ಬಂತು ಮಳೆ, ನದಿಮೂಲಗಳಲ್ಲೀಗ ನೀರ ಸೆಲೆ!


Team Udayavani, Apr 11, 2018, 11:09 AM IST

11-April-6.jpg

ಸುಬ್ರಹ್ಮಣ್ಯ: ಬೇಸಗೆ ಆರಂಭದಲ್ಲೇ ಇದ್ದ ಬರಗಾಲದ ಸುಳಿವು ಈಗ ಮರೆಗೆ ಸರಿದಿದೆ. ಇದಕ್ಕೆ ಕಾರಣ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆ. ಬಳಿಕ ನದಿ, ಹಳ್ಳ, ಕೊಳ್ಳ, ಕೆರೆ ಬಾವಿಗಳಲ್ಲಿ ನೀರಿನ ಮಟ್ಟ ತುಸು ಏರಿಕೆ ಕಂಡಿದ್ದು, ಇದು ಕೃಷಿಕರಿಗೆ ಆಶಾದಾಯಕವಾಗಿದೆ. ಈ ನಡುವೆ, ಹಿಂಗಾರ ಅರಳುವ ಸಮಯದಲ್ಲಿ ಮಳೆ ಬರುತ್ತಿರುವುದು ಹಾನಿಕರ ಎಂಬ ಆತಂಕವೂ ಕೃಷಿಕರನ್ನು ಕಾಡುತ್ತಿದೆ.

ಬೇಸಗೆ ಕಾಲಿಟ್ಟ ಬೆನ್ನಲ್ಲೇ ಬಿಸಿಲಿನ ತಾಪ ತೀವ್ರವಾಗಿತ್ತು. ಕಳೆದ ಬಾರಿಯಂತೆ ಈ ಸಲವೂ ನೀರಿಗೆ ತತ್ವಾರ ಉಂಟಾಯಿತೇ ಎಂದು ರೈತರು ಆತಂಕಗೊಂಡಿದ್ದರು. ಅಲ್ಲಲ್ಲಿ ನೀರಿನ ಅಭಾವದ ಸೂಚನೆ ಕಂಡುಬರುವ ಹೊತ್ತಲ್ಲೇ ಎಪ್ರಿಲ್‌ ತಿಂಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಸದ್ಯದ ಮಟ್ಟಿಗೆ ಇದು ಜಲಮೂಲಗಳಿಗೆ ಸ್ವಲ್ಪ ಶಕ್ತಿ ತುಂಬಿದೆ. ನೀರಿನ ಆಸರೆ ಏರಿಕೆ ಕಂಡಿದೆ. ಇನ್ನು 15 ದಿನ ಕೃಷಿ ಹಾಗೂ ಕುಡಿಯುವ ನೀರಿಗೆ ತಾಪತ್ರಯ ಬಾರದು ಎಂದು ಜನರು ಹೇಳುತ್ತಿದ್ದಾರೆ.

ಹೂವು ಬಿಡುವ ಹೊತ್ತಲ್ಲಿ ಮೋಡ ಆಗುವುದು, ಮಳೆ ಸುರಿಯುವುದು ಅಪಾಯಕಾರಿ ಎಂದು ಕೆಲವು ರೈತರು ಅನುಭವದ ಆಧಾರದಲ್ಲಿ ಹೇಳುತ್ತಿದ್ದಾರೆ. ಅಡಿಕೆ ಹಿಂಗಾರ ಅರಳುವ ಸಮಯವಾಗಿದ್ದು, ಮಳೆ ನೀರು ಹಿಂಗಾರದ ಒಳಗೆ ನಿಂತರೆ ಮುಂದಿನ ಸಲದ ಫ‌ಸಲಿಗೆ ಹಾನಿಯಾಗುತ್ತದೆ. ಸತತ ಮಳೆ ಸುರಿದರೆ ಮಾತ್ರ ಅನುಕೂಲ ಎಂದು ಕೃಷಿ ತಜ್ಞರ ಅಭಿಪ್ರಾಯ.

ತಾಲೂಕಿನ ಪ್ರಮುಖ ನದಿಗಳಾದ ಸುಳ್ಯದ ಪಯಸ್ವಿನಿ ಮತ್ತು ಸುಬ್ರಹ್ಮಣ್ಯದ ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ತುಸು ಹೆಚ್ಚಿದೆ. ಇಳೆ ತಂಪಾಗಿದೆ. ಕೃಷಿ ಚಟುವಟಿಕೆಗೆ, ಕುಡಿಯಲು ನೀರಿಲ್ಲ ಎಂಬ ಆತಂಕವೂ ದೂರವಾಗಿದೆ.

