ನಿನ್ನ ನೆನಪುಗಳೊಂದಿಗೇ ಬದುಕಿದ್ದೀನಿ, ನೀನು ಹೇಗಿದ್ದೀ?


Team Udayavani, Mar 6, 2018, 3:54 PM IST

hrudaya-raga.jpg

ನನಗೆ ಚೆನ್ನಾಗಿ ಗೊತ್ತು. ಕೊನೆ ಉಸಿರು ಇರುವವರೆಗೂ ನೀನು ನನ್ನನ್ನು  ಮರೆಯಲ್ಲ ಅಂತ. ಆವತ್ತು ನೀನು ಮುಂಗೋಪದಲ್ಲಿ ಮಾಡಿಕೊಂಡ ಎಡವಟ್ಟು, ಮೌನ, ಹಠ ನನ್ನನ್ನ ಕಳೆದುಕೊಳ್ಳುವ ಹಾಗೆ ಮಾಡಿತು.

ಧನು, ನನಗಿನ್ನೂ ನೆನಪಿದೆ. ಆವತ್ತು ನಿನ್ನ ತಂದೆಯ ಜೊತೆ ಹಾಸ್ಟೆಲ್‌ಗೆ ಬಂದಿದ್ದೆ. ಸೂಪರ್‌ವೈಸರ್‌ ಆಗಿದ್ದ ನನ್ನನ್ನು ನೋಡಿ ನಕ್ಕ ಆ ನಿನ್ನ ನಗು ಎಂದಿಗೂ ಮರೆಯಾಗದು. ಮೊದಲ ಕ್ಷಣವೇ ನಿನ್ನನ್ನು ಪ್ರೀತಿಸಬೇಕು ಅನಿಸಿದ್ದು ಸುಳ್ಳಲ್ಲ. ಆದರೆ ಅದನ್ನ ಹೇಗೆ ಹೇಳ್ಳೋದು?

ಆಗ ತಾನೇ ಡಿಗ್ರಿ ಮುಗಿಸಿ ಸಣ್ಣ ಕೆಲಸದ ಜೊತೆಯಲ್ಲೇ ಓದುವಾಸೆಯಿಂದ ನಾನು ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಹಾಸ್ಟೆಲ್‌ನಲ್ಲಿ ಸೂಪರ್‌ ವೈಸರ್‌ ಆಗಿದ್ದೆ. ನೀನು ಅಲ್ಲಿಗೆ ಸ್ಟೂಡೆಂಟ್‌ ಆಗಿ ಬಂದವಳು, ನನ್ನ ಹೃದಯ ಸೇರಿದೆ. ಕೆಲಸದ ಜೊತೆಗೆ ಬಾಯ್ಸ ಹಾಸ್ಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದ ನಾನು, ಇನ್ಸ್‌ಪೆಕ್ಷನ್‌ ನೆಪದಲ್ಲಿ ಎರಡು ದಿನಗಳಿಗೊಮ್ಮೆ ಅಲ್ಲಿಗೆ ಬರಿದ್ದೆ. ನಿನ್ನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ.

ಅದು ಹೇಗೆ ಸರಳಾಗೆ ಸಂದೇಹ ಬಂತೋ ಗೊತ್ತಿಲ್ಲ; ಆಕೆ ನೇರವಾಗಿ ನನಗೆ ಕೇಳೇ ಬಿಟು, “ಅಣ್ಣಾ , ನೀನು ಧನುಗೆ ಲೈನ್‌ ಹೊಡೀತಿದೀಯಾ ತಾನೇ?’ ಅಂತ. ಮೊದಲು ನಿರಾಕರಿಸಿದ ನಾನು ಆಮೇಲೆ ಆಕೆಯಿಂದ ಸಹಾಯ ಆಗಬಹುದೇನೋ ಅಂದುಕೊಂಡು ಆಕೆ ಹತ್ತಿರ ಸತ್ಯ ಹೇಳಿಬಿಟ್ಟೆ. 

