ಕಾಳ್ಗಿಚ್ಚಿಗೆ ಆಹುತಿಯಾಗುತ್ತಿದೆ ಪ್ರವಾಸಿಗರ ಸ್ವರ್ಗ


Team Udayavani, Mar 7, 2018, 1:06 PM IST

7-March-13.jpg

ಬೆಳ್ತಂಗಡಿ : ಕಳೆದ ಕೆಲವು ದಿನಗಳಿಂದ ಪ್ರವಾಸಿಗರ ಸ್ವರ್ಗ, ಹಿಮ್ಮುರಿ ತಿರುವುಗಳ ಕಡಿದಾದ ಘಾಟಿ ಚಾರ್ಮಾಡಿಯಲ್ಲಿ ಅಗ್ನಿಯ ರುದ್ರನರ್ತನವಾಗುತ್ತಿದೆ.

ಕಾಳ್ಗಿಚ್ಚಿನಿಂದಾಗಿ ನೂರಾರು ಹೆಕ್ಟೇರ್‌ ಕಾಡು ಬೆಂಕಿಗೆ ಆಹುತಿಯಾಗುತ್ತಿದ್ದು, ಸಾವಿರಾರು ವನ್ಯಜೀವಿಗಳು ತಮ್ಮ ನೆಲೆ ಕಳೆದುಕೊಂಡಿವೆ. ಅನೇಕ ಸರೀ ಸೃಪಗಳು ಬೆಂಕಿಯ ಬೇಗೆಗೆ ಬೆಂದು ಹೋಗಿವೆ. ಚಾರ್ಮಾಡಿ ಘಾಟಿಯ ಅರಣ್ಯ ಸಂಪತ್ತು ಬೆಂಕಿಯಲ್ಲಿ ಕರಕಲಾಗಿ ತನ್ನ ಸ್ವರೂಪವನ್ನು ಕಳೆದು ಕೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ಮಲಯ ಮಾರುತ ನಿರೀಕ್ಷಣಾ ಮಂದಿರ ಸಮೀಪದಿಂದ ಹರಡಿದ ಬೆಂಕಿಯು ಘಾಟಿ ಪ್ರದೇಶದ ಅರಣ್ಯವನ್ನು ಆವರಿಸಿಕೊಂಡಿದೆ.

ನಿರ್ಲಕ್ಷ್ಯದಿಂದ ಅನಾಹುತ
ಶಿರಾಡಿ ಘಾಟಿಯ ಕಾಮಗಾರಿಯ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆ ಮೂಲಕ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಕೆಲವು ಪ್ರವಾಸಿಗರು ಘಾಟಿಯ ಸೊಬಗನ್ನು ಸವಿಯಲು ಬಂದರೆ, ಲಾರಿ ಇನ್ನಿತರ ಖಾಸಗಿ ವಾಹನ ಸವಾರರು ತಮ್ಮ ದಣಿವನ್ನು ನಿವಾರಿಸಲು ಈ ಭಾಗದಲ್ಲಿ ತಂಗುವುದು ಸರ್ವೇಸಾಮಾನ್ಯ. ಕೆಲವು ಬಾರಿ ಇಂತಹ ಮಂದಿಯೇ ಚಳಿ ಕಾಯಿಸಲು ಇಲ್ಲಿ ಬೆಂಕಿ ಹಾಕಿ ಹಾಗೆಯೇ ಬಿಟ್ಟು ಅದು ಗಾಳಿಗೆ ಕಾಡಿನಾದ್ಯಂತ ಹಬ್ಬಿದ ಘಟನೆಗಳಿವೆ.

