![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 15, 2018, 4:48 PM IST
ಚೆನ್ನೈ : ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ಪ್ರಧಾನ ಸಮಾಜ ಕಲ್ಯಾಣ ಯೋಜನೆಯಡಿ ತಮಿಳುನಾಡು ಸರಕಾರ 2018-19ರಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ 12,000 ಹಾಲು ಕೊಡುವ ದನಗಳನ್ನು, ಆರು ಲಕ್ಷ ಕುರಿ ಅಥವಾ ಆಡುಗಳನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಿದೆ.
ಕೃಷಿಕರಿಗೆ ಉಚಿತವಾಗಿ ಹಾಲು ಕೊಡುವ ದನ, ಕುರಿ, ಆಡುಗಳನ್ನು ಒದಗಿಸುವುದು ಎಐಎಡಿಎಂಕ ಪಕ್ಷದ ಪರಮೋಚ್ಚನಾಯಕಿ, ಮಾಜಿ ಮುಖ್ಯಮಂತ್ರಿ, ದಿ| ಜೆ ಜಯಲಲಿತಾ ಅವರ ಅಚ್ಚುಮೆಚ್ಚಿನ ಯೋಜನೆಯಾಗಿದ್ದು ಅದನ್ನಾಕೆ 2011ರಲ್ಲಿ ಆರಂಭಿಸಿದ್ದರು.
ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರು ತಮ್ಮ ಬಜೆಟ್ ಭಾಷಣದಲ್ಲಿ 2018-19ರಲ್ಲಿ 248.58 ಕೋಟಿ ರೂ. ವೆಚ್ಚದಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ ಒಟ್ಟು 12,000 ಹಾಲು ಕೊಡುವ ದನಗಳನ್ನು ಮತ್ತು ಆರು ಲಕ್ಷ ಕುರಿಗಳನ್ನು ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.
2011ರಿಂದ ಈ ತನಕ 75,398 ಮಹಿಳೆಯರಿಗೆ ತಲಾ ಒಂದು ದನವನ್ನು, 8.71 ಲಕ್ಷ ಬಡ ಕುಟುಂಬಗಳಿಗೆ 34.85 ಲಕ್ಷ ಕುರಿ/ಆಡುಗಳನ್ನು ತಮಿಳು ನಾಡು ಸರಕಾರ ಪೂರೈಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.