ಅನಧಿಕೃತ ಮೀನು ಕಾರ್ಖಾನೆ : ಕುಡಿಯುವ ನೀರಿಗೆ ತತ್ವಾರ


Team Udayavani, Mar 28, 2018, 4:46 PM IST

28-March-16.jpg

ಹೊಸಂಗಡಿ: ಮಂಜೇಶ್ವರ ಕಣ್ವತೀರ್ಥ ಪರಿಸರದಲ್ಲಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ನಿರ್ಮಾಣಗೊಂಡಿರುವ ಯುನೈಟೆಡ್‌ ಸೀ ಫುಡ್‌ ಮೀನು ಸಂಸ್ಕರಣ ಕಾರ್ಖಾನೆಯಿಂದ ಹೊರ ಬರುವ ರಕ್ತ ಮಿಶ್ರಿತ ತ್ಯಾಜ್ಯವನ್ನು ಅದೇ ಪರಿಸರದಲ್ಲಿ ಬಿಡುತ್ತಿರುವ ಪರಿಣಾಮವಾಗಿ ಸಮೀಪದ ಆರು ಮನೆಗಳ ಬಾವಿಯ ನೀರು ಮಲಿನಗೊಂಡಿದೆ. ಮಾತ್ರವಲ್ಲದೆ ದುರ್ಗಂಧ ಬೀರುತ್ತಿದೆ ಮತ್ತು ಸ್ಥಳೀಯ ಮಕ್ಕಳಲ್ಲಿ ತುರಿಕೆ, ಚರ್ಮರೋಗದಂತ ವಿಚಿತ್ರ ರೋಗ ಲಕ್ಷಣಗಳು ಕಂಡು ಬಂದಿವೆ ಎಂದು ಕಣ್ವತೀರ್ಥ ನಾಗರಿಕರ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಈ ವಿಚಾರವಾಗಿ ಈಗಾಗಲೇ ಕಾರ್ಖಾನೆಗೆ ನಾಗರಿಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ, ಪಂಚಾಯತ್‌ ಕಾರ್ಯದರ್ಶಿ, ಆರೋಗ್ಯ ಇಲಾಖೆ ಹಾಗು ಪರಿಸರ ಇಲಾಖೆಗಳಿಗೆ ದೂರು ನೀಡಿದ್ದಾರೆ. ಆದರೆ ಈ ವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ವಿಚಾರವಾಗಿ ನೇತೃತ್ವ ವಹಿಸಿದ್ದ ಕಣ್ವತೀರ್ಥ ವಾರ್ಡ್‌ನ ಸದಸ್ಯರ ಮೇಲೆ ಈ ಹಿಂದೆ ಪಂಚಾಯತ್‌ ಆವರಣದಲ್ಲೇ ಹಲ್ಲೆ ನಡೆದಿತ್ತು. 

ಈ ಬಗ್ಗೆ ಸಭೆ ಸೇರಿದ ಹಿತರಕ್ಷಣಾ ಸಮಿತಿ ನೂತನ ಸಮಿತಿಗೆ ಚಾಲನೆ ನೀಡಿದ್ದು ಅಧ್ಯಕ್ಷರಾಗಿ ವಿಜಯ್‌ ಕುಮಾರ್‌,
ಉಪಾಧ್ಯಕ್ಷರಾಗಿ ಮಧು ಸೂದನ್‌ ಆಚಾರ್ಯ, ವಿನಯ ಭಾಸ್ಕರ್‌, ವೀಣಾ ದಯಾನಂದ, ಕಾರ್ಯದರ್ಶಿಯಾಗಿ
ಪ್ರವೀಣ್‌ ಕೆ., ಪ್ರವಿತ್‌ ಮಂತೆರೋ, ಕೋಶಾಧಿಕಾರಿಯಾಗಿ ಸೋಮಪ್ಪ ದೇವಾಡಿಗ ಹಾಗೂ 39 ಜನರ ಕಾರ್ಯ
ಕಾರಿಣಿ ಸಮಿತಿಯನ್ನು ರಚಿಸಲಾಯಿತು. ಮುಖಂಡರಾದ ತಾರಾನಾಥ, ರಾಜೇಶ್‌, ಭಗವಾನ್‌ದಾಸ್‌, ಬಾಲಕೃಷ್ಣ,
ಬಾಬು ಮಾಸ್ಟರ್‌ ಮೊದಲಾದವರು ಉಪಸ್ಥಿತರಿದ್ದರು.ಪಂಚಾಯತ್‌ ಆಡಳಿತಕ್ಕೆ ಮತ್ತೆ ದೂರು ನೀಡಿ ಸ್ಪಂದನೆ ಇಲ್ಲದಿದ್ದಲ್ಲಿ ಪಂಚಾಯತ್‌ ಕಚೇರಿಗೆ ಮುತ್ತಿಗೆ ನಡೆಸಲು ತೀರ್ಮಾನಿಸಲಾಯಿತು.

ಗೂಂಡಾಗಳಿಂದ ಬೆದರಿಕೆ
ಪಂಚಾಯತ್‌ ಆಡಳಿತ ಸಮಿತಿ ಅನಧಿಕೃತವಾಗಿ ಮೀನು ಕಾರ್ಖಾನೆಗೆ ಕಾನೂನು ಮೀರಿ ಬಹಿರಂಗ ಬೆಂಬಲ ನೀಡುತ್ತಿದ್ದು, ಕಾರ್ಖಾನೆ ಮಾಲಕರು ಗೂಂಡಾಗಳನ್ನು ಬಳಸಿ ಪ್ರತಿಭಟನಕಾರರಿಗೆ ಬೆದರಿಕೆ ನೀಡುತ್ತಿದ್ದಾರೆ. ಕೈಗಾರಿಕಾ ಅನುಮತಿ ಪತ್ರ ಇಲ್ಲ, ಆರೋಗ್ಯ ಇಲಾಖೆ, ವಿದ್ಯುತ್‌ ಇಲಾಖೆಯ ಅನುಮತಿ ಪತ್ರ ಇಲ್ಲದ ಕಾರ್ಖಾನೆ
ಪಂಚಾಯತ್‌ ವ್ಯಾಪ್ತಿಯಲ್ಲೂ ಇರುವಾಗ ಪಂಚಾಯತ್‌ ಆಡಳಿತ ಹಾಗು ರಾಜ್ಯ ಸರಕಾರ ಜನತೆಯನ್ನು ವಂಚಿಸುತ್ತಿದೆ ಎಂದು ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಟಾಪ್ ನ್ಯೂಸ್

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

“Koragajja” Movie producer gifted a car to the director

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.