ಅವಳು ನಿನಗೆ ಹೇಳಿದಾಳ್ಳೋ ಇಲ್ಲವೋ ಗೊತ್ತಿಲ್ಲ. ಕೊನೆಗೊಂದು ದಿನ ನಾನೇ ನಿನಗೆ ಕ್ಲಾಸ್‌ ಹತ್ತಿರ ಇರೋ ಬಸ್‌ ಸ್ಟಾಪ್‌ನಲ್ಲಿ ಪ್ರಪೋಸ್‌ ಮಾಡೆª. ಆಗ ನಿನ್ನ ನಿರುತ್ತರದ ಪ್ರತಿಕ್ರಿಯೆ ಕಂಡು ಗಾಬರಿಯಾಗಿತ್ತು. ನಿರಾಸೆಯಿಂದ ಗೂಡು ಸೇರಿದೆ. ವಾರವಾದರೂ ಲೇಡೀಸ್‌ ಹಾಸ್ಟೆಲ್‌ ಕಡೆ ತಲೆ ಹಾಕ್ಲಿಲ್ಲ.

ಯಾಕೆಂದರೆ ಚಳಿಜ್ವರದಿಂದ ಮಲಗಿಬಿಟ್ಟಿದ್ದೆ. ಆನಂತರ ನೀನೇ ಹಾಸ್ಟೆಲ್‌ ಹತ್ತಿರ ಬಂದು “ಬಸು ಇದಾರಾ?’ ಅಂದೆಯಲ್ಲ? ನಿನ್ನ ಧ್ವನಿ ಕೇಳಿದಾಕ್ಷಣ ಎಚ್ಚರವಾಯ್ತು. ನನ್ನನ್ನು ಕಂಡವಳೇ- “ಇವತ್ತು ಭಾನುವಾರ. ಕ್ಲಾಸ್‌ಗೆ ರಜೆ. ಫ್ರೆಂಡ್ಸ್‌ ಜೊತೆ ಸಿನಿಮಾಗೆ ಹೊರಟಿದೀವಿ.

ಫ್ರೀ ಇದ್ರೆ ಬನ್ನಿ’ ಅಂತ ನೀನು ಕೊಟ್ಟ ಆಹ್ವಾನ ನನ್ನ ಪ್ರೀತಿಗೆ ಗ್ರೀನ್‌ ಸಿಗ್ನಲ್‌ ಅಂದುಕೊಂಡು ಸಿನಿಮಾಗೆ ಬಂದೆ. ನನ್ನ ಪಕ್ಕದಲ್ಲೇ ಕುತ್ಕೊಂಡು, ನನ್ನ ತೋಳನ್ನು ಆಸರೆಯಾಗಿ ಮಾಡಿಕೊಂಡು “ಐ ಟೂ ಲವ್‌ ಯು’ ಎಂದು ಪಿಸುಗುಟ್ಟಿದ ಕ್ಷಣವನ್ನ ನಾನು ಮರೆಯಲು ಸಾಧ್ಯವೇ?

ಲೆಕ್ಚರರ್‌ ನಿನ್ನ ಮೇಲೆ ಕಣ್ಣು ಹಾಕಿದ್ದನ್ನ ನನಗೆ ಹೇಳಿದಾಗ ನಾನವನಿಗೆ ಆವಾಜ್‌ ಹಾಕಿದ್ದು, ಸವದತ್ತಿ ಗುಡ್ಡದ ಮೇಲೆ ನಮ್ಮಿಬ್ಬರ ಮದುವೆಗಾಗಿ ಹರಕೆ ಕಟ್ಟಿದ್ದು, ಎಂಥ ಜಗಳ ಬಂದರೂ ನಾನು ಸಾಯುವಾಗ ನಿನ್ನ ತೊಡೆ ಮೇಲೇ ಕಣ್ಣು ಮುಚ್ಚಬೇಕು ಎಂದಾಗ ನಿನ್ನ ಕೆನ್ನೆಗಳು ಕಣ್ಣೀರ ಜಲಪಾತವಾಗಿದ್ದು,

