ಚುನಾವಣೆ ಬಂತು ನೀರ್‌ ತಂತು!


Team Udayavani, Apr 11, 2018, 12:14 PM IST

chunavane.jpg

ಬೆಂಗಳೂರು: ಒಂದೆಡೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಜನಪ್ರತಿನಿಧಿಗಳ ನೀರಿನ ಟ್ಯಾಂಕರ್‌ ಬರುವುದು ನಿಂತು ಕುಡಿಯುವ ನೀರಿಗೆ ಬರ ಎದುರಾಗಿದ್ದರೆ, ಇನ್ನೊಂದೆಡೆ, ನಗರದ ಪಶ್ಚಿಮ ವಲಯದಲ್ಲಿ ಚಿತ್ರಣ ಕೊಂಚ ಬೇರೆಯೇ ಇದೆ. ಬೇಸಿಗೆ ಬಂದರೆ ನೀರಿಗೆ ಬರ ಎದುರಾಗಲಿದೆ ಎಂಬ ಜನರ ಆತಂಕ ಜನರ ಮರೆಯಾಗಿ, ನಿರಾಳರಾಗಿದ್ದಾರೆ. ಇದಕ್ಕೆ ಕಾರಣ ವಿಧಾನಸಭಾ ಚುನಾವಣೆ!

ಈ ಮೊದಲು ದಾರದಂತೆ ಬರುತ್ತಿದ್ದ ಕಾವೇರಿ ನೀರು, ಈಗ ರಭಸವಾಗಿ ಚಿಮ್ಮುತ್ತಿದೆ. ನೀರಿನ ಕೊರತೆ ಆಗಬಹುದಾದ ಕಡೆಗಳಲ್ಲಿ ಬೋರ್‌ವೆಲ್‌ ಕೊರೆಯಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳೂ ಸಿದ್ಧವಾಗಿವೆ. ಮೇ ಅಂತ್ಯದವರೆಗೂ (ಚುನಾವಣೆ ಹಿನ್ನೆಲೆ) ಈ ಸ್ಥಿತಿಯಲ್ಲಿ ವ್ಯತ್ಯಾಸ ಆಗದು ಎಂಬ ವಿರ್ಶವಾಸ ಜನರದ್ದು. ಹಾಗಾಗಿ, “ಬೇಸಿಗೆ ಭಯ’ ದೂರಾಗಿದೆ. ಹೌದು, ಸಾಮಾನ್ಯವಾಗಿ ಪ್ರತಿ ಬೇಸಿಗೆಯಲ್ಲಿ ಎದುರಾಗುವ ನೀರಿನ ಬರದ ಆತಂಕವನ್ನು ಚುನಾವಣೆ ಕಾವು ದೂರ ಮಾಡಿದೆ.

ಕಳೆದ ಹತ್ತು ದಿನಗಳಲ್ಲಿ ಈ ವಲಯದ ನೀರು ಪೂರೈಕೆ ವೈಖರಿ ಬದಲಾಗಿದೆ ಎಂದು ದಕ್ಷಿಣ ವಲಯದ ಗೋವಿಂದರಾಜನಗರ ವಾರ್ಡ್‌ ನಿವಾಸಿಗಳು ಹೇಳುತ್ತಾರೆ. “ವಾರದಿಂದೀಚೆಗೆ ನೀರಿನ ಪೂರೈಕೆ ಚಿತ್ರಣವೇ ಬದಲಾಗಿದೆ. ಈ ಮೊದಲೂ ಎಂದಿನಂತೆ ವಾಲ್‌ ತಿರುಗಿಸಿ ಬರುತ್ತಿದ್ದೆವು. ಆದರೆ,  ಬೈಗುಳಗಳು ತಪ್ಪುತ್ತಿರಲಿಲ್ಲ. ಹತ್ತು ದಿನಗಳಿಂದ ಬೈಗುಳಗಳು ತಪ್ಪಿವೆ. ಯಾಕೆ ಅಂತಾ ನೀವೇ ಊಹಿಸಿ’ ಎನ್ನುತ್ತಲೇ ವಿಜಯನಗರದ ವಾಲ್‌ವುನ್‌ ಒಬ್ಬರು ನೀರಿನ ಸ್ಥಿತಿಗತಿಯನ್ನು ಸೂಚ್ಯವಾಗಿ ಬಿಡಿಸಿಟ್ಟರು.