ಅರಣ್ಯ ಇಲಾಖೆ ಮೌನ
ಇಂತಹ ದುರ್ಘ‌ಟನೆಗಳು ಕಣ್ಣೆದುರು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕೈಗೊಂಡ ಕ್ರಮ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ್ದು ಚಾರಣಿಗರ, ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ. ಘಾಟಿ ಯಲ್ಲಿ ಮುಂದುವರಿದ ಕಾಳ್ಗಿಚ್ಚಿನಿಂದ ಬೆಳೆಬಾಳುವ ಅರಣ್ಯ ಸಂಪತ್ತು, ಔಷಧೀಯ ಗುಣಗಳ ಸಸ್ಯಗಳು, ಅಪರೂಪದ ವನ್ಯಜೀವಿಗಳು ಬೆಂಕಿಯ ಬೇಗೆಯಲ್ಲಿ ಸಿಲುಕಿ ನಾಶವಾಗುವ ಭೀತಿ ಎದುರಾಗಿದೆ. ಕೆಲವು ಪ್ರಾಣಿ – ಪಕ್ಷಿಗಳು ತಮ್ಮ ವಾಸ ತಾಣವನ್ನು ಕಳೆದುಕೊಂಡು ನೀರು, ಆಹಾರವಿಲ್ಲದೆ ನಾಡಿಗೆ ಇಳಿಯುವ ಸಾಧ್ಯತೆಯೂ ಇದೆ. ಇಂತಹ ಘಟನೆಗಳು ಮರುಕಳಿಸದಂತೆ ಇಲಾಖೆ ತತ್‌ಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.

ಮಾಫಿಯಾಗಳಿಂದ ಪಶ್ಚಿಮ ಘಟ್ಟ ನಿಯಂತ್ರಣ
ವರ್ಷದಿಂದ ವರ್ಷಕ್ಕೆ ಕಾಳ್ಗಿಚ್ಚು ಹೆಚ್ಚಾಗುತ್ತಿದ್ದು, ಇದು ಅರಣ್ಯ ಅತಿಕ್ರಮಣ ಮತ್ತು ಪಶ್ಚಿಮ ಘಟ್ಟವನ್ನು ನಿಯಂತ್ರಣ ಮಾಡುತ್ತಿರುವ ಮಾಫಿಯಾಗಳ ಕೊಡುಗೆ. ಅರಣ್ಯ ಇಲಾಖೆ ಮತ್ತು ಸರಕಾರ ಈ ಬಗ್ಗೆ ವಿಶೇಷವಾದ ಗಮನ ಕೊಡದೇ ಮತ್ತಷ್ಟು ಅರಣ್ಯ ವಿನಾಶಕ ಯೋಜನೆಗಳಿಗೆ ಅಗೋಚರವಾಗಿ ಪರವಾನಿಗೆ ನೀಡುತ್ತಿದೆ. ಈ ರೀತಿ ಮುಂದುವರಿದರೆ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯ, ನದಿ ಮೂಲ, ಮಳೆ ಕಾಡು ನಾಶವಾಗುತ್ತಾ ಮುಂದೆ ಆಗಲಿರುವ ಪ್ರಾಕೃತಿಕ ದುರಂತಕ್ಕೆ ನಾವೇ ಕಾರಣರಾಗುತ್ತೇವೆ ಎಂದು ಚಾರಣಿಗ ದಿನೇಶ್‌ ಹೊಳ್ಳ ತಿಳಿಸಿದ್ದಾರೆ.

ಬೆಳ್ತಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ಸಂಭವಿಸಿಲ್ಲ. ಅದು ಮೂಡಿಗೆರೆ ವ್ಯಾಪ್ತಿಯದ್ದು.
-ಕಿರಣ್‌, ವಲಯ ಅರಣ್ಯಾಧಿಕಾರಿ
ವನ್ಯಜೀವಿ ವಿಭಾಗ, ಬೆಳ್ತಂಗಡಿ

ಗುರು ಮುಂಡಾಜೆ

ಟಾಪ್ ನ್ಯೂಸ್

Macau Open 2024: ಮಕಾವು ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಆಯುಷ್‌ ಮುನ್ನಡೆ

Macau Open 2024: ಮಕಾವು ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಆಯುಷ್‌ ಮುನ್ನಡೆ

