ಅಪಘಾತ : ರಾಮ್ದೇವ್ ಆಪ್ತ ಸಲಹೆಗಾರ ಗಂಭೀರ
Team Udayavani, Mar 21, 2018, 10:22 AM IST
ಸೊಲ್ಲಾಪುರ: ಪುಣೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಸ್ವಿಪ್ಟ್ ಕಾರಿನ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಯೋಗಗುರು ರಾಮ್ದೇವ್ ಬಾಬಾ ಅವರ ಆಪ್ತ ಸಲಹೆಗಾರ ರಾಜೇಶ್ ಪಾಲ್ (45) ಗಂಭೀರ ಗಾಯಗೊಂಡಿರುವ ಘಟನೆ ಟೆಂಬುರ್ಣಿ ಹತ್ತಿರ ಮಂಗಳವಾರ ಸಂಜೆ ನಡೆದಿದೆ.
ರಾಜೇಶ್ ಪಾಲ್ ಅವರು ಯೋಗಗುರು ರಾಮ್ದೇವ್ ಬಾಬಾ ಅವರ ಆಪ್ತ ಸಲಹೆಗಾರರಾಗಿದ್ದು, ಅಕ್ಕಲ್ಕೋಟೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಯೋಗ ಶಿಬಿರದ ಆಯೋಜನೆಗಾಗಿ ಬಂದಿದ್ದರು. ಅವರು ಪುಣೆಯಿಂದ ವಿಮಾನ ಮೂಲಕ ಹರಿದ್ವಾರಕ್ಕೆ ಹೋಗುವವರಿದ್ದರು.
ಅಕ್ಕಲ್ಕೋಟೆಯ ಶಿಬಿರ ಮುಗಿಸಿಕೊಂಡು ಸೊಲ್ಲಾಪುರದಿಂದ ಪುಣೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಟೆಂಬುರ್ಣಿಯ ಬೈಪಾಸ್ನಲ್ಲಿ ಕಾರು ಹಾಗೂ ಲಾರಿಯ ಮಧ್ಯೆ ಅಪಘಾತ ಸಂಭವಿಸಿದ್ದು, ರಾಜೇಶ್ ಪಾಲ್ ಹಾಗೂ ಚಾಲಕ ಸಿದ್ದರಾಮ ಮಾಳಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.