“ಕಳೆದ ಬೇಸಿಗೆಯಲ್ಲಿ ತುಂಬಾ ಸಮಸ್ಯೆ ಇತ್ತು. ಆದರೆ, ಈ ಸಲ ಅಂತಹ ಸಮಸ್ಯೆ ಉದ್ಭವಿಸದು ಎಂಬ ಭರವಸೆ ಇದೆ. ಯಾಕೆಂದರೆ ಬೇಸಿಗೆ ಶುರುವಾಗಿದ್ದರೂ ಎರಡು ದಿನಕ್ಕೊಮ್ಮೆ ತಪ್ಪದೇ ಕಾವೇರಿ ನೀರು ಬರುತ್ತಿದೆ. ಒಮ್ಮೆಯೂ ವ್ಯತ್ಯಯ ಆಗಿಲ್ಲ. ಈ ನೀರನ್ನೇ ಹಿಡಿದಿಟ್ಟರೆ ನಮಗೆ ಸಾಕಷ್ಟಾಗುತ್ತದೆ,’ ಎಂದು ಗೋವಿಂದರಾಜನಗರ ವಾರ್ಡ್‌ನ ಕೊಳಚೆಪ್ರದೇಶದ ನಿವಾಸಿ ನಸ್ರಿನ್‌ ತಾಜ್‌ ತಿಳಿಸುತ್ತಾರೆ. 

ಸಮಸ್ಯೆ ಆಗದು- ಅಧಿಕಾರಿ: 44 ವಾರ್ಡ್‌ಗಳನ್ನು ಹೊಂದಿರುವ ಪಶ್ಚಿಮ ವಲಯದಲ್ಲಿ ಅಂದಾಜು 21 ಲಕ್ಷ ಜನಸಂಖ್ಯೆ ಇದೆ. ಬಹುತೇಕ ಎಲ್ಲೆಡೆ ಕಾವೇರಿ ಮತ್ತು ಕೊಳವೆಬಾವಿಗಳೇ ನೀರಿನ ಮೂಲ. ಸಾಮಾನ್ಯವಾಗಿ ಹಾಹಾಕಾರ ಕೇಳಿಬರುವುದು ಗೋವಿಂದರಾಜನಗರ ವಾರ್ಡ್‌ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ, ಅಲ್ಲಿಯೂ ಈಬಾರಿ ಅಗತ್ಯ ಕ್ರಿಯಾಯೋಜನೆಗಳನ್ನು ರೂಪಿಸಿ, ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ

ಎಂದು ಬಿಬಿಎಂಪಿ ಪಶ್ಚಿಮ ವಲಯದ ಉನ್ನತ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಬೆಂಗಳೂರು ಬಹುಭಾಗ ಕಾವೇರಿ ನೀರನ್ನು ಅವಲಂಬಿಸಿದೆ. ಇದಕ್ಕೆ ಪೂರಕವಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಮರ್ಪಕ ನೀರು ಸಂಗ್ರಹವಾಗಿದೆ. ಜತೆಗೆ ಈ ಬಾರಿ ಅವಧಿಗಿಂತ ಮುಂಚಿತವಾಗಿಯೇ ಮಳೆ ಶುವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸದು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ. 

ಸಮಸ್ಯೆ ಇತ್ತು; ಆದರೆ ಈಗಿಲ್ಲ: “ಕುಡಿಯುವ ಉದ್ದೇಶಕ್ಕೆ ಕಾವೇರಿ ನೀರು ಸಿಗುತ್ತಿತ್ತು. ಬಳಸಲು ಸಾಕಾಗುವಷ್ಟು ನೀರು ಪೂರೈಕೆ ಆಗುತ್ತಿರಲಿಲ್ಲ. ಇದನ್ನು ನೀಗಿಸಲು ಕೊರತೆ ಇರುವ ಕಡೆಗಳಲ್ಲಿ ಪಾಲಿಕೆ ಅಥವಾ ಜಲಮಂಡಳಿಯವರು ಕೊಳವೆಬಾವಿ ಕೊರೆಸುತ್ತಿದ್ದಾರೆ. ನಮ್ಮ ಏರಿಯಾ (ಗೋವಿಂದರಾಜ ಸ್ವಾಮಿ ತುಳಜಮ್ಮ ದೇವಸ್ಥಾನ ಬಳಿ)ದಲ್ಲೂ ಬಳಸುವ ನೀರಿಗಾಗಿ ಕೊಳವೆಬಾವಿ ಕೊರೆಯಲಾಗಿದೆ,’ ಎಂದು ಸ್ಥಳೀಯ ನಿವಾಸಿ ಪರಮೇಶಿ ಹೇಳಿದರು.

ಕೊಳಾಯಿ ಸಂಪರ್ಕವಿದೆ; ಆದ್ರೆ ನೀರಿಲ್ಲ!: ಗೋವಿಂದರಾಜನಗರ ವಾರ್ಡ್‌ನ ಬಡಾವಣೆಗಳಲ್ಲಿ ನೀರಿಗೆ ತೊಂದರೆಯಿಲ್ಲ. ಆದರೆ ಕೊಳೆಗೇರಿಯಲ್ಲಿ ಹನಿ ನೀರಿಗೂ ಪರದಾಟವಿದೆ. ಕೊಳವೆಬಾವಿ ನೀರು ಪೂರೈಕೆಗಾಗಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಅದರಲ್ಲಿಂದ ಇದುವರೆಗೆ ಒಂದೇ ಒಂದು ಹನಿ ನೀರು ಬಂದಿಲ್ಲ. ಈ ಸ್ಲಂನಲ್ಲಿ ಸುಮಾರು 300 ಮನೆಗಳಿವೆ.