ಎಪ್ರಿಲ್‌ ತಿಂಗಳ ಬಹುತೇಕ ದಿನಗಳಲ್ಲಿ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಎಪ್ರಿಲ್‌ 3ರಿಂದ 8ರ ತನಕ ತಾಲೂಕಿನ ಒಂದಲ್ಲ ಒಂದು ಕಡೆ ಮಳೆಯಾಗುತ್ತಲೆ ಇತ್ತು. ಎ. 8ರಂದು ದೊಡ್ಡ ಗಾತ್ರದ ಆಲಿಕಲ್ಲುಗಳ ಸಹಿತ ಮಳೆಯಾಗಿತ್ತು. ಕೊಲ್ಲಮೊಗ್ರುವಿನಲ್ಲಿ 52 ಮಿ.ಮೀ. ಮಳೆ ಸುರಿದಿತ್ತು. ತಾಲೂಕಿನಲ್ಲಿ ಸರಾಸರಿ 35 ಮಿ.ಮೀ. ಮಳೆಯಾಗಿತ್ತು. ಮಳೆಯ ಬಳಿಕ ಈಗಲೂ ಸೆಕೆಯ ಅನುಭವವೇ ಇದೆ. ಮಧ್ಯಾಹ್ನದ ತನಕ ಉರಿ ಬಿಸಿಲು. ಸಂಜೆಯಾಗುತ್ತಲೇ ಮೋಡ ಕವಿಯುತ್ತದೆ. ಸೋಮವಾರ, ಮಂಗಳವಾರ ಮಳೆಯಾಗದೆ ಮತ್ತೆ ನೆತ್ತಿ ಸುಡುವಂಥ ಬಿಸಿಲಿದೆ.

ಸುಳ್ಯ ಜನರ ಕುಡಿಯುವ ನೀರಿನ ಮೂಲವಾದ ಪಯಸ್ವಿನಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ, ನಗರದ ಜನರು ಹಾಗೂ ಕೃಷಿಕರು ಕೊಂಚ ನಿರಾಳರಾಗಿದ್ದಾರೆ. ಪುಣ್ಯಸ್ನಾನಕ್ಕೂ ನೀರಿನ ಕೊರತೆ ಎದುರಾಗುವ ಆತಂಕದಲ್ಲಿದ್ದ ಕುಮಾರಧಾರೆಯಲ್ಲೂ ನೀರಿನ ಮಟ್ಟ ಸಮೃದ್ಧವಾಗಿದೆ. ಬಾವಿ, ಕೆರೆ, ತೋಡುಗಳು ಬತ್ತುವ ದಿನಗಳೂ ಕೊಂಚ ಮುಂದಕ್ಕೆ ಹೋದಂತಾಗಿದೆ. ಕೃಷಿ ಹಾಗೂ ಕುಡಿಯುವ ನೀರು ಮಾತ್ರವಲ್ಲದೆ ಸಸ್ಯರಾಶಿಗಳು, ಪ್ರಾಣಿ ಸಂಕುಲಗಳೂ ನೆಮ್ಮದಿಯಿಂದ ಉಸಿರಾಡುತ್ತಿವೆ.

ಹಾನಿಕಾರಕ
ಈಗ ಸುರಿದ ಮಳೆಯಿಂದ ಕೃಷಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಿಂಗಾರ ಅರಳುವ ಸಮುಯದಲ್ಲಿ ಮಳೆ ಬಂದಾಗ ಹಿಂಗಾರದ ಒಳಗೆ ನೀರಿನ ಹನಿ ನಿಂತು ಬೆಳೆಗೆ ಹಾನಿ ಉಂಟಾಗುತ್ತದೆ. ಫ‌ಸಲು ನಷ್ಟದ ಭೀತಿ ಇದೆ.
ಕೃಷ್ಣಪ್ರಸಾದ ಮಡ್ತಿಲ,
  ಕ್ಯಾಂಪ್ಕೋ ನಿರ್ದೇಶಕರು 

ಸದ್ಯ ಸಮಸ್ಯೆಯಿಲ್ಲ
ಮೂರ್‍ನಾಲ್ಕು ದಿನ ನಿರಂತರವಾಗಿ ಮಳೆ ಸುರಿದಿದ್ದರಿಂದ ಇಳೆ ತಂಪಾಗಿದೆ. ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹದಿನೈದು ದಿನದ ಮಟ್ಟಿಗೆ ಕೃಷಿಗೆ, ಕುಡಿಯಲು ನೀರಿನ ಅಭಾವ ಕಂಡುಬಾರದು.
ಜಯಪ್ರಕಾಶ ಕೂಜುಗೋಡು,
  ಸಾವಯವ ಕೃಷಿಕ

 ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.