ನಮ್ಮಿಬ್ಬರ ಪ್ರೀತಿಯ ವಿಷಯ ಸಂಸ್ಥೆಯ ಮಾಲೀಕರಿಗೆ ಗೊತ್ತಾಗಿ ಇಬ್ಬರನ್ನೂ ಹೊರಗೆ ಹಾಕಿದಾಗ ಪತ್ರಿಕೆಯೊಂದರ ಪ್ರಮೋಟರ್‌ ಆಗಿ ನಸುಕಿನ ಜಾವ 4 ರಿಂದ 9ರವರೆಗೆ ಕೆಲಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಂಡದ್ದು ಎಲ್ಲವೂ ಹಚ್ಚಹಸಿರು.

ಸಾಕಷ್ಟು ಪರೀಕ್ಷೆ ಬರೆದರೂ ಒಂದರಲ್ಲೂ ಪಾಸಾಗದೇ ಓದಿಗೆ ಗುಡ್‌ ಬೈ ಹೇಳಿ, ನಿನ್ನ ಓದಿಗೆ ತೊಂದರೆಯಾಗದಿರಲಿ ಎಂದಷ್ಟೇ ಅಂತರ ಕಾಪಾಡಿಕೊಂಡೆ. ಆದರೆ ನನ್ನ ಪ್ರೀತಿಗೆ ಯಾವತ್ತೂ ಅಂತರವಿರಲಿಲ್ಲ. ಅದೊಂದು ದಿನ ನಮ್ಮ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದಾರೆ ಎಂದು ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ನೀನು ನನ್ನೊಂದಿಗೆ ಮಾತೂ ಆಡದೇ, ಕೈಗೂ ಸಿಗದೇ ಮಾಯವಾದೆ.

ನಿಜ ಹೇಳಬೇಕೆಂದರೆ ಮದುವೆಗೆ ನಾನು ಒಪ್ಪಿರಲೇ ಇಲ್ಲ. ನಿಮ್ಮ ಮನೆ ಬಳಿ ಬಂದು ವಿಚಾರಿಸಿದರೂ ನಿನ್ನ ಸುಳಿವು ಸಿಗಲೇ ಇಲ್ಲ. ಇವತ್ತಿಗೂ ನಿನ್ನೊಂದಿಗೆ ಹಂಚಿಕೊಂಡ ಪ್ರೀತಿಯನ್ನು ಮರೆಯಲು ಅಸಾಧ್ಯ. ಯಾಕೆಂದರೆ ಅದು ನಿಜವಾದ ಪ್ರೀತಿ. ನನಗೆ ಚೆನ್ನಾಗಿ ಗೊತ್ತು.

ಕೊನೆ ಉಸಿರು ಇರುವವರೆಗೂ ನೀನು ನನ್ನನ್ನು  ಮರೆಯಲ್ಲ ಅಂತ. ಆವತ್ತು ನೀನು ಮುಂಗೋಪದಲ್ಲಿ ಮಾಡಿಕೊಂಡ ಎಡವಟ್ಟು, ಮೌನ, ಹಠ ನನ್ನನ್ನ ಕಳೆದುಕೊಳ್ಳುವ ಹಾಗೆ ಮಾಡಿತು. ಇರಲಿ. ನಿನ್ನ ನೆನಪುಗಳೊಂದಿಗೇ ನಾನು ಉಸಿರಾಡ್ತಾ ಇದ್ದೀನಿ. ನೀನು ಹೇಗಿದ್ದೀ? ಕುಶಲವಷ್ಟೇ?

* ಬಸವರಾಜ ಕರುಗಲ್‌

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.