![RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ](https://www.udayavani.com/wp-content/uploads/2024/12/RSS-4-415x235.jpg)
ಡೇವಿಸ್ ಕಪ್ ತಂಡದೊಂದಿಗೆ ತೆರಳದಿರಲು ದಿವಿಜ್ ನಿರ್ಧಾರ
Team Udayavani, Apr 2, 2018, 7:10 AM IST
![Davis-Cup,Divij-Sharan.jpg](https://www.udayavani.com/wp-content/uploads/2018/04/2/Davis-Cup,Divij-Sharan.jpg)
ಹೊಸದಿಲ್ಲಿ: ಚೀನ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದ ಎಡಗೈ ಆಟಗಾರ ದಿವಿಜ್ ಶರಣ್ ಪಂದ್ಯಾವಳಿಗಾಗಿ ತಂಡದೊಂದಿಗೆ ತೆರಳದಿರಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರದಿಂದ ಮುಂಬರುವ ದಿನಗಳಲ್ಲಿ ಆಟಗಾರರಿಗೆ ನೀತಿಸಂಹಿತೆ ಪ್ರಕಟವಾಗುವ ಸಾಧ್ಯತೆಗೆ ದಾರಿ ಮಾಡಿದೆ.
ಚೀನದ ತಿಯಾಂಜಿನ್ನಲ್ಲಿ ಎ. 6ರಿಂದ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿಗಾಗಿ ಮೀಸಲು ಆಟಗಾರನಾಗಿ ತೆರಳಿ, ಅಗತ್ಯ ಬಿದ್ದರೆ ಕಣಕ್ಕಿಳಿಯಲು 32ರ ಹರೆಯದ ಶರಣ್ ಒಪ್ಪಿದ್ದರು. ಆದರೆ ಅವರ ನಿರ್ಧಾರವೀಗ ಬದಲಾಗಿದೆ; ಇದು ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ನ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತದ ಎರಡನೇ ಅಗ್ರ ಶ್ರೇಯಾಂಕಿತ ಡಬಲ್ಸ್ ಆಟಗಾರನಾಗಿ ಗುರುತಿಸಿಕೊಂಡಿರುವ ದಿವಿಜ್ ಶರಣ್ ಪುರುಷರ ಡಬಲ್ಸ್ನಲ್ಲಿ 44ನೇ ರ್ಯಾಂಕ್ನಲ್ಲಿದ್ದು, ಆಯ್ಕೆ ಸಮಿತಿಯು ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಅವರನ್ನು ಡೇವಿಸ್ ಕಪ್ ಡಬಲ್ಸ್ ವಿಭಾಗಕ್ಕೆ ಆರಿಸಿತ್ತು.
ಪೇಸ್ ಆಯ್ಕೆಗೆ ಆಕ್ರೋಶ?
ಲಿಯಾಂಡರ್ ಪೇಸ್ ದಿವಿಜ್ ಶರಣ್ಗಿಂತ ಒಂದೇ ರ್ಯಾಂಕ್ ಹಿಂದಿದ್ದಾರೆ (45). ಆದರೆ ಅವರಿಗಿರುವ ಅಪಾರ ಅನುಭವದ ನೆಲೆಯಲ್ಲಿ ಮತ್ತು ಭಾರತ ಪ್ರಬಲ ಸ್ಪರ್ಧೆಯೊಡ್ಡುವ ಉದ್ದೇಶದಿಂದ ಆಯ್ಕೆ ಸಮಿತಿಯು ಪೇಸ್ ಅವರನ್ನು ಆರಿಸಿತ್ತು. ಇದು ಶರಣ್ ಸಿಡುಕಿಗೆ ಕಾರಣವಾಗಿದೆ ಎನ್ನಲಾಗಿದೆ.ಶರಣ್ ಅವರ ಈ ನಿರ್ಧಾರ ಆಡುವ ತಂಡದಲ್ಲಿ ಸ್ಥಾನ ದೊರಕದ ಹೊರತು ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದನ್ನು ಸೂಚಿಸಿದೆ. ಇದರಿಂದ ಡಬಲ್ಸ್ನಲ್ಲಿ ಪಾಲ್ಗೊಳ್ಳುವ ಇಬ್ಬರು ಆಟಗಾರರಲ್ಲಿ ಯಾರಾದರೂ ಒಬ್ಬರು ಗಾಯಗೊಂಡರೂ ತಂಡಕ್ಕೆ ಸಮಸ್ಯೆಯಾಗಲಿದೆ.
ಸಿಂಗಲ್ಸ್ನಲ್ಲಿ ಅಗ್ರಸ್ಥಾನಿಗರಾಗಿರುವ ಯೂಕಿ ಭಾಂಬ್ರಿ ಹೊಟ್ಟೆನೋವಿನ ಕಾರಣ ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಶರಣ್ ನಿರ್ಧಾರ ದೇಶಿ ತಂಡವನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ.
ಟಾಪ್ ನ್ಯೂಸ್
![RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ](https://www.udayavani.com/wp-content/uploads/2024/12/RSS-4-415x235.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ](https://www.udayavani.com/wp-content/uploads/2024/12/in-virat-1-150x87.jpg)
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
![Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ](https://www.udayavani.com/wp-content/uploads/2024/12/mayanka-150x87.jpg)
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
![M Chinnaswamy Stadium](https://www.udayavani.com/wp-content/uploads/2024/12/chi-1-150x87.jpg)
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
![ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ](https://www.udayavani.com/wp-content/uploads/2024/12/sindhu-1-150x87.jpg)
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
![INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!](https://www.udayavani.com/wp-content/uploads/2024/12/ind-3-150x87.jpg)
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ](https://www.udayavani.com/wp-content/uploads/2024/12/RSS-4-150x85.jpg)
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
![Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು](https://www.udayavani.com/wp-content/uploads/2024/12/Telangana-150x99.jpg)
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
![Cong-ind-Map](https://www.udayavani.com/wp-content/uploads/2024/12/Cong-ind-Map-150x90.jpg)
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
![Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್](https://www.udayavani.com/wp-content/uploads/2024/12/15-10-150x90.jpg)
Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
![Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ](https://www.udayavani.com/wp-content/uploads/2024/12/mp-1-150x84.jpg)
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.