ನಾಲ್ಕು ತಿಂಗಳ ಹಿಂದೆ ಕಾಂಕ್ರೀಟ್‌ ರಸ್ತೆ ನಿರ್ಮಿಸುವಾಗ ಕೊಳವೆಬಾವಿ ನೀರಿನ ಸಂಪರ್ಕಗಳನ್ನು ಮುಚ್ಚಲಾಯಿತು. ನಂತರ ತಲಾ ಎರಡು ಮನೆಗಳಿಗೆ ಒಂದರಂತೆ ಹೊಸ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಇದುವರೆಗೆ ನೀರು ಬಂದಿಲ್ಲ ಎಂದು ಸ್ಥಳೀಯರು ದೂರಿದರು. ಅಲ್ಲದೆ, ಎರಡು ದಿನಗಳಿಗೊಮ್ಮೆ ರಾತ್ರಿ ನೀರು ಪೂರೈಸುತ್ತಿದ್ದು, ನೀರು ಹಿಡಯಲು ಜಾಗರಣೆ ಮಾಡಬೇಕು. ಆದರೆ, ಇದು ಅನಿವರ್ಯ ಎಂದು ಕೆಲವರು ಅಲವತ್ತುಕೊಂಡರು.

ನೀರಿನ ಪ್ರಾಬ್ಲಿಂ ನಮಗೆ ತಿಳಿಸಿ: ನಿಮ್ಮ ಏರಿಯಾದಲ್ಲೂ ನೀರಿಗೆ ಬರವೇ? ಜಲಮಂಡಳಿ ಕೊಳಾಯಿಗಳಲ್ಲಿ ನೀರು ಬರುತ್ತಿಲ್ಲವೇ? ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುತ್ತಿದ್ದೀರಾ? ಟ್ಯಾಂಕರ್‌ನವರು ಸುಲಿಗೆ ಮಾಡುತ್ತಿದ್ದಾರಾ? ನಿಮ್ಮ ಉತ್ತರ ಹೌದು ಎಂದಾಗಿದ್ದರೆ ಕೂಡಲೇ ನಿಮ್ಮೇರಿಯಾದಲ್ಲಿನ ನೀರಿನ ಸಮಸ್ಯೆ ಕುರಿತು “ಉದಯವಾಣಿ’ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಚಿತ್ರ ಸಹಿತ ಮಾಹಿತಿ ಕಳಿಸಿ.

ವಾಟ್ಸ್‌ಆ್ಯಪ್‌ ಸಂಖ್ಯೆ: 88611 96369

* ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Tejasvi

Govt. Bungalow: ತೇಜಸ್ವಿ ಯಾದವ್ ತೆರವುಗೈದ ಸರಕಾರಿ ಬಂಗಲೆಯಲ್ಲಿ ಸೋಫಾ, ಎಸಿ ನಾಪತ್ತೆ!

1-dd-abbb

Dipa Karmakar; 31 ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಜಿಮ್ನಾಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

1-chir

Video viral; ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಬಸ್‌ಗೆ ನುಗ್ಗಲು ಮುಂದಾದ ಚಿರತೆ!

City Police Commissioner: ರಾತ್ರಿ ನಡೆಯುವ ಅಪರಾಧಗಳ ಮಾಹಿತಿ ನೀಡುವುದು ಕಡ್ಡಾಯ

City Police Commissioner: ರಾತ್ರಿ ನಡೆಯುವ ಅಪರಾಧಗಳ ಮಾಹಿತಿ ನೀಡುವುದು ಕಡ್ಡಾಯ

Bengaluru: ಅಂಚೆ ಕಚೇರಿಯಲ್ಲಿ ಮಾದಕ ವಸ್ತು ತುಂಬಿದ್ದ 626 ವಿದೇಶಿ ಪಾರ್ಸೆಲ್‌!

Bengaluru: ಅಂಚೆ ಕಚೇರಿಯಲ್ಲಿ ಮಾದಕ ವಸ್ತು ತುಂಬಿದ್ದ 626 ವಿದೇಶಿ ಪಾರ್ಸೆಲ್‌!

BBMP: ಇನ್ಮುಂದೆ ಸಿಗರೇಟ್‌ ತುಂಡುಗಳ ಪ್ರತ್ಯೇಕ ಸಂಗ್ರಹ

BBMP: ಇನ್ಮುಂದೆ ಸಿಗರೇಟ್‌ ತುಂಡುಗಳ ಪ್ರತ್ಯೇಕ ಸಂಗ್ರಹ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

1-gk

Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.