ಜಿಲ್ಲೆಗೆ ದೊರೆತ ಮಹತ್ವದ ಸ್ಥಾನಗಳು


Team Udayavani, Apr 11, 2018, 11:31 AM IST

11-April-7.jpg

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ-ದೇಶದ ರಾಜಕೀಯ ರಂಗಕ್ಕೆ ಮಹಾ ಸಾಧಕರನ್ನು ನೀಡಿದೆ. (ರಾಜತಾಂತ್ರಿಕವಾಗಿ, ಉದ್ಯಮಿಗಳಾಗಿ, ರಾಯಭಾರಿಗಳಾಗಿ, ಆಡಳಿತಗಾರರಾಗಿ ಅನೇಕರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಿದ್ದಾರೆ- ಮಿಂಚುತ್ತಿದ್ದಾರೆ.)ಕರ್ನಾಟಕ (ಮೊದಲು ಮೈಸೂರು – ಅದಕ್ಕೂ ಮೊದಲು ಸ್ವಲ್ಪ ಭಾಗ ಮದ್ರಾಸ್‌ ಪ್ರಸಿಡೆನ್ಸಿ) ವಿಧಾನಸಭೆಗೆ ಆಯ್ಕೆಯಾಗಿ ಇಲ್ಲಿನ ರಾಜಕೀಯ ನಾಯಕರು- ಮುತ್ಸದ್ದಿಗಳಲ್ಲಿ ಅನೇಕ ಮಂದಿ ಮಹತ್ವದ ಹುದ್ದೆಗಳನ್ನು ಪಡೆದಿದ್ದಾರೆ. ವಿಧಾನಸಭೆಗೆ ಆಯ್ಕೆಯಾಗಿಯೂ ಅವರ ಪಕ್ಷ ಅಧಿಕಾರಕ್ಕೆ ಬರದೆ ಸಚಿವ ಸ್ಥಾನ ಕಳೆದುಕೊಂಡವರೂ ಇದ್ದಾರೆ. ದೊರೆತ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮಿಂಚಿದವರೂ ಸಾಕಷ್ಟು ಮಂದಿ ಇದ್ದಾರೆ. 

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಂಟ್ವಾಳ ವೈಕುಂಠ ಬಾಳಿಗಾ (1895-1968) ಕಾನೂನು ಸಚಿವರಾಗಿದ್ದರು; ಬಳಿಕ ಮೈಸೂರು ವಿಧಾನಸಭೆಯ ಸ್ಪೀಕರ್‌ (1962-68) ಸ್ಪೀಕರ್‌ ಆಗಿದ್ದರು. ಎಂ. ವೀರಪ್ಪ ಮೊಯಿಲಿ ಮತ್ತು ಡಿ. ವಿ. ಸದಾನಂದ ಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದವರು. ಅದಕ್ಕೂ ಮೊದಲು ಉಭಯ ರಾಜ್ಯಗಳಲ್ಲಿ ಎ.ಬಿ. ಶೆಟ್ಟಿ ಸಚಿವರಾಗಿದ್ದರು. ಆಗಿನ ಪಾಣೆಮಂಗಳೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಡಾ| ಕೆ. ನಾಗಪ್ಪ ಆಳ್ವ 1957-62ರಲ್ಲಿ ಆರೋಗ್ಯ ಸಚಿವರಾಗಿದ್ದರು. ಕಾರ್ಕಳದಿಂದ ಕೆ.ಕೆ. ಹೆಗ್ಡೆ ಅವರು ಸಚಿವರಾಗಿದ್ದರು.

