ಐಲ: ‘ಲಕ್ಷದೀಪೋತ್ಸವ ಸಾಹಿತ್ಯ ಶಿಖೋಜ್ವಲನ’ ಕವಿಗೋಷ್ಠಿ


Team Udayavani, Apr 4, 2018, 9:00 AM IST

Kavigoshti-3-4.jpg

ಉಪ್ಪಳ: ಅಗ್ನಿ ಫ್ರೆಂಡ್ಸ್‌ ಉಪ್ಪಳ ಇದರ ದಶಮಾನೋತ್ಸವದ ನೆನಪಿಗಾಗಿ ಐಲ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಲಕ್ಷದೀಪೋತ್ಸವ ನಡೆಸಲಾಯಿತು. ಈ ಸುಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರವನ್ನೂ ಬೆಳಗಿಸುವ ದೃಷ್ಟಿಯಿಂದ ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ಉದಯೋನ್ಮುಖ ಕವಿಗಳಿಂದ ‘ಲಕ್ಷದೀಪೋತ್ಸವ ಸಾಹಿತ್ಯ ಶಿಖೋಜ್ವಲನ’ ಹೆಸರಲ್ಲಿ ಮೂವತ್ತು ಕವಿಗಳಿಂದ ಕವಿಗೋಷ್ಠಿ ನಡೆಸಲಾಯಿತು. ದೀಪ ಹಾಗೂ ದೀಪೋತ್ಸವದ ಆಶಯವನ್ನೇ ಪ್ರತಿನಿಧಿಸುವ ಸ್ವರಚಿತ ಕವನಗಳನ್ನು ಕವಿಗಳು ವಾಚಿಸಿದರು.

ತುಳು – ಕನ್ನಡ ಕವಿ ಸಾಹಿತಿ, ಪ್ರಸಂಗಕರ್ತ ಯೋಗೀಶ ರಾವ್‌ ಚಿಗುರುಪಾದೆ  ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ಎಲೆಕ್ಟ್ರಾನಿಕ್‌ ಮಾಧ್ಯಮ ಯುಗದಲ್ಲೂ  ಸೃಜನ ಸಾಹಿತ್ಯಕ್ಕೆ ಕವಿಗಳಿಗೆ ಸಾಹಿತಿಗಳಿಗೆ ಅದರದ್ದೇ ಆದ ಗೌರವವಿದೆ. ಯಾವುದೆ ಕವಿ ಸೃಷ್ಟಿಯು ಆತನ ಬದುಕಿನ ಅನುಭವದಿಂದ ಮೂಡಿರುತ್ತದೆ. ಆತನಿಗಾದ ನೋವು ನಲಿವು ಸುಖ ದುಃಖಗಳು ಮಾನ ಅಪಮಾನಗಳು ಅದರಲ್ಲಿ ಪ್ರತಿಫಲಿಸುತ್ತವೆ. ಇನ್ನೊಬ್ಬನ ರಚನೆಯಲ್ಲಿ ನಮ್ಮ ದೃಷ್ಟಿಕೋನವನ್ನು ಬೆರೆಸಿ ಬೆಲೆಕಟ್ಟಬಾರದು. 

ಪ್ರತಿಯೊಬ್ಬನಲ್ಲೂ ಅವನದ್ದೇ ಆದ ಪ್ರತಿಭೆ ಇದ್ದೇ ಇದೆ. ಅದನ್ನು ನಾವು ಗುರುತಿಸಿ ಗೌರವಿಸಬೇಕು. ಪೂರ್ವಗ್ರಹ ರಹಿತವಾಗಿ ಸಾಹಿತ್ಯವನ್ನು ಓದಬೇಕು. ನಿರಂತರ ಅಧ್ಯಯನ ಶ್ರಮ ತೊಡಗಿಸಿಕೊಳ್ಳುವಿಕೆಯಿಂದ ಉತ್ತಮ ರಚನೆ ಮೂಡಿಬರುತ್ತದೆ. ನಾಡಿನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ದಶಮಾನೋತ್ಸವ ಬೆಳ್ಳಿಹಬ್ಬ ಸ್ವರ್ಣಮಹೋತ್ಸವಗಳನ್ನು ಆಚರಿಸುತ್ತವೆ ಆದರೆ ಕವಿಗೋಷ್ಠಿಯನ್ನು ನಡೆಸಿ ದಶಮಾನೋತ್ಸವ ಆಚರಿಸಿದ್ದು ತೀರಾ ಅಪರೂಪದ ಘಟನೆ ಅದಕ್ಕಾಗಿ ಅಗ್ನಿ ಫ್ರೆಂಡ್ಸ್‌ ಸಂಘಟನೆಯನ್ನು ಅಭಿನಂದಿಸುತ್ತೇನೆ ಎಂದರು.

