ಮತ್ತೆ ಮತ್ತೆ ಹಾಜರಾಗ್ತೇನೆ ಪ್ರೇಮ ಪರೀಕ್ಷೆಗೆ


Team Udayavani, Mar 6, 2018, 3:54 PM IST

mathe-mathe.jpg

ವಿಫ‌ಲನಾದೆ ಎರಡನೇ ಬಾರಿ! ಎದೆಯೊಳಗಿದ್ದ ಎಲ್ಲ ಮಾತುಗಳನ್ನು ಈ ಬಾರಿ ಹೇಳಿಯೇ ಬಿಡಬೇಕೆಂದು ಅವಳೆದುರು ನಿಂತು ಏನನ್ನೂ ಹೇಳಲಾರದೆ ಮೂಕನಾಗಿದ್ದು, ಬಾಯಿಪಾಠ ಮಾಡಿಕೊಂಡಿದ್ದ ಮಾತುಗಳನ್ನೆಲ್ಲ ಮರೆತು ಮೌನಿಯಾಗಿದ್ದು, ನನ್ನ ಕಥೆ. ಅವಳು, ತುಂಬು ತೆನೆ ಹೊತ್ತ ಗಿಡವೊಂದು ಬಾಗಿ ಭುವಿ ನೋಡುವಂತೆ, ಮೊಗದ ತುಂಬ ನಗು ಹೊತ್ತಾಕೆ ನೆಲ ದಿಟ್ಟಿಸಲು ಶುರು ಮಾಡಿದಳಲ್ಲ; ಅದಕ್ಕೆ ಕಾರಣ ನಾಚಿಕೆಯೇ? ಊಹ್ಞೂಂ ತಿಳಿಯದು.

ತುಸು ವಿರಾಮವನ್ನೂ ಪಡೆಯದೆ ಅದಾವುದೋ ಕಾಣದ ಮಾಯೆಗಾಗಿ ಹುಡುಕಾಟ ನಡೆಸುವ ಅವಳ ಕಂಗಳ ಹುಡುಗಾಟಿಕೆಗೆ ಮರುಳಾದ ನನಗೆ ಜೀವನ ಪರ್ಯಂತ ಮರುಳನಾಗಿಯೇ ಇರುವ ಆಸೆ ಹುಟ್ಟುವುದಕ್ಕೆ ಕಾರಣ ಇದೇ ಎಂದು ಹೇಗೆ ಹೇಳಲಿ? ಅವಳ ಕಂಗಳ ಹೊಳಪಿಗೆ ಸೂರ್ಯನೂ ನಾಚುತ್ತಾನೆ, ಅವನ ನಾಚಿಕೆಯ ಕಂಡು ಬೆಳ್ಳಿ ಮೋಡಗಳೂ ನಸುನಗುತ್ತವೆ.

ಮೊಗದಲ್ಲಿ ನಗುವಿದ್ದರೂ ಒಳಗೊಳಗೇ ಕಂಪಿಸುವ ಮೋಡಗಳಿಗೆ ಸೂರ್ಯನನ್ನೇ ಸೋಲಿಸಿದ ಹುಡುಗಿಯ ಮನದ ಬಿಳುಪಿನೆಡೆಗೆ ಕೊಂಚ ಅಸೂಯೆ ಇರಬಹುದೆಂದು ನನಗೆ ಅನ್ನಿಸುವುದಾದರೂ ಏಕೆ? ನಗು, ಕಂಪನ, ಅಸೂಯೆಗಳ ಘರ್ಷಣೆಗೆ ಸಿಕ್ಕು ಜನ್ಮ ತಳೆದ ಸಹಸ್ರ ಸಹಸ್ರ ಹನಿಗಳು ಭುವಿಗೆ ಮುತ್ತಿಕ್ಕುವ ಭರದಲ್ಲಿ, ಮೌನಿಯಾಗಿ ನಿಂತಿದ್ದ ನನ್ನನ್ನು ಸೋಕಿದಾಗಲೇ ವಾಸ್ತವದ ಅರಿವಾಗಿದ್ದು.

ತುಸು ವಿರಾಮವನ್ನೂ ಪಡೆಯದ ಅವಳ ಕಂಗಳೆರಡು ನನ್ನೆಡೆಗೆ  ಹುಡುಕಾಟದ – ಹುಡುಗಾಟದ ನೋಟ ಬೀರುತ್ತಿವೆಯೆಂಬ ಅರಿವಾದದ್ದು. ಅಷ್ಟೇ… ಅಲ್ಲಿಗೆ ಮತ್ತೂಂದು ಪ್ರಯತ್ನ ನಿರಾಯಾಸವಾಗಿ ಸೋತು ಹೋಗಿತ್ತು, ಯಥಾಪ್ರಕಾರ ಈ ಬಾರಿಯೂ ವಿಫ‌ಲನಾದೆ. ಹಾಗಂತ ಸೋಲೊಪ್ಪಿಕೊಳ್ಳಲಾರೆ. ಮತ್ತಷ್ಟು ಸಿದ್ಧತೆ ಮಾಡಿಕೊಂಡೇ ಮೂರನೇ ಬಾರಿಯೂ ಹಾಜರಾಗುತ್ತೇನೆ- ಪ್ರೇಮ ಪರೀಕ್ಷೆಗೆ! ಅಕಸ್ಮಾತ್‌ ಆಗಲೂ ಫೇಲಾದರೆ, ನಾಲ್ಕು, ಐದು ಹಾಗೂ ಆರನೇ ಪ್ರಯತ್ನಗಳೂ ಜಾರಿಯಲ್ಲಿರುತ್ತವೆ!  

ಇಂತಿ
ಮರುಳನಾದವ

* ಶಶಾಂಕ್‌ ಜಿ.ಎಂ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.