ 389.85 ಕೋಟಿ ರೂ.ಸಾಲ ವಂಚನೆಯಾಗಿರುವುದಾಗಿ ದೂರು ನೀಡಿದ ಆರು ತಿಂಗಳ ಬಳಿಕ, ಹಾಲಿ ಸನ್ನಿವೇಶದಲ್ಲಿ, ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿರುವುದು ತನಿಖಾ ವ್ಯವಸ್ಥೆಯಲ್ಲಿನ ಸಡಿಲುತನ ಇದೀಗ ಬಹಿರಂಗವಾಗಿದೆ.
ಸಿಬಿಐ ಇಂದು ಒರಿಯೆಂಟಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಸಭ್ಯ ಸೇಠ್ , ರೀಟಾ ಸೇಠ್ , ಕೃಷ್ಣ ಕುಮಾರ್ ಸಿಂಗ್ , ರವಿ ಸಿಂಗ್ ಮತ್ತು ದ್ವಾರಕಾ ದಾಸ್ ಸೇಠ್, ಎಸ್ಇಝಡ್ ಇನ್ಕಾರ್ಪೊರೇಶನ್ ಸಂಸ್ಥೆಯ ವಿರುದ್ಧ ಕೇಸು ದಾಖಲಿಸಿಕೊಂಡಿತು.
ದ್ವಾರಕಾದಾಸ್ ಸೇಠ್ ಕಂಪೆನಿಯು 2007 ಮತ್ತು 2012ರ ನಡುವೆ ಓಬಿಸಿ ಯಿಂದ ವಿವಿಧ ಬಗೆಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದು ಈ ಸುಸ್ತಿ ಸಾಲವು 389 ಕೋಟಿ ರೂ. ಮೊತ್ತಕ್ಕೆ ಬೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.