Theft Case: 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Theft Case: 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

England Test Series: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಪಾಕಿಸ್ಥಾನ ತಂಡ ಪ್ರಕಟ

England Test Series: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಪಾಕಿಸ್ಥಾನ ತಂಡ ಪ್ರಕಟ

Kinnigoli: ಮರಳು ಸಾಗಾಟದ ಟಿಪ್ಪರ್‌ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

Kinnigoli: ಮರಳು ಸಾಗಾಟದ ಟಿಪ್ಪರ್‌ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

Chess Olympiad: ಚೆಸ್‌ ಸಾಧಕರಿಗೆ ಮೋದಿ ಸಮ್ಮಾನ

Chess Olympiad: ಚೆಸ್‌ ಸಾಧಕರಿಗೆ ಮೋದಿ ಸಮ್ಮಾನ

Sullia: ಬಸ್‌ನಲ್ಲಿ ಅನುಚಿತ ವರ್ತನೆ: ಬಂಧನ

Sullia: ಬಸ್‌ನಲ್ಲಿ ಅನುಚಿತ ವರ್ತನೆ: ಬಂಧನ

Maski: ಮೂತ್ರ ವಿಸರ್ಜನೆಗೆ ಶಾಲಾ‌ ಹಳೇ ಕೊಠಡಿಯೇ ಗತಿ-ಕ್ಯಾರೆ ಎನ್ನದ ಅಧಿಕಾರಿಗಳು

Maski: ಮೂತ್ರ ವಿಸರ್ಜನೆಗೆ ಶಾಲಾ‌ ಹಳೇ ಕೊಠಡಿಯೇ ಗತಿ-ಕ್ಯಾರೆ ಎನ್ನದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kinnigoli: ಮರಳು ಸಾಗಾಟದ ಟಿಪ್ಪರ್‌ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

Kinnigoli: ಮರಳು ಸಾಗಾಟದ ಟಿಪ್ಪರ್‌ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

Sullia: ಬಸ್‌ನಲ್ಲಿ ಅನುಚಿತ ವರ್ತನೆ: ಬಂಧನ

Sullia: ಬಸ್‌ನಲ್ಲಿ ಅನುಚಿತ ವರ್ತನೆ: ಬಂಧನ

kalla

Belthangady: 10 ಲಕ್ಷ ರೂ. ಮೌಲ್ಯದ ನಗ-ನಗದು ಕಳವು

3

Puttur: ಟ್ರೀ ಪಾರ್ಕ್‌ ನಿರ್ಲಕ್ಷ್ಯಕ್ಕೆ ದುಡ್ಡಿನ ಕೊರತೆ ನೆಪ

2(2)

Vitla: ಟ್ರಾಫಿಕ್‌ ಜಾಮ್‌ ವಿಟ್ಲ ಪೇಟೆಯಲ್ಲಿ ನಿತ್ಯ ಸಂಕಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Macau Open 2024: ಮಕಾವು ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಆಯುಷ್‌ ಮುನ್ನಡೆ

Macau Open 2024: ಮಕಾವು ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಆಯುಷ್‌ ಮುನ್ನಡೆ

Theft Case: 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Theft Case: 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

England Test Series: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಪಾಕಿಸ್ಥಾನ ತಂಡ ಪ್ರಕಟ

England Test Series: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಪಾಕಿಸ್ಥಾನ ತಂಡ ಪ್ರಕಟ

Mangaluru: ಅನುಮಾನಾಸ್ಪದ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ತಂಡ

Mangaluru: ಅನುಮಾನಾಸ್ಪದ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ತಂಡ

Kinnigoli: ಮರಳು ಸಾಗಾಟದ ಟಿಪ್ಪರ್‌ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

Kinnigoli: ಮರಳು ಸಾಗಾಟದ ಟಿಪ್ಪರ್‌ ಪಲ್ಟಿ; ಸಿಕ್ಕಿ ಬಿದ್ದ ಆರೋಪಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.