ಸಂಘಟಕ, ಕವಿ, ನಾಟಕಕಾರ ಜಯ ಮಣಿಯಂಪಾರೆ ಸಂಘಟಿಸಿ ನಿರ್ವಹಿಸಿದ ಕವಿಗೋಷ್ಠಿಯನ್ನು ನಿವೃತ್ತ ಶಿಕ್ಷಕಿ, ಮಹಿಳಾ ಯಕ್ಷಗಾನ ಅರ್ಥಧಾರಿ, ಬರಹಗಾರ್ತಿ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ದೀಪಬೆಳಗಿಸಿ ಉದ್ಘಾಟಿಸಿದರು, ಅಗ್ನಿ ಫ್ರೆಂಡ್ಸ್‌ನ ಅಧ್ಯಕ್ಷ ಲೋಹಿತ್‌ ಕುಮಾರ್‌ ಉಪ್ಪಳ, ಧಾರ್ಮಿಕ ಸೇವಾ ಮುಂದಾಳು ಡಾ| ಶ್ರೀಧರ ಭಟ್‌ ಉಪ್ಪಳ ಉಪಸ್ಥಿತರಿದ್ದರು.

ಕವಿಗಳಾದ ದೇವರಾಜ್‌ ಕೆ.ಎಸ್‌., ಸುಲೋಚನಾ ಪಚ್ಚಿನಡ್ಕ, ಜಾನ್ವಿ ಡಿ’ ರಾಜ್‌ ಉಪ್ಪಳ, ಶಶಿಕಲಾ ಕುಂಬ್ಳೆ, ಶ್ರೀಗಿರಿ ಅನಂತಪುರ, ಮಲ್ಲಿಕಾ ಜೆ. ರೈ, ವಿದ್ಯಾವಾಣಿ ಮಠದ ಮೂಲೆ, ಗಣೇಶ್‌ ಪೈ ಬದಿಯಡ್ಕ, ಜ್ಯೋತ್ಸ್ನಾ ಎಂ. ಭಟ್‌ ಕಡಂದೇಲು, ಚೇತನಾ ಕುಂಬಳೆ, ವನಿತಾ ನೀರೊಳಿಕೆ, ಮೌನೇಶ್‌ ಆಚಾರ್ಯ ಕಡಂಬಾರು,  ಚಿತ್ರಕಲಾ ಕುಂಬಳೆ, ಶ್ಯಾಮಲಾ ರವಿರಾಜ್‌ ಕುಂಬಳೆ, ಮನೋಜ್‌ ಅಟ್ಟೆಗೋಳಿ, ಕುಶಾಲಾಕ್ಷಿ ಕಣ್ವತೀರ್ಥ, ಶಶಿಕಲಾ ಕುಂಬಳೆ, ಆಶಾಲತಾ ಪೆರಡಾನ ಮೂಲೆ, ರೂಪಶ್ರೀ ಮಾಣಿಲ, ದೀಕ್ಷಿತಾ ಕೋಳ್ಯೂರು, ಶೇಖರ ಶೆಟ್ಟಿ ಬಾಯಾರು, ಚೇತನಾ ಕುಂಬ್ಳೆ, ಜಯಲಕ್ಷ್ಮೀ  ಕೂಡ್ಲು, ರೂಪಶ್ರೀ ಮಾಣಿಲ, ದೀಕ್ಷಿತ ಕೋಳ್ಯೂರು, ಚೇತನಾ ಕುಂಬ್ಳೆ, ಶ್ಯಾಮಲಾ ರವಿರಾಜ್‌ ಕುಂಬಳೆ, ಜಯಲಕ್ಷ್ಮೀ ಕೂಡ್ಲು, ಶರ್ಮಿಳಾ ಬಜಕೂಡ್ಲು, ಚಿತ್ರಕಲಾ ಕುಂಬಳೆ ಮುಂತಾದ ಕವಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

crime

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

Untitled-1

Kasaragod ಅಪರಾಧ ಸುದ್ದಿಗಳು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.