ಎಳನೀರು ಮಾರುವ ಗ್ರಾಮ ಪಂಚಾಯಿತಿ ಸದಸ್ಯ


Team Udayavani, Apr 10, 2018, 12:21 PM IST

ealaneeru.jpg

ಬೆಂಗಳೂರು: ಇವರ ಹೆಸರು ಕೆಂಚನಾಯ್ಕ, ವೃತ್ತಿ ಎಳೆನೀರು ಮಾರಾಟ, ಪ್ರವೃತ್ತಿ ರಾಜಕಾರಣ. ರಾಜರಾಜೇಶ್ವರಿ ನಗರ ಪ್ರವೇಶ ದ್ವಾರ ಒಳಗೆ ಹೋಗಿ ಪೆಟ್ರೋಲ್‌ ಬಂಕ್‌ ದಾಟಿದರೆ ಎಡಭಾಗದಲ್ಲಿ ರಸ್ತೆ ಬದಿ ಎಳನೀರು ಗುಡ್ಡೆಹಾಕಿಕೊಂಡು ಮಾಸಲು ಶರ್ಟ್‌ ಕುರುಚಲು ಗಡ್ಡದಾರಿ ಸಿಗುತ್ತಾರೆ. ಅವರೇ ಕೆಂಚನಾಯ್ಕ. 

48 ವರ್ಷದ ಕೆಂಚನಾಯ್ಕ, ಮೂವತ್ತು ವರ್ಷಗಳಿಂದ ರಾಜರಾಜೇಶ್ವರಿ ನಗರ ಮುಖ್ಯರಸ್ತೆಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದಾರೆ. ಇವರು ಅಗರ ಗ್ರಾಮ ಪಂಚಾಯಿತಿಯ ಸದಸ್ಯರೂ ಹೌದು. ಬೆಳಗ್ಗೆ 6 ರಿಂದ 10 ಜನಸೇವೆ. ಆ ನಂತರ ಹೊಟ್ಟೆಪಾಡಿಗಾಗಿ ಎಳನೀರು ಮಾರಾಟ ಇವರ ಕಾಯಕ. ಮಧ್ಯಾಹ್ನ ಪತಿಗೆ ಊಟದ ಬುತ್ತಿ ತರುವ ಪತ್ನಿಯೂ  ಇವರಿಗೆ ಎಳನೀರು ಮಾರಾಟದಲ್ಲಿ ಸಾಥ್‌ ನೀಡುತ್ತಾರೆ.

ವಾರಕ್ಕೊಮ್ಮೆ ತಾವೇ ಖುದ್ದಾಗಿ ಮಾಗಡಿ, ರಾಮನಗರ, ಚನ್ನಪಟ್ಟಣ, ಮದ್ದೂರು ಕಡೆ ತೋಟಗಳಿಗೆ ಹೋಗಿ ಎಳನೀರು ಗುತ್ತಿಗೆ ಆಧಾರದಲ್ಲಿ ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಮಂಡ್ಯ ತಾಲೂಕು ಬಸರಾಳು ಹೋಬಳಿಯ ಮೂಲದವರಾದ ಕೆಂಚನಾಯ್ಕ ಅವರಿಗೆ 48 ವರ್ಷ. 18 ವರ್ಷ ಯುವಕನಿದ್ದಾಗ ಕೆಂಚನಹಳ್ಳಿಗೆ ಬಂದು ಸೆಟ್ಲ ಆದವರು. ಇದೀಗ  ಇದೇ ನಮ್ಮನೆ ಎಂದು ಪೂರಾ ಬೆಂಗಳೂರಿಗರಾಗಿದ್ದಾರೆ.

ಎರಡೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರ ವಿರುದ್ಧ ಸ್ಪರ್ಧಿಸಿ ಒಂದು ರೂಪಾಯಿ ಸಹ ಖರ್ಚು ಮಾಡದೆ ತಮಗಿದ್ದ ಜನಸಂಪರ್ಕದಲ್ಲಿ ಗೆದ್ದು ಬಂದ ಇವರಿಗೆ ತಾನು ಗ್ರಾಮ ಪಂಚಾಯಿತಿ ಸದಸ್ಯ ಎಂಬ ಗತ್ತು ಗೈರತ್ತು ಇಲ್ಲ. ನನ್ನ ಪಾಲಿಗೆ ಗ್ರಾಮ ಪಂಚಾಯಿತಿ ಸದಸ್ಯತ್ವ ದೊಡ್ಡ ಕೋಡು ಅಲ್ಲ. ಎಳನೀರು ವ್ಯಾಪಾರದ ಜತೆ ಜನಸೇವೆ ಅಷ್ಟೇ.

