ಮದುವೆ ಸಮಾರಂಭದಲ್ಲಿ ಮೆಣಸ್‌ಕಾಯಿ, ರಸಾಯನ, ಜ್ಯೂಸ್‌ಗೂ ಬರ 


Team Udayavani, Mar 15, 2018, 12:35 PM IST

15-March-7.jpg

ಬಜಪೆ : ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲೇ ಮಾರುಕಟ್ಟೆಯಲ್ಲಿ ಕಾಣಸಿಗುವ ಆಂಧ್ರದಿಂದ ಬರುವ ಮಾವು ಈ ಬಾರಿ ಒಂದು ತಿಂಗಳು ತಡವಾಗಿ ಆಗಮಿಸಿದೆ. ಜಿಲ್ಲೆಯ ಮಾವಿನ ಮಿಡಿಗಳು, ಮಾವು ಕೂಡ ಈಗ ಲಭ್ಯ ಇವೆಯಾದರೂ ಅಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದರಿಂದಾಗಿ ಮದುವೆ ಸಮಾರಂಭಗಳಲ್ಲಿ ಮಾವಿನ ಮೆಣಸಿನಕಾಯಿ, ರಸಾಯನ ಹಾಗೂ ಜ್ಯೂಸ್‌ಗೂ ಬರ ತಟ್ಟಿದೆ.

ಮಾರುಕಟ್ಟೆಗೆ ಈಗಾಗಲೇ ಆಂಧ್ರ, ಕೇರಳದ ಮಾವು ಲಗ್ಗೆ ಇಟ್ಟಿವೆಯಾದರೂ ದರ ಮಾತ್ರ ಅಧಿಕವಾಗಿದೆ. ಕಳೆದ ಬಾರಿ ಜನವರಿಯಲ್ಲಿ ಕೇರಳದ ಬಾದಾಮಿ, ನೀಲಂ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿತ್ತು. ತಮಿಳುನಾಡಿನಿಂದ ತೋತಾಪುರಿ, ಆಂಧ್ರದ ತೋತಾಪುರಿ, ಬಾದಾಮಿ, ಬೆಂಗ್ಯಾನ್‌ ಪಲ್ಲಿ ಮಾವಿನ ಹಣ್ಣು ಮಾರುಕಟ್ಟೆಯಲ್ಲಿತ್ತು. ಆಂಧ್ರದಿಂದ ಬಂದ ಮಾವಿನ ಹಣ್ಣಿನ ದರ ಕೆ.ಜಿ.ಗೆ 50ರಿಂದ 80 ರೂ.ಇತ್ತು. ಸಕತ್‌ ಮಾವು ಅಲ್ಲಿಲ್ಲಿ ಮಾರಾಟವಾಗುತ್ತಿತ್ತು.

ಈ ಬಾರಿ ಆಂಧ್ರದ ಬಾದಾಮಿ ಮಾವು ಕೆ.ಜಿ.ಗೆ 180ರೂ., ಕೇರಳದ ಕಣ್ಣಪೂರ್‌ ಕೆ.ಜಿ.ಗೆ120 ರೂ., ಜಿಲ್ಲೆಯ ಮುಂಡಪ್ಪ ಕೆ.ಜಿ.ಗೆ 200 ರೂ., ಮಿಡಿ ತೋತಾಪುರಿ ಕೆ.ಜಿ.ಗೆ 100 ರೂ., ಇತರ ಮಿಡಿ ಕೆ.ಜಿ.ಗೆ 80 ರೂ.ಇದೆ. ಇನ್ನು ಮಾವಿನ ಮಿಡಿಗಳ ದರ ಕೆ.ಜಿ.ಗೆ 80ರಿಂದ 100 ರೂ.ಗಳು. ಕಳೆದ ಬಾರಿ ಇದು ಕೆ.ಜಿ.ಗೆ 125ರಿಂದ 150 ರೂ. ಇತ್ತು.

ಈ ಬಾರಿ ಇದರ ದರ ಕಡಿಮೆ. ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಆಂಧ್ರ, ತಮಿಳುನಾಡು, ಕೇರಳದ ಮಾವು ವರ್ಷವಿಡೀ ಸಿಗುವ ಕಾರಣ ಸ್ಥಳೀಯ ಮಾವುಗಳ ಪ್ರಮಾಣವೂ ಕಡಿಮೆಯಾಗುತ್ತಿದೆ.

ಹವಾಮಾನ ವೈಪರೀತ್ಯ ಕಾರಣ
ಈ ಬಾರಿ ಮಳೆ ಹಾಗೂ ಹವಾಮಾನ ಬದಲಾವಣೆಯಿಂದ ಮಾವು ತಡವಾಗಿ ಆಗಮಿಸಿದೆ. ದರವೂ ಅಧಿಕ. ಹೆಚ್ಚಿನ ಶ್ರೀಮಂತರು ಮಾತ್ರ ಈಗ ಕೊಂಡೊಯ್ಯುತ್ತಾರೆ. ಕ್ಯಾಟರಿಂಗ್‌ನವರು ಈಗ ಯಾರೂ ಬಂದಿಲ್ಲ. ಇದರ ಜ್ಯೂಸನ್ನು ಗ್ಲಾಸೊಂದಕ್ಕೆ 60ರಿಂದ 80 ರೂ.ತನಕ ಮಾರಬೇಕಾಗುತ್ತದೆ.
– ಫಾರೂಕ್‌, ವ್ಯಾಪಾರಿ

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.