ದೇವರಾಜ ಅರಸು ಸಂಪುಟದಲ್ಲಿ ಪುತ್ತೂರಿನಿಂದ ಎ. ಶಂಕರ ಆಳ್ವ ಸಚಿವರಾಗಿದ್ದರೆ 1967ರಲ್ಲಿ ವಿಠಲದಾಸ ಶೆಟ್ಟಿ ಸಹಕಾರ, ಆಹಾರ ಇಲಾಖೆಗಳನ್ನು ಹೊಂದಿದ್ದರು. ಅರಸು, ಗುಂಡೂರಾವ್‌, ವೀರೇಂದ್ರ ಪಾಟೀಲ್‌, ಬಂಗಾರಪ್ಪ ಸಂಪುಟದಲ್ಲಿ ವೀರಪ್ಪ ಮೊಯಿಲಿ ಸಚಿವರಾಗಿ ದ್ದರು. ಉಡುಪಿ ಕ್ಷೇತ್ರ ದಿಂದ ಆಯ್ಕೆಯಾದ ಮನೋರಮಾ ಮಧ್ವರಾಜ್‌, ಮಂಗಳೂರು ಕ್ಷೇತ್ರದ ಪಿ.ಎಫ್‌. ರಾಡ್ರಿಗಸ್‌ ಮತ್ತು ಬ್ಲೇಸಿಯಸ್‌ ಡಿ’ಸೋಜಾ, ಜನತಾದ ಆಳ್ವಿಕೆ ಸಂದರ್ಭ ಮೂಡಬಿದಿರೆಯಿಂದ ಕೆ. ಅಮರನಾಥ ಶೆಟ್ಟಿ, ಬ್ರಹ್ಮಾವರ
ದಿಂದ ಆಯ್ಕೆಯಾದ ಕೆ. ಜಯಪ್ರಕಾಶ್‌ ಹೆಗ್ಡೆ, ಸುರತ್ಕಲ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ. ಸುಬ್ಬಯ್ಯ ಶೆಟ್ಟಿ; ಜೆ. ಕೃಷ್ಣ ಪಾಲೆಮಾರ್‌ ಅವರು ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದವರು. 

2013ರಲ್ಲಿ ಸಿದ್ದರಾಮಯ್ಯ ಅವರ ಸರಕಾರದಿಂದ ಮೂಡಬಿದಿರೆಯಿಂದ ಕೆ. ಅಭಯಚಂದ್ರ ಜೈನ್‌, ಕಾಪು ಶಾಸಕ ವಿನಯಕುಮಾರ್‌ ಸೊರಕೆ ಸಚಿವರಾಗಿದ್ದರು. ಈಗ ಸರಕಾರದಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದ ಯು. ಟಿ. ಖಾದರ್‌, ಉಡುಪಿ ಕ್ಷೇತ್ರದ ಪ್ರಮೋದ್‌ ಮಧ್ವರಾಜ್‌ ಅವರು ಸಚಿವ ರಾಗಿದ್ದಾರೆ. ಬಂಟ್ವಾಳ ಕ್ಷೇತ್ರದಿಂದ ಒಂದು ಬಾರಿ ಬಿ. ನಾಗರಾಜ ಶೆಟ್ಟಿ ಸಚಿವರಾಗಿದ್ದರು.

ಬಂಟ್ವಾಳದಿಂದ ಆರು ಬಾರಿ ಆಯ್ಕೆಯಾಗಿರುವ ಬಿ. ರಮಾನಾಥ ರೈ ಅವರು ಮೊಯಿಲಿ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾದರು. ಈಗ ಸಿದ್ದರಾಮಯ್ಯ ಸರಕಾರದಲ್ಲಿ ಅರಣ್ಯ, ಪರಿಸರ ಇಲಾಖೆಯ ಸಚಿವರಾಗಿದ್ದಾರೆ. ಡಾ| ವಿ.ಎಸ್‌. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಬಿ.ಎ. ಮೊಯಿದಿನ್‌ ಅವರು ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭ ವಿಧಾನ ಪರಿಷತ್‌ ಸದಸ್ಯರಾಗಿದ್ದರು .

ಅಂದ ಹಾಗೆ …
ಡಾ| ಕೆ. ನಾಗಪ್ಪ ಆಳ್ವ ಮತ್ತು ಅವರ ಪುತ್ರ ಡಾ| ಜೀವರಾಜ ಆಳ್ವ ಅವರು ಸಚಿವರಾಗಿದ್ದರು. ನಾಗಪ್ಪ ಆಳ್ವ ಆಗಿನ ಪಾಣೆಮಂಗಳೂರಿನಿಂದ; ಜೀವರಾಜ ಆಳ್ವ ಬೆಂಗಳೂರಿನ ಜಯಮಹಲ್‌ನಿಂದ ಆಯ್ಕೆಯಾಗಿದ್ದರು. ಇಬ್ಬರೂ ವೈದ್ಯರು. ಉಡುಪಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮನೋರಮಾ ಮಧ್ವರಾಜ್‌ ಹಾಗೂ ಪುತ್ರ ಪ್ರಮೋದ್‌ ಮಧ್ವರಾಜ್‌ ಸಚಿವರಾಗಿರುವುದು ಜಿಲ್ಲೆಯ ಸಚಿವ ಕುಟುಂಬಕ್ಕೆ ಸಂಬಂಧಿಸಿದ ಇನ್ನೊಂದು ದೃಷ್ಟಾಂತ.

 ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

ಸಂಸದ ಜಗದೀಶ್ ಶೆಟ್ಟರ್

Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌: ಶೆಟ್ಟರ್

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.