ನನ್ನ ವ್ಯಾಪ್ತಿಗೆ ಬರುವ ಆನೇಪಾಳ್ಯ, ದೊಡ್ಡಪಾಳ್ಯ, ರಾಮನಪಾಳ್ಯ, ಸ್ವಾಮೀಜಿ ನಗರ, ಕುವೆಂಪುನಗರದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ಹೊಸ ಪ್ರದೇಶಗಳಲ್ಲಿ ಮೂರು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ಜನರ ಒತ್ತಾಯದ ಮೇರೆಗೆ ಎರಡು ದೇವಸ್ಥಾನ ಕಟ್ಟಿಸಿದ್ದೇನೆ. 600 ವಿದ್ಯುತ್‌ ಕಂಬಗಳಿಗೆ ಸಿಎಫ್ಎಲ್‌ ಬಲ್ಪ್ ಹಾಕಿಸಿದ್ದೇನೆ.

ರಸ್ತೆ, ಚರಂಡಿ ವ್ಯವಸ್ಥೆ ಇದೆ. ಶಾಲೆ, ಆಸ್ಪತ್ರೆಯೂ ಇದೆ. ಹೀಗಾಗಿ, ಜನತೆ ಇನ್ನೇನು ನನ್ನಿಂದ ಕೇಳುವುದಿಲ್ಲ. ನಾನು ಬೆಳಗ್ಗೆ ಎದ್ದು ಜನರ ಸಮಸ್ಯೆ ಇದ್ದರೆ ಸ್ಪಂದಿಸಿ ನಂತರ ಎಳನೀರು ವ್ಯಾಪಾರಕ್ಕೆ ಬರುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಪಿಯುಸಿ ಓದುತ್ತಿದ್ದು ಅವರನ್ನು ಪೊಲೀಸ್‌ ಸೇವೆಗೆ ಸೇರಿಸಬೇಕು ಎಂಬ ಆಸೆಯಿದೆ ಎಂದು ಹೇಳುತ್ತಾರೆ.

ವಿಧಾನಸಭೆ ಚುನಾವಣೆ ಬಗ್ಗೆ ಇವರಿಗೆ ದೊಡ್ಡ ಮಟ್ಟದ ಆಸಕ್ತಿಯಿಲ್ಲ. ನಮ್ಮ ವ್ಯಾಪ್ತಿ ನೋಡಿಕೊಂಡರೆ ಸಾಕು. ಆದರೆ, ಜನಸೇವಕರು ಆಯ್ಕೆಯಾಗಬೇಕು. ನಮ್ಮದು ಯಶವಂತಪುರ ಕ್ಷೇತ್ರ, ಅತಿ ದೊಡ್ಡ ಕ್ಷೇತ್ರ, ಜಾಸ್ತಿ ಸಮಸ್ಯೆ. ಜನರ ಕಷ್ಟಕ್ಕೆ ಆಗುವವರು ಆಯ್ಕೆಯಾಗಬೇಕು ಎಂದು ತಿಳಿಸುತ್ತಾರೆ.

ಮತದಾನದ ಹಕ್ಕು ದೊರೆತು ಮೊದಲ ಬಾರಿ ಮತದಾನ ಮಾಡಿದಾಗಿನಿಂದ ಇದುವರೆಗೂ ಮೂವತ್ತು ವರ್ಷಗಳಿಂದ ಒಂದು ಡಜನ್‌ ಮುಖ್ಯಮಂತ್ರಿಗಳು ಹಾಗೂ ಸಾಕಷ್ಟು ರಾಜಕಾರಣಿಗಳನ್ನು ಕಂಡಿರುವ ಕೆಂಚನಾಯ್ಕ, “ಗ್ರಾಮ ಪಂಚಾಯಿತಿಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುತ್ತದೆ. ರಾಜ್ಯ ಸರ್ಕಾರ ನಡೆಸೋ ವಿಚಾರದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ’ ಎಂದು ಪ್ರತಿಪಾದಿಸುತ್ತಾರೆ.
 
* ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Bengaluru: ಅಪಾರ್ಟ್‌ಮೆಂಟ್‌ನಿಂದ ಜಾರಿ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು!

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

4

Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್‌ ವೆಲ್ಡಿಂಗ್‌ ದೋಷ ಕಾರಣ; ಸಮಿತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

10

Panaji: ಮಲ್ಪೆಯ 2 ಮೀನುಗಾರಿಕಾ ಬೋಟ್‌ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.